ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ವೇಗಿ ಸ್ಯಾಮ್ಸ್ ಕೊಟ್ಟ ಪೆಟ್ಟಿಗೆ ನಲುಗಿದ ಹಾಲಿ ಚಾಂಪಿಯನ್ ಚೆನ್ನೈ ತಂಡವು 16 ಓವರ್ ಗಳಲ್ಲಿ 97 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.
ನಾಯಕ ಮಹೇಂದ್ರ ಸಿಂಗ್ ಧೋನಿ ತೋರಿದ ಛಲದಿಂದಾಗಿ ಒಂದಿಷ್ಟು ರನ್ ಗಳು ತಂಡದ ಮೊತ್ತ ಸೇರಿದವು. ಆದರೆ ಉಳಿದ ಬ್ಯಾಟರ್ ಗಳು ಛಲದ ಆಟ ತೋರದ ಕಾರಣ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಮುಂಬೈ ತಂಡದ ಬೌಲರ್ ಕುಮಾರ್ ಕಾರ್ತಿಕೇಯ ಮತ್ತು ರೀಲಿ ಮೆರೆಡಿತ್ ತಲಾ 2 ವಿಕೆಟ್ ಗಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡವು 16 ಓವರ್ ಗಳಲ್ಲಿ 97 ರನ್ ಗಳಿಸಿತು. ಇದರಂತೆ ಮುಂಬೈ ತಂಡವು 14.5 ಓವರ್ ಗಳಲ್ಲಿ 5ಕ್ಕೆ 103 ರನ್ ಗಳಿಸಿತು.
ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿಯೇ ಡೆವೊನ್ ಕಾನ್ವೆ ಮತ್ತು ಮೋಯಿನ್ ಅಲಿ ವಿಕೆಟ್ ಗಳಿಸಿದ ಸಾಮ್ಸ್ ಮುಂಬೈ ತಂಡಕ್ಕೆ ಅಮೋಘ ಆರಂಭ ನೀಡಿದ್ದರು