Wednesday, February 4, 2026
Wednesday, February 4, 2026

ಶಿವಮೊಗ್ಗ ಹಿರಿಯ ಹುಲಿ ‘ರಾಮ’ ಇನ್ನಿಲ್ಲ

Date:

ಶಿವಮೊಗ್ಗ ಸಮೀಪದಲ್ಲಿರುವ ತ್ಯಾವರೆಕೊಪ್ಪ ‘ಲಯನ್ ಸಫಾರಿ’ ಪ್ರಮುಖ ಪ್ರವಾಸಿ ಕೇಂದ್ರಗಳ ಪೈಕಿ ಪ್ರಮುಖವಾಗಿದೆ.

ಶಿವಮೊಗ್ಗ ಕೇಂದ್ರ ಸ್ಥಾನದಿಂದ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿ ಲಯನ್ ಸಫಾರಿ ಇದೆ. ಇಲ್ಲಿ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಇಲ್ಲಿರುವ ಹುಲಿ, ಸಿಂಹಗಳು ಪ್ರಮುಖ ಆಕರ್ಷಣೆಯಾಗಿದ್ದು, ಅರಣ್ಯ ಇಲಾಖೆ ವಾಹನಗಳಲ್ಲಿ ಪ್ರವಾಸಿಗರನ್ನು ಕರೆದೊಯ್ದು ಇವುಗಳನ್ನು ತೋರಿಸಲಾಗುತ್ತದೆ.

ಈ ಪೈಕಿ ಹಿರಿಯ ಹುಲಿ ‘ರಾಮ’ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಆದರೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 17 ವರ್ಷದ ‘ರಾಮ’ ಎಂಬ ಹುಲಿ ಸಾವನ್ನಪ್ಪಿದೆ.

ಇದರಿಂದಾಗಿ ಈಗ ಸಫಾರಿಯಲ್ಲಿ ಕೇವಲ ಐದು ಹುಲಿಗಳು ಉಳಿದುಕೊಂಡಂತಾಗಿದೆ. ಈ ಹಿಂದೆ ಮತ್ತೊಂದು ಹಿರಿಯ ಹುಲಿ ‘ವಾಲಿ’ ಅನಾರೋಗ್ಯದಿಂದಾಗಿ ಸಾವನ್ನಪ್ಪಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...