Saturday, September 28, 2024
Saturday, September 28, 2024

ಇಲ್ನೋಡಿ ಇವತ್ತು ಇಡ್ಲಿ ದಿನ

Date:

ಈಗೀಗ ಎಲ್ಲರಿಗೂ ,ಎಲ್ಲವಕ್ಕೂ ಒಂದು ದಿನವನ್ನ ಆಚರಿಸುವ ರೂಢಿ ಬಂದಿದೆ. ಏನಿಲ್ಲ ಅಂದರೂ ಆವತ್ತೊಂದು ದಿನ ಅವರ,ಅದರ ಬಗ್ಗೆ ಒಂದಿಷ್ಟು
ಹೊತ್ತು ಮಾತಾಡುವುದು . ಒಂದು ಸಮಾರಂಭ ಏರ್ಪಡಿಸುವುದು ಸರ್ವೇಸಾಮಾನ್ಯ ಸಂಗತಿ.
ನಮ್ಮ ನಿಮ್ಮ ಗಮನ ಈಗ ಹೊರಳಬೇಕಾದದ್ದು ನಮಗೆಲ್ಲಾ ಪ್ರೀಯವಾದ ತಿಂಡಿ ಪದಾರ್ಥ ಇಡ್ಲಿ ಬಗ್ಗೆ.

2015 ರಲ್ಲಿ ಚೆನೈನ ಬಾಣಸಿಗ ಎನಿಯವನ್ ಎಂಬ ಮಹಾನುಭಾವ ಈ ಇಡ್ಲಿಗೆ ಒಂದು ದಿನ ಇರಲಿ ಎಂದು ಆಚರಣೆ ಶುರುಮಾಡಿದನಂತೆ.ಆತ ಸಾಮಾನ್ಯ ಅಂದುಕೋ ಬೇಡಿ.ಇಡ್ಲಿಯ ವೆರೈಟಿಯಲ್ಲೇ ಸು 1328  ತರಹ ಇಡ್ಲಿ ಬೇಯಿಸಿ ತೋರಿಸಿದ ಭೂಪ.

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ,ನಾಲಗೆ ಪ್ರಿಯ ತಿಂಡಿ ಅಂದರೆ
ಇಡ್ಲಿ ಸಾಂಬಾರ್. ಎಂತಹ ಆರೋಗ್ಯದ ತೊಂದರೆ ಇರಲಿ ಸಾಮಾನ್ಯವಾಗಿ ವೈದ್ಯರು ಸೂಚಿಸುವುದು ಇಡ್ಲಿ ತಿನ್ನಿ ಪರವಾಗಿಲ್ಲ.ಏಕೆಂದರೆ ಎಣ್ಣೆ, ಬೆಣ್ಣೆ ರಹಿತ
ಕೇವಲ ಆವಿಯಲ್ಲೇ ಬೇಯುತ್ತದೆ. ಅದರ ಮೃದುತ್ವ ಮಧುರತೆ ತಿನ್ನುವವರೇ ಹೇಳಬೇಕು.
ಬಗೆಬಗೆಯ ಇಡ್ಲಿ ಮಾಡುವ ಕಲಾವಂತ ಬಾಣಸಿಗರೂ ಈಗ ಎಲ್ಲ ಕ್ಯಾಂಟೀನ್ ,ರೆಸ್ಟುರಾ ಗಳಲ್ಲಿ ಸಿಗುತ್ತಾರೆ. ಯಾರೇ ಆಗಿರಲಿ ಸ್ವಯಂ ಉದ್ಯೋಗದ ಕ್ಯಾಂಟೀನ್ ತೆರೆದರೆ ಅಲ್ಲಿ ಇಡ್ಲಿ ಬಿಟ್ಟು ಬೇರೆ ಏನೂ ಆರಂಭದಲ್ಲಿ ಮಾಡುವುದಿಲ್ಲ. ಇಡ್ಲಿ ಸಾಂಬಾರ್ ತಯಾರಿಸಿದರೇ ಮಾತ್ರ ಗಿರಾಕಿಗಳು
ಬರುವುದು. ಈ ದೃಶ್ಯ  ನಮ್ಮಲ್ಲಿ ಸಾಮಾನ್ಯ.

ಏನೇ ಆಗಲಿ ಇಡ್ಲಿಗೆ ಅಂತ ಒಂದು ದಿನ ಆಚರಣೆಗೆ ಮೀಸಲಿಟ್ಟರಲ್ಲ 
ಆ ಮಹಾಶಯ ಎನಿಯವನ್ ಗೆ ನಮೋನಮಃ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...