Saturday, September 28, 2024
Saturday, September 28, 2024

ಸಮ ಸಮಾಜದ ಆಧ್ಯಾತ್ಮಿ, ಶ್ರೀರಾಮಾನುಜರು

Date:

ಜಾತಿ, ಮತ, ಧರ್ಮ, ಲಿಂಗ, ಭೇದವಿಲ್ಲದೆ ಎಲ್ಲರೂ ಮುಕ್ತಿ ಮಾರ್ಗದಲ್ಲಿ ಹೋಗಬಹುದು ಎಂದು ಸಾರಿದವರು ಶ್ರೀರಾಮಾನುಜಾಚಾರ್ಯರು. ಆಗಿನ ಕಾಲದಲ್ಲಿ ಅಸ್ಪೃಶ್ಯತೆಯನ್ನು ಸಮಾಜದಿಂದ ತೊಡೆದು ಹಾಕುವಲ್ಲಿ ಪ್ರಯತ್ನ ಮಾಡಿದವರಲ್ಲಿ ಮೊದಲಿಗರು.

ಹಿಂದುಳಿದ ವರ್ಗಗಳ ಜನರನ್ನು ಹತ್ತಿರ ಕರೆದು ಅವರಿಗೆ ದೇವಸ್ಥಾನಕ್ಕೆ ಪ್ರವೇಶ ಮಾಡಿಸಿ, ಅವರನ್ನು ಶ್ರೇಷ್ಠ ಕುಲದವರು ಎಂದು ಹೇಳಿದ ಮಹಾಮರು.

ಶ್ರೀರಾಮಾನುಜಾಚಾರ್ಯರು ತಮಿಳುನಾಡಿನ ಮದರಾಸು ಪಟ್ಟಣ ಬಳಿಯಿರುವ ಶ್ರೀ ಪೇರಂಬದೂರಿನಲ್ಲಿ ಜನಿಸಿದರು. 120 ವರ್ಷಗಳ ಕಾಲ ಬದುಕಿದ್ದರು. ರಾಮಾನುಜಾಚಾರ್ಯರು ತಮ್ಮ 16ನೇ ವಯಸ್ಸಿನಲ್ಲಿ ವಿವಾಹವಾದರು. ಇದರಲ್ಲಿ ವಿವಾಹವಾಗಿ ಒಂದು ತಿಂಗಳ ನಂತರ ಇವರ ತಂದೆ ದೈವಾಧೀನರಾದರು. ನಂತರ ರಾಮಾನುಜಾಚಾರ್ಯರು ಕಾಂಚೀಪುರಕ್ಕೆ ಹೋಗಿ ಅಲ್ಲಿ ಯಾದವ ಪ್ರಕಾಶ ಎಂಬ ಪ್ರಸಿದ್ಧ ವಿದ್ವಾಂಸರ ಶಿಷ್ಯರಾದರು.

ಯಾದವ ಪ್ರಕಾಶರು ಅದ್ವೆತ್ರೈತ ಸಿದ್ದಾಂತವನ್ನು ಪ್ರಚಾರ ಮಾಡುತ್ತಿದ್ದರು. ಮುಂದೊಂದು ದಿನ ರಾಮಾನುಜಾಚಾರ್ಯರು ತಮ್ಮ ಊರನ್ನು ತೊರೆದು ಬಿಟ್ಟರು. ನಂತರದಲ್ಲಿ ಶ್ರೀರಂಗಪಟ್ಟಣದಲ್ಲಿ ವಾಸಿಸುತ್ತಿದ್ದರು. ತಮ್ಮ ದೇಹ ಬಿಟ್ಟು ಹೊರಡುವ ಕಾಲದಲ್ಲಿ ಅದನ್ನು ಮುಂಚಿತವಾಗಿಯೇ ತಮ್ಮ ಶಿಷ್ಯರಿಗೆ ತಿಳಿಸಿದ್ದರು. 1137ನೇ ಶನಿವಾರ ಮಧ್ಯಾಹ್ನ ಮಾಘ ಶುದ್ಧ ಸಪ್ತಮಿಯ ದಿನ ಇವರು ದೈವಾಧೀನರಾದರು.

ರಾಮಾನುಜಾಚಾರ್ಯರು ಆಚಾರ್ಯತ್ರಯರಲ್ಲಿ ಒಬ್ಬರಾಗಿದ್ದರು. ಇವರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಆದರೆ ಅವರ ಹೆಸರು ಕೇಳಿದ್ದಾರೆಂಬುವುದೆ ಸಮಾದಾನದ ವಿಷಯ.

ರಾಮಾನುಜಾಚಾರ್ಯರು ಮೂಲತಹ ಬ್ರಾಹ್ಮಣ ಕುಟುಂಬದವರಾಗಿದ್ದರು. ಹಿಂದುಳಿದ ವರ್ಗಗಳಿಗೆ ಸಮಾನತೆ ಹರಿಕಾರ ರಲ್ಲಿ ಪ್ರಮುಖರಾಗಿದ್ದರು.

ಓಂ ನಮೋ ನಾರಾಯನಾಯಣಾಯ ನಮಃ ಎನ್ನುವಂತಹ ಅಷ್ಟಕ್ಷರಿ ಯ ಮಂತ್ರದಲ್ಲಿ ಜಾತಿ, ಮತ, ಪಂಥವನ್ನು ಮೀರಿ ಎಲ್ಲರಿಗೂ ಉಪದೇಶಿಸಿದ ಮಹಾನ್ ವ್ಯಕ್ತಿ ಎಂದರೆ ತಪ್ಪಾಗಲಾರದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...