Monday, December 15, 2025
Monday, December 15, 2025

ಹ್ಯಾಟ್ರಿಕ್ ಗೆಲುವಿನ ಲಕ್ನೊ ಸೂಪರ್ ಜೈಂಟ್ಸ್.

Date:

ವಿಕೆಟ್ ಕೀಪರ್ ಕ್ವಿ೦ಟನ್ ಪೀಕಾಕ್ (80) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಜಯಂಟ್ಸ್ ತಂಡ ಐಪಿಎಲ್ 15ನೇ ಆವೃತ್ತಿಯ 15ನೇ ಪಂದ್ಯದಲ್ಲಿ ಆರು ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿತು.


ಡಿ. ವೈ ಪಾಟೀಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಡೆಲ್ಲಿ ತಂಡ ಆರಂಭದಲ್ಲಿ ಅಬ್ಬರಿಸಿದರು ಅಂತಿಮವಾಗಿ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಕೇವಲ 149 ರನ್ ಕಲೆಹಾಕಿತು ಪ್ರತ್ಯುತ್ತರವಾಗಿ ಲಕ್ನೋ ಸೂಪರ್ ಜಯಂಟ್ಸ್ ತಂಡ, 19.4 ಓವರುಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು. ಮೊದಲ ವಿಕೆಟ್ ಗೆ ನಾಯಕ ಕೆ ಎಲ್ ರಾಹುಲ್ (24) ಜೊತೆ 73 ರನ್ ಜೊತೆಯಾಟದಲ್ಲಿ ಪಾಲ್ಗೊಂಡ ಡಿಕಾಕ್, ಅಂತಿಮವಾಗಿ 52 ಎಸೆತಗಳಲ್ಲಿ 80 ರನ್ ಕಲೆಹಾಕಿದರು. ತ ಪಂದ್ಯದ ಕೊನೆಯ ಕ್ಷಣ ವರೆಗೂ ಗೆಲುವಿಗಾಗಿ ಹೋರಾಟ ನಡೆಸಿದರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸತತ ಎರಡನೇ ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ

ಹಾಲಿ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನಾಡಿದ ಡೇವಿಡ್ ವಾರ್ನರ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಪೃಥ್ವಿ ಶಾ, ಆರಂಭದಿಂದಲೇ ಅಬ್ಬರಿಸತೊಡಗಿದ್ದಾರೆ. ಕೃಷ್ಣಪ್ಪ ಗೌತಮ್ ಎಸೆದ ಇನ್ನಿಂಗ್ಸ್ ನ ಎರಡನೇ ಓವರ್ ನ ಮೂರನೇ ಎಸೆತವನ್ನು ಬೌಂಡರಿ ಗಟ್ಟುವ ಮೂಲಕ ಮೊದಲ ಫೋನ್ ಬಾರಿಸಿದ ಪೃಥ್ವಿ ನಂತರ ಎದುರಾಳಿ ಬೌಲರ್ಗಳನ್ನು ನಿರ್ದಾಯ ಕವಾಗಿ ದಂಡಿಸಿದರು. ಅದರಲ್ಲೂ ನಾಲ್ಕನೇ ಓವರ್ನಲ್ಲಿ ಆವೇಶ್ ಖಾನ್ ಗೆ ಹ್ಯಾಟ್ರಿಕ್ ಫಾರ್ ಬಾರಿಸಿದ ಶಾ, ಪವರ್ ಪ್ಲೇ ಅವಧಿ ಮುಕ್ತಾಯಗೊಳ್ಳುವ ಅಷ್ಟರಲ್ಲಿ ತಂಡದ ಮೊತ್ತವನ್ನು 52 ರನ್ ಗಳಿಸಿದರು. ಆದರೆ, ಕ್ರಿಸ್ ನ ಇದು ತುದಿಯಲ್ಲಿದ್ದ ವಾರ್ನರ್ ರನ್ ಗಳಿಸಲು ವಿಫಲರಾದರು. ಈ ಮಧ್ಯೆ 30 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಮುಂಬೈನ ಬ್ಯಾಟರ್ ಪೃಥ್ವಿ ಅಂತಿಮವಾಗಿ ಎಂಟನೇ ಓವರ್ನಲ್ಲಿ ಕೃಷ್ಣಪ್ಪ ಗೌತಮ್ ಗೆ
ವಿಕೆಟ್ ಒಪ್ಪಿಸಿದರು. ಆಗ ತಂಡದ ಮೊತ್ತ 67.

7.2 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 67 ರನ್ ಗಳಿಸಿ ಉತ್ತಮ ಮೊತ್ತ ಪೇರಿಸುವ ನೀಡಿದ ಡೆಲ್ಲಿ, ಮಧ್ಯಮ ಓವರ್ ಗಳಲ್ಲಿ ಎದುರಾಳಿ ತಂಡದ ಬಿಗು ಬೋಲಿಂಗ್ ದಾಳಿಗೆ ತತ್ತರಿಸಿತು. ಏಳು ರನ್ ಗಳ ಅಂತರದಲ್ಲಿ ಪೃಥ್ವಿ, ವಾರ್ನರ್ ಮತ್ತು ಪೊವೆಲ್ ವಿಕೆಟ್ ಪತನ ಗೊಂಡವು. ನೋಡನೋಡುತ್ತಿದ್ದಂತೆ ರನ್ ಗತಿ ಕುಸಿಯಿತು. ನಂತರ ಕ್ರಿಸಿಗಿಳಿದ ನಾಯಕ ರಿಷಬ್ ಪಂತ್ ಮತ್ತು ಖಾನ್ ವಿಕೆಟ್ ಉಳಿಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದ ಕಾರಣ ರನ್ ಗತಿ ಸೂಪರ್ 5.22ಕ್ಕೆ ಕುಸಿಯಿತು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...