ಕೇಂದ್ರ ಸರ್ಕಾರದ ಹೊಸ ಅಗ್ನೀಪಥ ಯೋಜನೆಯನ್ನು ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆಗಳು ಆರಂಭವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ/ಸರ್ಕಾರಿ ಆಸ್ತಿ ನಾಶ ಮಾಡಿದ ಗಲಭೆಕೋರರಿಂದ ನಷ್ಟವನ್ನು ವಸೂಲಿ ಮಾಡುವುದಾಗಿ ಯು.ಪಿ ಸರ್ಕಾರ ಹೇಳಿದೆ.
ಕೇಂದ್ರದ ಹೊಸ ಸೇನಾ ನೇಮಕಾತಿ ಯೋಜನೆ ಹೊರಬಂದ ತಕ್ಷಣ, ಪ್ರತಿಭಟನೆ ಶುರುವಾಯಿತು. ಆ ಸಂದರ್ಭದಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಕೆಲವರು ಬಸ್ಸು, ರೈಲು ಹಾಗು ಇನ್ನಿತರ ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಯನ್ನು ಬೆಂಕಿ ಹಚ್ಚಿ ನಾಶ ಮಾಡಿದರು, ಅದಕ್ಕೆ ಉತ್ತರ ಪ್ರದೇಶ ರಾಜ್ಯ ಸರ್ಕಾರವು ಹಾನಿ ಮಾಡಿದವರಿಂದ ನಮ್ಮ ನಷ್ಟವನ್ನು ಮರುಪಡೆಯುತ್ತೇವೆ ಹಾಗೂ ಅವರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳುತ್ತೇವೆ ಎಂದು ಹೇಳಿದೆ.
ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿರುವ ಜನರಿಂದ ನಮ್ಮ ನಷ್ಟವನ್ನು ವಸೂಲಿ ಮಾಡುವುದಾಗಿ ಅಡಿಷನಲ್ ಡೈರೆಕ್ಟರ್ ಜನರಲ್ (ಲಾ ಅಂಡ್ ಆರ್ಡರ್ ) ಪ್ರಶಾಂತ್ ಕುಮಾರ್ ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಸೇನಾ ನೇಮಕಾತಿಯ ಹೊಸ ಸ್ಕೀಮ್ ತಂದ ತಕ್ಷಣ ಉತ್ತರ ಪ್ರದೇಶದ 14 ಜಿಲ್ಲೆಗಳಲ್ಲಿ, ಪ್ರತಿಭಟನೆ ಶುರುವಾಯಿತು. ಆ ಸಂದರ್ಭದಲ್ಲಿ ಯುವ ಪ್ರತಿಭಟನಾಕಾರರು, ಆಕ್ರೋಶದಲ್ಲಿ ಬಸ್ಸು ಹಾಗು ಇನ್ನಿತರ ವಾಹನಗಳಿಗೆ ಬೆಂಕಿ ಹಚ್ಚಿದರು, ರೈಲುಗಳನ್ನು ನಾಶಮಾಡಲು ಯತ್ನಿಸಿದರು.
ಅಲ್ಲದೆ ಹಲವೆಡೆ ಟೈರುಗಳಿಗೆ ಬೆಂಕಿ ಹಚ್ಚಿದರು, ಸರ್ಕಾರಿ ಹಾಗು ಕೆಲವು ಸಾರ್ವಾಜನಿಕ ಆಸ್ತಿಯನ್ನು ಬೆಂಕಿ ಹಚ್ಚುವ ಹಾಗು ಕಲ್ಲು ತೂರುವ ಮೂಲಕ ನಾಶ ಮಾಡಿದರು. ಇದರಿಂದ ಸಾಮಾನ್ಯ ಜನರಿಗೆ ಹಾಗು ಸಮಾಜದ ವ್ಯವಸ್ಥೆಗೆ ತೊಂದರೆ ಉಂಟಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಇಲ್ಲಿಯ ವರೆಗೂ ಈ ಪ್ರಕರಣದ ಮೇಲೆ ಸುಮಾರು 49 ಎಫ್.ಐ.ಆರ್ ಗಳನ್ನೂ ದಾಖಲಿಸಿದ್ದು 525 ಜನ ಪ್ರತಿಭಟನಾಯಕಾರರನ್ನು ಬಂಧಿಸಿದ್ದಾರೆ. 145 ಸೆಕ್ಷನ್ ಅಡಿಯಲ್ಲಿ ಶಾಂತಿ ಕದಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ