ಇಂದು ಮಾನ್ಯ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರು ಹೊಸನಗರ ತಾಲೂಕು ನಗರ ಕೋಟೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ “ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ”ವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭಕ್ಕೂ ಮುನ್ನ ನಗರದ ಪ್ರಮುಖ ಮಾರ್ಗಗಳಲ್ಲಿ ಅತಿಥಿಗಳನ್ನು ಜನಪದ ವಾದನಗಳ ಮೆರವಣಗೆಯಲ್ಲಿ ಕರೆತರಲಾಯಿತು.
ಐತಿಹಾಸಿಕ ಬಿದನೂರಿನ ಕೋಟೆಯ ಹೃದಯಭಾಗದಲ್ಲೇ ಸಮಾರಂಭ ನಡೆಯಿತು.
ನಮ್ಮಲ್ಲಿ ಒಂದೇ ಒಂದು ಕೊರತೆಯಿದೆ . ಅದೇನೆಂದರೆ ಪ್ರಾಮಾಣಿಕತೆ. ನಮ್ಮ ದೇಶದಲ್ಲಿ ಭ್ರಷ್ಟಾಚಾರ ಇಲ್ಲದಿದ್ದರೆ ನಾವು ಅಮೆರಿಕಕ್ಕೇ ಸಾಲ ನೀಡಬಹುದಿತ್ತು. ಆದರೆ ಪ್ರಾಮಾಣಿಕತೆಯ ಕೊರತೆಯಿಂದಾಗಿ ಯಾರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ನಾವೆಲ್ಲರೂ ಪ್ರಾಮಾಣಿಕತೆಯಿಂದ ರೂಢಿಸಿಕೊಳ್ಳಬೇಕಿರುವುದು ಅಗತ್ಯವಾಗಿದೆ ಎಂದರು.