ಅಜಾನ್ ವಿರುದ್ಧ ಸುಪ್ರಭಾತ ವಿವಾದಕ್ಕೆ ಸಂಬಂಧಿಸಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದಾರೆ. ಧ್ವನಿವರ್ಧಕಗಳ ಕುರಿತು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಕರ್ನಾಟಕ ಸರ್ಕಾರವೂ 2002ರಲ್ಲಿ ವಿಶೇಷ ಆದೇಶ ಮಾಡಿದೆ.
ಈ ಆದೇಶಗಳನ್ನ ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಈ ಕುರಿತು ನೆಲಮಂಗಲದಲ್ಲಿ ಮಾಧ್ಯಮಮಿತ್ರರೊಂದಿಗೆ ಮಾತನಾಡಿದ ಸಿಎಂ, ಅಜಾನ್ ವಿರುದ್ಧ ಸುಪ್ರಭಾತ ವಿಚಾರದ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ. ಧ್ವನಿವರ್ಧಕಗಳ ಬಗ್ಗೆ ಸುಪ್ರೀಂಕೋರ್ಟ್ ಆದೇಶವನ್ನ ನೀಡಿದೆ. ಕರ್ನಾಟಕ ಸರ್ಕಾರವೂ 2002ರಲ್ಲಿ ವಿಶೇಷ ಆದೇಶ ಮಾಡಿದೆ. ಈ ಆದೇಶಗಳನ್ನ ಎಲ್ಲರೂ ಪಾಲಿಸಬೇಕೆಂಬ ನಿರ್ಧಾರ ಮಾಡಲಾಗಿದೆ ಎಂದರು.
ಇನ್ನು ಸಭೆ ವಿವರಗಳನ್ನ ಪ್ರತ್ಯೇಕ ಆದೇಶ ಮೂಲಕ ಹೊರಡಿಸ್ತೇವೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಎಲ್ಲೂ ಸರ್ಕಾರ ಹೊರಡಿಸುವ ಹೊಸ ಆದೇಶ ಪಾಲಿಸಬೇಕು. ಇದೇ ನಿಯಮಗಳು ಯುಪಿ, ಬೇರೆ ಬೇರೆ ರಾಜ್ಯಗಳಲ್ಲಿ ಇವೆ ಎಂದು ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.