Monday, February 2, 2026
Monday, February 2, 2026

ಖಾಕಿಯವರಲ್ಲೂ ಮಾನವೀಯತೆ ಬತ್ತಿಲ್ಲ!

Date:

ಪೊಲೀಸ್ ವಾಲೆ ಬುಲಾ ರಹೆ! ಅಂತ ಕರೆ ಬಂತು. ಮನೆಯಲ್ಲಿದ್ದ ತಂದೆ ತಾಯಿಗಳಿಗೆ ಹೃದಯವೇ ಬಾಯಿಗೆ ಬಂದಂತೆ ಭಯ. ಒಂದು ಕ್ಷಣ ಬೆವತು ಬಿಟ್ಟರು.  ಇದ್ದ ಮಗ ಏನು ಮಾಡಿಕೊಂಡನೋ ಏನೋ!. ನೌಕರಿ ಬಗ್ಗೆ ಹೇಳಿ ಕೊಳ್ಳುವಂಥದ್ದಿಲ್ಲ. ಕಂಗಾಲಾದರು ತಂದೆ ತಾಯಿಗಳು.

ಅವರ ಮಗ ಜೈ ಹಲ್ದೆ ದಿನಾಲೂ ರಾತ್ರಿ ಸೈಕಲ್ ತುಳೀತಿದ್ದ.ಅಂದರೆ ಸುಮ್ಮನೆ ಅಲ್ಲ. ಜೊಮಾಟೋ ಕಂಪನಿಯ ಆಹಾರದ ಪೊಟ್ಟಣಗಳನ್ನ ಮನೆಮನೆಗೆ ತಲುಪಿಸುತ್ತಿದ್ದ‌. ಅಲ್ಲೇನಾದರೂ ಹೆಚ್ಚು ಕಮ್ಮಿ ಆಯ್ತ?ಅಂತ ಚಿಂತೆ.

ದಿನಾ ರಾತ್ರಿ ಸೈಕಲ್ ತುಳಿದು ಹೋಗುತ್ತಿದ್ದ ಜೈ ಹಲ್ದೆ ಯನ್ನ ಒಂದು ರಾತ್ರಿ

ಸೈಕಲ್ ಹಿಡಿದು ಪೋಲಿಸ್ ಖಾಜಿ ಎನ್ನುವವರು ನೀನು ದಿನಾಲೂ ರಾತ್ರಿಯೇ ಸೈಕಲ್ ತುಳೀಬೇಕ? ಬೆಳಿಗ್ಗೆ ಹಂಚಬಾರ್ದ? ಅಂತ ಕೇಳಿದರು.

ನನ್ನ ಹತ್ರ ಬೈಕ್ ಕೊಳ್ಳೋಕೆ ಆಗಲ್ಲ .ಸೈಕಲ್ಲೇ ಆಧಾರ ಅಂತ.

ಆತ ಬಡತನದಬಗ್ಗೆ ಹೇಳಿಕೊಂಡ. ಪೋಲಿಸ್ ಖಾಜಿ ಸುಮ್ಮನೆ ಕೂರಲಿಲ್ಲ.ಪೋಲಿಸ್ ಠಾಣೆಗೆ ಬಂದು.ಸಹೋದ್ಯೋಗಿಗಳ ಬಳಿ ಈ ಪ್ರಸಂಗದ ಬಗ್ಗೆ ಮಾತಾಡಿದರು. ಅದೇನು ಅದೃಷ್ಟವೋ ಏನೋ ಹಲ್ದೆಗೆ ಹೇಗಾದರೂ ಸಹಾಯ ಮಾಡಬೇಕು ಅಂತ ಎಲ್ಲರೂ ನಿಶ್ಚಯಿಸಿದರು.

ಎಲ್ಲರೂ ಒಂದುಷ್ಟು ಹಣ ಕೂಡಿಸಿದರು.ಒಂದು ಬೈಕ್ ಕೊಳ್ಳುವಷ್ಟು ಸಂಗ್ರಹವಾಯಿತು.ಬೈಕನ್ನೂ ಖರೀದಿಸಿ ತಂದರು. ಜೈ ಹಲ್ದೆ ಮನೆಗೆ ಹೇಳಿ ಕಳಿಸಿದರು.

ತಂದೆತಾಯಿಗಳು ಗಡಿಬಿಡಿಯಿಂದ ಪೋಲಿಸ್ ಠಾಣೆಗೆ ಬಂದರು.ಅಲ್ಲಿನ ಪರಿಸ್ಥಿತಿ ನೋಡಿದಾಗ ಅವರ ಆನಂದಕ್ಕೆ ಪಾರವೇ ಇಲ್ಲ. ಪೋಲಿಸರ ನೆರವಿಗೆ
ಕೃತಜ್ಞತೆ ಹೇಳಿದರು.ಯುವಕ ಹಲ್ದೆ ಸ್ವಾಭಿಮಾನಿ. ಅದರ ಹಣವನ್ನ ಕಂತುಗಳಲ್ಲಿ ತೀರಿಸುತ್ತೇನೆ ಎಂದು ಹೇಳಿದ.

ಇಂದೋರ್ ನ ವಿಜಯನಗರ ಪೋಲಿಸ್ ಠಾಣೆಯ ಪೊಲೀಸರ ನಡವಳಿಕೆ ಮಾನವೀಯತೆಗೆ ಒಂದು ಮಾದರಿ. 

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...