Thursday, October 3, 2024
Thursday, October 3, 2024

ಜಿಎಸ್ ಟಿ ಕಾನೂನಿನ ಅರಿವಿದ್ದಲ್ಲಿ ಸಮಸ್ಯೆ ಇರದು- ನವೀನ್ ಕುಮಾರ್

Date:

ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಟೆರೋ ಕ್ಯಾಸ್ಟ್ ಸಭಾಂಗಣದಲ್ಲಿ ಹೌ ಟು ಫೇಸ್ ಜಿಎಸ್ಟಿ ಇನ್ವೆಸ್ಟಿಗೇಶನ್ ಅಂಡ್ ಆಡಿಟ್ ಪ್ರಾಕ್ಟಿಕಲ್ ಟಿಪ್ಸ್ ಈ ವಿಷಯ ಕುರಿತು ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬೆಂಗಳೂರಿನ ಹೆಸರಾಂತ ಕಾನೂನು ಸಲಹೆಗಾರ ಕೆಎಸ್ ನವೀನ್ ಕುಮಾರ್ ಅವರು ಕಾರ್ಯಗಾರವನ್ನು ಉದ್ಘಾಟಿಸಿದರು. ಅನಂತರದಲ್ಲಿ ಮಾತನಾಡಿದ ಅವರು, ಜಿಎಸ್ಟಿ ಕಾನೂನಿನ ಅರಿವಿದ್ದಲ್ಲಿ ಉದ್ದಿಮೆದಾರರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಇರುವುದಿಲ್ಲ. ಕಾನೂನಿನ ಅಡಿಯಲ್ಲಿ ಸಮನ್ಸ್ ಬಂದಾಗ ಯಾರು ಜಾರಿ ಮಾಡಿರಬೇಕು, ಯಾರಿಗೆ ಜಾರಿ ಮಾಡಿರಬೇಕು, ಮತ್ತು ಯಾರು ಅದನ್ನು ಹಾಜರಾಗಿ ಪ್ರತಿನಿಧಿಸಬೇಕು, ಹೇಗೆ ಪ್ರತಿನಿಧಿಸಬೇಕು, ಅದನ್ನು ಪ್ರತಿನಿಧಿಸುತ್ತಿದ್ದರೆ ಉದ್ದಿಮೆಗಳಿಗೆ ಆಗುವ ತೊಂದರೆಗಳೇನು ಎಂಬುದರ ಬಗ್ಗೆ ವಿವರಿಸಿದರು.

ಜೆಸ್ಸಿ ಕಾನೂನಿನ ಅಡಿಯಲ್ಲಿ ಅಧಿಕಾರಿಗಳು ವ್ಯವಹಾರದ ಸ್ಥಳಗಳ ಪರಿಶೀಲನೆ ಸಮಯದಲ್ಲಿ ಅಧಿಕಾರದ ದುರುಪಯೋಗವಾಗದಂತೆ ವ್ಯಾಪಾರಸ್ಥರು ಯಾವ ರೀತಿಯಲ್ಲಿ ಪ್ರತಿನಿಧಿಸಬೇಕು. ಯಾವ ದಾಖಲೆಗಳನ್ನು ಒದಗಿಸಬೇಕು ಹೀಗೆ ಮುಂತಾದ ವಿವರವಾದ ಸಲಹೆಗಳನ್ನು ಉದ್ಯಮಿಗಳಿಗೆ ನೀಡಿದರು.

ತೆರಿಗೆ ಇಲಾಖೆ ಅಧಿಕಾರಿಗಳು ಪರಿವೀಕ್ಷಣೆಯ ಸಮಯದಲ್ಲಿ, ಬರವಣಿಗೆ ರೂಪದಲ್ಲಿ ತೆಗೆದುಕೊಳ್ಳುವ ಉದ್ಯಮಿಗಳ ಹೇಳಿಕೆಗಳನ್ನು ಒತ್ತಾಯಿಸಿ ತೆಗೆದುಕೊಂಡ ಸಂದರ್ಭಗಳಲ್ಲಿ, ಉದ್ಯೋಗಿಗಳು ತಾವು ಕೊಟ್ಟ ಹೇಳಿಕೆಗಳನ್ನು ಯಾವರೀತಿಯಲ್ಲಿ ಹಿಂಪಡೆದು ಸಮಂಜಸವಾದ ಹೇಳಿಕೆಗಳನ್ನು ಕೊಡಬೇಕೆಂದು ತಿಳಿಸಿದರು.

ಸಂಘದ ಅಧ್ಯಕ್ಷ ಎನ್ ಗೋಪಿನಾಥ್ ಅಧ್ಯಕ್ಷತೆಯನ್ನು ವಹಿಸಿದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉದ್ದಿಮೆದಾರರು ಹಲವಾರು ತೆರಿಗೆ ಸಂಬಂಧಿತ ತೊಂದರೆಗಳನ್ನು ಅನುಭವಿಸುತ್ತಿದ್ದು, ಕಾನೂನಿನ ಮಾಹಿತಿಯ ಕೊರತೆಯಿದೆ. ಇಂತಹ ಉತ್ತಮ ಕಾರ್ಯಗಾರಗಳನ್ನು ನಡೆಸಿದಾಗ ಮಾಹಿತಿಯನ್ನು ಪಡೆದು ತಮ್ಮ ಉದ್ದಿಮೆಗಳನ್ನು ಧೈರ್ಯದಿಂದ ಮುನ್ನಡೆಸಿಕೊಂಡು ಹೋಗಬಹುದು ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಚಾರ್ಟೆಡ್ ಅಕೌಂಟೆಂಟ್ ನಾಗರಾಜ್ ಸಿಂಗ್ ಸ್ವಾಗತಿಸಿ, ತೆರಿಗೆ ಸಲಹಾ ಸಮಿತಿ ಚೇರ್ಮನ್ ಇ. ಪರಮೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಂ.ರಾಜು ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ, ವಸಂತ ಹೋಬಳಿದಾರ್ ನಿರೂಪಿಸಿದರು. ಸಹಕಾರ್ಯದರ್ಶಿ ಜೆ ವಿಜಯ್ ಕುಮಾರ್ ವಂದಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಖಜಾಂಚಿ ಮಧುಸೂದನ್ ಐತಾಳ್, ಮಾಜಿ ಅಧ್ಯಕ್ಷರಾದ ಡಿ.ಎಂ.ಶಂಕರಪ್ಪ, ನಿರ್ದೇಶಕರಾದ ಬಿ.ಆರ್. ಸಂತೋಷ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...