ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬಿ.ಜಿ.ಎಲ್. ಸ್ವಾಮಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ದಿ: 27/05/2022 ರಿಂದ ದಿ: 29/05/2022 ರವರೆಗೆ 3 ದಿನಗಳ ‘ಬಿ.ಜಿ.ಎಲ್. ಸ್ವಾಮಿ ಸಾಹಿತ್ಯ ಮತ್ತು ನಿಸರ್ಗಾನುಭವ ಅಧ್ಯಯನ ಶಿಬಿರವನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೊನ್ನೆಮರಡುವಿನಲ್ಲಿ ಆಯೋಜಿಸಲಾಗಿದೆ.
ರಾಜ್ಯದ ಆಸಕ್ತ 20-40 ವರ್ಷದೊಳಗಿನವರು ದಿ: 13/05/2022 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಿಗಧಿನ ನಮೂನೆ ಅರ್ಜಿಗಾಗಿ ಅಕಾಡೆಮಿ ವೆಬ್ಸೈಟ್ www.sahithyaacademy.karnataka.gov.in ನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 080-22211730 / 29601730 / 22106460 ಗಳನ್ನು ಸಂಪರ್ಕಿಸುವುದು.