ಬುಲ್ಡೋಜರ್ಗಳಿಂದ ಮನೆ ನೆಲಸಮ ಮಾಡುವ ಮೂಲಕ ಉತ್ತರ ಪ್ರದೇಶದ ಆಡಳಿತ ಸಂವಿಧಾನದ ಅಪಹಾಸ್ಯ ಮಾಡಲಾಗುತ್ತಿದೆ ಎಂದು ಮೂವರು ಸುಪ್ರಿಂ ಕೋರ್ಟ್ನ ಮಾಜಿ ನ್ಯಾಯಾಧೀಶರು ಸೇರಿದಂತೆ 12 ಜನ ಸುಪ್ರಿಂ ಕೋರ್ಟ್ಗೆ ಪತ್ರ ಬರೆದಿದ್ದಾರೆ.
ಜೊತೆಗೆ ಸರ್ವೋಚ್ಚ ನ್ಯಾಯಾಲಯ ಕೂಡಲೇ ಮಧ್ಯಪ್ರವೇಶಿಸಿ ಸುಮೋಟೊ ಕೇಸ್ ದಾಖಲಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಸುಪ್ರಿಂನ ಮಾಜಿ ನ್ಯಾಯಾಧೀಶರಾದ ಬಿ.ಸುದರ್ಶನ್ ರೆಡ್ಡಿ, ವಿ ಗೋಪಾಲ ಗೌಡ ಮತ್ತು ಎ.ಕೆ ಗಂಗೂಲಿ ಸೇರಿದಂತೆ ಮೂವರು ಹೈಕೋರ್ಟ್ನ ಮಾಜಿ ನ್ಯಾಯಾಧೀಶರು ಹಾಗು 6 ಜನ ವಕೀಲರು ಈ ಪತ್ರಕ್ಕೆ ಸಹಿ ಮಾಡಿದ್ದಾರೆ.