ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಗರದ ಪತ್ರಿಕಾ ಭವನದಲ್ಲಿ ಏ.24 ನೇಯ ಭಾನುವಾರ ಸಂಜೆ ಸಾಗರದ ಸಾಹಿತಿಗಳು, ಚಿಂತಕರಾದ ಡಾ. ಸಫ್ರಾರ್ಜ್ ಚಂದ್ರಗುತ್ತಿ ಅವರು ಬರೆದ ಭಾರತೀಯ ಧರ್ಮ, ಅಂತಃಸತ್ವದ ಹುಡುಕಾಟ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
356 ಪುಟಗಳ ಈ ಕೃತಿಯನ್ನು ಬಿಡುಗಡೆ ಗೊಳಿಸಿ ಹಿರಿಯ ಸಾಹಿತಿಗಳು, ವಿಮರ್ಶಕರು, ಚಿಂತಕರಾದ ಪ್ರೊ. ರಾಜೇಂದ್ರ ಚನ್ನಿ ಮಾತನಾಡಿದರು. ನಿವೃತ್ತ ಪ್ರಿನ್ಸಿಪಾಲ್ ರು ಸಾಹಿತಿಗಳಾದ ಡಾ. ಎಚ್. ಟಿ. ಕೃಷ್ಣಮೂರ್ತಿ ಪ್ರತಿಸ್ಪಂದನೆ ನೀಡಿದರು. ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಡಾ. ಸಫ್ರಾರ್ಜ್ ಚಂದ್ರಗುತ್ತಿ, ಮಹಾದೇವಿ, ಡಿ. ಗಣೇಶ್ ಉಪಸ್ಥಿತರಿದ್ದರು.