Friday, February 6, 2026
Friday, February 6, 2026

ಉಕ್ರೇನ್-ರಷ್ಯ ಯುದ್ಧವನ್ನ ಭಾರತ ದೂರದಿಂದ ನಿಂತು ನೋಡುತ್ತಿಲ್ಲ-ಜೈಶಂಕರ್

Date:

ರಷ್ಯಾ ,ಉಕ್ರೇನ್‌ ನಡುವಿನ ಯುದ್ಧದ ವಿಚಾರದಲ್ಲಿ ಭಾರತ ತಳೆದಿರುವ ತಟಸ್ಥ ನಿಲುವಿನ ಬಗ್ಗೆ ಐರೋಪ್ಯ ರಾಷ್ಟ್ರಗಳು ಟೀಕೆ ಮಾಡುತ್ತಿವೆ. ಈ ವಿಚಾರಕ್ಕೆ ಭಾರತದ ವಿದೇಶಾಂಗ ಸಚಿವ ಎಸ್‌. ಜೈ ಶಂಕರ್‌ ಅವರು ತಿರುಗೇಟು ನೀಡಿದ್ದಾರೆ.

ಗ್ಲೋಬ್‌ಸೆಕ್‌ 2022 ಬ್ರಟಿಸ್ಲಾವಾ ಫೋರಂನಲ್ಲಿ ಮಾತನಾಡಿದ ಅವರು, ಯೂರೋಪ್‌ನ ಸಮಸ್ಯೆಗಳು ಇಡೀ ವಿಶ್ವದ ಸಮಸ್ಯೆಗಳು ಎಂಬಂತೆ ಬಿಂಬಿಸುವುದನ್ನು ಮೊದಲು ಬಿಡಿ ಎಂದು ಸಚಿವ ಎಸ್. ಜೈ. ಶಂಕರ್ ಅವರು ಹೇಳಿದ್ದಾರೆ.

ರಷ್ಯಾ, ಉಕ್ರೇನ್‌ ಯುದ್ಧದಲ್ಲಿ ಭಾರತ ದೂರದಲ್ಲಿ ನಿಂತು ನೋಡುತ್ತಿಲ್ಲ. ನಮ್ಮ ನಿಲುವು ಈ ವಿಚಾರದಲ್ಲಿ ತಟಸ್ಥವಾಗಿದೆಯಷ್ಟೇ ಎಂದು ಸ್ಪಷ್ಟ ಪಡಿಸಿದ್ದಾರೆ.

ರಷ್ಯಾದಿಂದ ನಾವು ತೈಲ ಖರೀದಿಸಿದರೆ, ಅದರಿಂದ ಬರುವ ಹಣವನ್ನು ರಷ್ಯಾ ಯುದ್ಧಕ್ಕೆ ಬಳಸುತ್ತದೆಂಬ ಆಪಾದನೆ ಭಾರತದ ಮೇಲಿದೆ. ಆದರೆ, ಐರೋಪ್ಯ ರಾಷ್ಟ್ರಗಳು ರಷ್ಯಾದ ಅಡುಗೆ ಅನಿಲ ಖರೀದಿಸುತ್ತಿಲ್ಲವೇ, ಅದರಿಂದ ಬಂದ ಹಣವು ಯುದ್ಧಕ್ಕೆ ಉಪಯೋಗವಾಗುವುದಿಲ್ಲವೇ ಎಂದು ಜೈ ಶಂಕರ್ ಅವರು ಹೇಳಿದ್ದಾರೆ.

ನಾವು ತೈಲ ಖರೀದಿಸುತ್ತಿರುವುದು ಅದು ಅಗ್ಗದ ದರಕ್ಕೆ ಸಿಗುತ್ತಿದೆ ಎಂಬ ಕಾರಣಕ್ಕೆ. ನಮ್ಮ ಜನರಿಗೆ ಅದರಿಂದ ಒಳಿತಾಗುತ್ತದೆ ಎಂಬ ದೃಷ್ಟಿಯಿಂದ ನಾವು ತೈಲ ಖರೀದಿಸುತ್ತಿದ್ದೇವೆ ಎಂದು ಜೈ ಶಂಕರ್ ಸ್ಪಷ್ಟವಾಗಿ ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...