Wednesday, December 17, 2025
Wednesday, December 17, 2025

ಹಣವಂತ ಪ್ರಾದೇಶಿಕ ರಾಜಕೀಯ ಪಕ್ಷಗಳಲ್ಲಿ ಡಿಎಂಕೆ ಅಗ್ರಸ್ಥಾನ

Date:

ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ಪಕ್ಷ 31 ಪ್ರಾದೇಶಿಕ ಪಕ್ಷಗಳ 2020-21ನೇ ಸಾಲಿನ ಆದಾಯ ಮತ್ತು ಖರ್ಚಿನಲ್ಲಿ ಅಗ್ರಸ್ಥಾನದಲ್ಲಿದೆ ಎನ್ನುವುದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ್ ನಿನ್ನೆ ಶುಕ್ರವಾರ ಬಹಿರಂಗಪಡಿಸಿದೆ.

ಸ್ಟಾಲಿನ್ ನೇತೃತ್ವದ ಪಕ್ಷ 150 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದರ ವೆಚ್ಚ 218 ಕೋಟಿ ರೂಪಾಯಿಗಳು. ಡಿಎಂಕೆ ಆದಾಯ ಏರಿಕೆ ಇತರ ಪಕ್ಷಗಳಿಗಿಂತ ಅಧಿಕವಾಗಿದೆ. ಈ ಪಕ್ಷದ ಆದಾಯ 85 ಕೋಟಿ ರೂಪಾಯಿ ಹೆಚ್ಚಿದೆ. ಉಳಿದಂತೆ ಜೆಡಿಎಸ್ ಮತ್ತು ವೈಎಸ್‍ಆರ್ ಕಾಂಗ್ರೆಸ್ ನಂತರದ ಸ್ಥಾನಗಳಲ್ಲಿವೆ.

ದೇಶದ 31 ಪ್ರಾದೇಶಿಕ ಪಕ್ಷಗಳ ಪಟ್ಟು ಆದಾಯ 2021ನೇ ಹಣಕಾಸು ವರ್ಷದಲ್ಲಿ 529 ಕೋಟಿ ಆಗಿದೆ. ಡಿಎಂಕೆ ಈ ಪೈಕಿ ಸಿಂಹಪಾಲು ಹೊಂದಿದೆ. ಪಕ್ಷದ ಆದಾಯ ಒಟ್ಟು ಆದಾಯದ ಶೇ. 28ರಷ್ಟಾಗಿದೆ. ವೈಎಸ್‍ಆರ್ ಕಾಂಗ್ರೆಸ್ 108 ಕೋಟಿ ರೂಪಾಯಿ ಆದಾಯ ಹೊಂದಿದೆ. ಇದರ ಪಾಲು ಶೇ.20ರಷ್ಟು ಮತ್ತು ಶೇ. 13ರಷ್ಟು ಅಥವಾ 73 ಕೋಟಿ ಆದಾಯ ಹೊಂದಿದ ಬಿಜೆಡಿ 3ನೇ ಸ್ಥಾನದಲ್ಲಿದೆ.

ಎಲೆಕ್ಟೊರಲ್ ಬಾಂಡ್ ಮೂಲಕ 2020-21ನೇ ಅವಧಿಯಲ್ಲಿ 250.60 ಕೋಟಿ ರೂಪಾಯಿ ದೇಣಿಗೆಯನ್ನು ಸ್ವೀಕರಿಸಿರುವುದಾಗಿ ಪ್ರಾದೇಶಿಕ ಪಕ್ಷಗಳು ಘೋಷಿಸಿವೆ.

5 ಪ್ರಾದೇಶಿಕ ಪಕ್ಷಗಳು ಗರಿಷ್ಠ ವೆಚ್ಚವನ್ನೂ ಮಾಡಿದೆ. ಡಿಎಂಕೆ 218.49 ಕೋಟಿ ರೂಪಾಯಿ, ತೆಲುಗುದೇಶಂ ಪಕ್ಷ ರೂ. 54.769 ಕೋಟಿ, ಎಐಎಡಿಎಂಕೆ ರೂ. 42.37 ಕೋಟಿ, ಜೆಡಿಯು 24.35 ಕೋಟಿ ಹಾಗೂ ಟಿಆರ್‍ಎಸ್ 22.35 ಕೋಟಿ ಪಾಲು ಒಟ್ಟು ಖರ್ಚಿನ ಶೇಕಡ 82ರಷ್ಟಾಗಿವೆ ಎಂದು ವರದಿಯಿಂದ ತಿಳಿದು ಬಂದಿದೆ.

ವೈಎಸ್‍ಆರ್ ಕಾಂಗ್ರೆಸ್‍ನಲ್ಲಿ ಗರಿಷ್ಠ 99%ಖರ್ಚಾಗದ ಹಣ ಇದ್ದು, ಬಿಜೆಡಿ 90%, ಎಐಎಂಐಎಂ 88% ನಂತರದ ಸ್ಥಾನಗಳಲ್ಲಿವೆ. ಟಿಡಿಪಿ 51 ಕೋಟಿ ರೂಪಾಯಿ ಖರ್ಚು ಮಾಡಿದ್ದರೆ, ಟಿಆರ್‍ಎಸ್ 22 ಕೋಟಿ ವೆಚ್ಚ ಮಾಡಿದ್ದಾಗಿ ಹೇಳಿವೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...