Wednesday, October 2, 2024
Wednesday, October 2, 2024

ಇಬ್ಬರ ಜಗಳವಲ್ಲ, ಮೂವರ ಜಗಳ

Date:

ಈಗ ಆಮ್ ಆದ್ಮಿ ದೇಶದಾದ್ಯಂತ ಸಂಚಲನವೆಬ್ಬಿಸುತ್ತಿದೆ.
ದೆಹಲಿಯಲ್ಲಿನ ಸರ್ಕಾರದ ಚಟುವಟಿಕೆಯನ್ನ ಸಮುದಾಯ ಗಮನಿಸುತ್ತಾ ಬಂದಿತು. ಹತ್ತಿರದ ಪಂಜಾಬ್ ಮೇಲೆ ಪರಿಣಾಮ ಬೀರಿತು. ಇವೆಲ್ಲ ಸಡನ್ ಆಗಿ ಘಟಿಸಿದ ಸಂಗತಿಗಳಲ್ಲ. ಒಂದೆರಡು
ಅವಧಿ ನೋಡಿ ಜನ ಮನಸ್ಸಿಗೆ ತೆಗೆದುಕೊಂಡರು.

ಇತ್ತೀಚೆಗೆ ನಡೆದ ಲಖಿಂಪುರ – ಖೇರಿ ಹಗರಣದಲ್ಲಿ ಕೃಷಿಕರ
ಮನಸ್ಸು ಕೆಡಿಸಿಕೊಂಡರು.
ಆದರೆ ಅದೇ ಕೇಂದ್ರದ ಆಡಳಿತಾರೂಢ ಪಕ್ಷಕ್ಕೆ ಮುಳುವಾಯಿತು. ಆರೋಪಿ ಸಚಿವ ಪುತ್ರನ ವಿಚಾರಣೆಯಲ್ಲಿ
ಮೀನಮೇಷ ಎಣಿಸಿದ ಫಲಿತಾಂಶ ಆಪ್ ಪಕ್ಷಕ್ಕೆ ಅವಕಾಶ ಬಾಚಿಕೊಂಡಿತು.

ಸಾಮಾನ್ಯವಾಗಿ ಆಪ್ ಪಕ್ಷದ
ವಿಚಾರಗಳು ರೂಢಿಗತ ರಾಜಕಾರಣಿಗಳಿಗೆ ಅಪಥ್ಯವಾಗಿದೆ. ಹೊಸ ಪೀಳಿಗೆಯ ಮತ್ತು ರಾಜಕೀಯ ತುಡಿತವುಳ್ಳ ಉನ್ನತ ಅಧಿಕಾರಿಗಳನ್ನ ಆಪ್ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.

ಪ್ರಸ್ತುತ ರಾಜ್ಯದಲ್ಲಿ ಆಪ್ ನಡೆಸಿದ ಕಾರ್ಯಾಚರಣೆಯನ್ನ
ಲಘುವಾಗಿ ಪರಿಗಣಿಸುವಂತಿಲ್ಲ.
ಪೋಲಿಸ್ ಉನ್ನತ ಅಧಿಕಾರಿ
ಪಕ್ಷದ ಟೋಪಿ ಧರಿಸಿದರು.
ಈಗ ರಾಜ್ಯದ ರೈತರ ಸಂಘಟನೆಯ ಒಂದು ಬಣವೇ
ಆಪ್ ಸೇರಿದೆ.

ಈಗ ನಡೆಯುತ್ತಿರುವ ಕಾಂಗ್ರೆಸ್
ಬಿಜೆಪಿ ಘರ್ಷಣೆಯಲ್ಲಿ ಹೊಸ ಆಶಯ ಯಾವುದೂ ಉದ್ಭವಿಸುತ್ತಿಲ್ಲ. ಶೇಕಡ ಭ್ರಷ್ಟಾಚಾರ ಲೆಕ್ಕಾಚಾರದ
ಕೆಸರೆರೆಚಾಟ ಪರಸ್ಪರ ನಡೆಯುತ್ತಿದೆ. ಯಾರು ಶುದ್ಧರು
ಎಂಬುದನ್ನ ಜನತೆ ನಿರ್ಣಯಿಸುವುದಕ್ಕೂ ಬಿಡುತ್ತಿಲ್ಲ.
ಇನ್ನೇನು ಒಂದು ವರ್ಷ ಬಾಕಿ ಇದೆ. ದೇಶದ ಹತ್ತು ರಾಜ್ಯಗಳ ವಿಧಾನ ಸಭಾ ಚುನಾವಣೆ ಬಿಸಿ
ಏರಲಾರಂಭಿಸಿದೆ.
ಯಾರು ಅಸಲಿ ಯಾರು ನಕಲಿ
ಈ ಗುದ್ದಾಟ ನಡೆಯುತ್ತಿದೆ.
ಎಲ್ಲರಿಗೂ ಗೊತ್ತಿರುವ ಗಾದೆ
ಇಬ್ಬರ ಜಗಳ ಮೂರನೇಯವನಿಗೆ ಲಾಭ.
ಆದರೆ ರಾಜ್ಯದಲ್ಲಿ ನಡೆದಿರೋದು ಮೂವರ ಜಗಳ. ಕುಟುಂಬ ರಾಜಕಾರಣ ಎಲ್ಲಾ ಪಕ್ಷದಲ್ಲಿದೆ.ನಮ್ಮಲ್ಲಿ ಒಂದೇ ಅಲ್ವಲ್ಲ? ಎಂಬ ತರ್ಕದ ಚಾಟಿ ಬೀಸಿ ಎದುರಾಳಿಗಳನ್ನ ಸುಮ್ಮನಾಗಿಸಿದ ಪಕ್ಷವೂ ಈಗ
ಅಧಿಕಾರಕ್ಕೆ ಹವಣಿಸುತ್ತಿದೆ.
ಸಂಘಟನೆಯಲ್ಲಿ ಬಿಜೇಪಿಯೊಂದೆ ಈವರೆಗೆ ಸಾಫಲ್ಯ ಪಡೆದಿದೆ. ಆದೃ ಮಿಕ್ಕರಡು ಪಕ್ಷಗಳೂ ಈಗ ಅದೇ ನೀತಿ ಅನುಸರಿಸಲು ಹೆಣಗಾಡುತ್ತಿವೆ. ಎಷ್ಟರಮಟ್ಟಿಗೆ
ಫಲ ಸಿಗುವುದೋ ಕುತೂಹಲದ ವಿಷಯವಾಗಿದೆ.

ಈಗ ಕಾಂಗ್ರೆಸ್- ಬಿಜೇಪಿ- ಜೆಡಿಎಸ್ ತಿಕ್ಕಾಟದಲ್ಲಿ ಆಪ್ ಲಾಭಮಾಡಿಕೊಳ್ಳುತ್ತದೆ ಎಂಬುದು ಪರಿಣಿತರ ಅಂಬೋಣ.
ಯಾರೇ ಬರಲಿ ಜನ ಸ್ಪಂದನ
ಜನಕಲ್ಯಾಣ ಜನಪ್ರಗತಿಯ
ಆಡಳಿತ ಕೊಡಬೇಕು.

ಈಗ ಹೊಸತೊಂದು ವಿಶೇಷ
ತೀವ್ರ ಪ್ರಚಾರ ಪಡೆದಿದೆ.
ಚುನಾವಣಾ ತಂತ್ರಗಾರರ‌ನ್ನ ಆಯಾ ಪಕ್ಷಗಳು ನೇಮಿಸಿಕೊಳ್ಳುವುದು. ಅಂತೂ
ಯೋಜನೆಗಳು ಕಾರ್ಯಕ್ರಮಗಳು ಇತ್ಯಾದಿಗಳ ಮೂಲಕ ಜನಮನ ಗೆಲ್ಲುವುದು
ಸಂಪ್ರದಾಯ.ಈಗ ತಂತ್ರಗಾರರ
ತಲೆ ಉಪಯೋಗಿಸುವ ದಿನಗಳು ಬಂದಿವೆ.
ಮೂವರ ಜಗಳ ನಾಕನೇಯವನಿಗೆ ಲಾಭ
ಆಗುತ್ತದೆಯೋ ಗೊತ್ತಿಲ್ಲ.

ಕಾದು ನೋಡೋಣ..

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...