ಗುತ್ತಿಗೆದಾರ ಸಂತೋಷ್ ಪಾಟೀಲ್ ಅಸಹಜ ಸಾವಿನ ಪ್ರಾಥಮಿಕ ವರದಿ ಬರುವವರೆಗೂ ಸಚಿವರಿಂದ ರಾಜೀನಾಮೆ ಪಡೆಯುವುದಿಲ್ಲ ಎಂದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಈಗಾಗಲೇ ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ಅವರಿಂದಲೇ ನಾನು ಸ್ಪಷ್ಟನೆ ಪಡೆದುಕೊಂಡಿದ್ದೇನೆ.
ಪ್ರಕರಣಕ್ಕೂ ಸಚಿವರಿಗೂ ಸಂಬಂಧವಿಲ್ಲ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ.
ಈಗ ಇಲಾಖೆಯಿಂದ ಏನೆಲ್ಲ ಸ್ಪಷ್ಟನೆ ಬೇಕೋ, ಅದನ್ನು ಪಡೆದಿದ್ದು ಆಗಿದೆ. ಇನ್ನು ಪ್ರಕರಣ ತನಿಖೆಗೆ ವಹಿಸಿ, ಪ್ರಾಥಮಿಕ ವರದಿಗಾಗಿ ಕಾಯುತ್ತಿದ್ದೇವೆ. ಹೀಗಾಗಿ, ಪ್ರಾಥಮಿಕ ವರದಿ ಬರುವವರೆಗೂ ಸಚಿವರಿಂದ ರಾಜೀನಾಮೆ ಪಡೆಯುವುದಿಲ್ಲ ಎಂದು ಬೊಮ್ಮಾಯಿ ಸ್ಪಷ್ಟನೆ ನೀಡಿದರು.
