2021-22ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿರುವ ಶಿವಮೊಗ್ಗ ತಾಲ್ಲೂಕಿನ ಹೆಮ್ಮೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಗಾಗಿ ವಿದ್ಯಾರ್ಥಿಗಳನ್ನು, ಪೋಷಕರನ್ನು, ಶಾಲಾ ಶಿಕ್ಷಕರನ್ನು, ಆಡಳಿತ ಮಂಡಳಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.
ಅಶೋಕನಗರ ಅನನ್ಯ, ಪ್ರೌಢಶಾಲೆಯ ಅನನ್ಯ ಹೆಚ್ ಎನ್. ಮತ್ತು ಪಂಚಮಿ ಸಿ., ಶರಾವತಿನಗರದ ಶ್ರೀ ಆದಿಚುಂಚನಗಿರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಪಂಚಮಿ ಆರ್., ಗೋಪಾಳದ ಶ್ರೀ ರಾಮಕೃಷ್ಣ ಆಂಗ್ಲ ಪ್ರೌಢಶಾಲೆಯ ಭೂಮಿಕ ಸಿ.ಆರ್. ಹಾಗೂ ಆಲ್ಕೋಳದ ವಿಕಾಸ ಪ್ರೌಢಶಾಲೆಯ ಪ್ರಜ್ಞಾ ಹೆಚ್.ಎಸ್. ಅವರು ಈ ಸಾಧನೆಗೈದಿದ್ದಾರೆ.