ಅತ್ಯುತ್ತಮ ವಿಧಾನಪರಿಷತ್ತು/ವಿಧಾನಸಭೆ ಪ್ರಶಸ್ತಿಗೆ ಮಾನದಂಡಗಳನ್ನು ಸೂಚಿಸುವ ಪೀಠಾಸೇನಾಧಿಕಾರಿಗಳ ಸಮಿತಿಯ ಅಧ್ಯಕ್ಷರನ್ನಾಗಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ನೇಮಕ ಮಾಡಲಾಗಿದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಈ ಸಮಿತಿ ರಚಿಸಿ ವಿಶ್ವೇಶ್ವರ ಹೆಗಡೆ ಕಾಗೇರಿಯವನ್ನ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ದೆಹಲಿ ವಿಧಾನಸಭೆಯ ಸಭಾಧ್ಯಕ್ಷ ರಾಮ ನಿವಾಸ್ ಗೋಯಲ್, ಮಹಾರಾಷ್ಟ್ರ ವಿಧಾನಪರಿಷತ್ತಿನ ಸಭಾಪತಿ ರಾಮರಾಜೆ ಪ್ರಥಾಪ್ಸಿಂಗ್ ನಾಯಕ್ ನಿಂಬಾಳ್ಕರ್, ಬಿಹಾರ ವಿಧಾನಸಭೆಯ ಸಭಾಧ್ಯಕ್ಷ ವಿಜಯ ಕುಮಾರ್ ಸಿನ್ಹ, ಅಸ್ಸಾಂ ವಿಧಾನಸಭೆಯ ಸಭಾಧ್ಯಕ್ಷ ಬಿಶ್ವಜಿತ್ ಡೈಮರಿ, ಗುಜರಾತ್ ವಿಧಾನಸಭೆಯ ಸಭಾಧ್ಯಕ್ಷೆ ಡಾ. ನಿಮಾಬೆನ್ ಆಚಾರ್ಯ, ತಮಿಳುನಾಡು ವಿದಾನಸಭೆಯ ಸಭಾಧ್ಯಕ್ಷ ಎಂ. ಅಪ್ಪಾವು ಸಮಿತಿ ಸದಸ್ಯರಾಗಿದ್ದಾರೆ…