ಶಿವಮೊಗ್ಗದ ಹೊಸಹಳ್ಳಿ ಯ ಹಿರಿಯ ಗಮಕಿಗಳಾದ ಶ್ರೀ ಎಚ್ .ಆರ್ .ಕೇಶವಮೂರ್ತಿ ಅವರು ನವದೆಹಲಿಯಲ್ಲಿ ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಯನ್ನ
ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ್ ಅವರಿಂದ ಸ್ವೀಕರಿಸಿದ್ದಾರೆ.
ಶಿವಮೊಗ್ಗವೊಂದೇ ಅಲ್ಲ ಇಡೀ ಕರ್ನಾಟಕವೇ ಹೆಮ್ಮೆ ಪಡಬಹುದಾದ ಸಂಗತಿ.
ಶ್ರೀಯುತರು ಗಮಕ ಕಲೆಯ ಉಳಿವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಹಿರಿಯ ಗಮಕ ಗುರುಗಳಾಗಿ ಅವರು ಅಸಂಖ್ಯ ಶಿಷ್ಯವೃಂದಕ್ಕೆ ಗಮಕ ಗಾಯನವನ್ನ ಹೇಳಿಕೊಟ್ಟಿರುತ್ತಾರೆ.
ಆಕಾಶವಾಣಿ ( ಭದ್ರಾವತಿ) ಮತ್ತು ದೂರದರ್ಶನ ಚಂದನ ಕಾರ್ಯಕ್ರಮ ದಲ್ಲಿ ಅವರ ಗಮಕ ಗಾಯನ ಪ್ರಸಾರವಾಗಿವೆ.
ಕೇಶವ ಮೂರ್ತಿ ಅವರು ಗಮಕ ಗಾಯನ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದವರು. ಇವರು 22 ಫೆಬ್ರವರಿ 1935 ರಂದು ಜನಿಸಿದರು. ಅವರು ಹೊಸಹಳ್ಳಿಯಲ್ಲಿರುವ ಗಮಕ ಕಲಾ ಪರಿಷತ್ನಿಂದ ಲಭ್ಯವಿರುವ ಗಮಕದ ಧ್ವನಿ ಟ್ರ್ಯಾಕ್ಗಳಲ್ಲಿ ಧ್ವನಿಮುದ್ರಣಗೊಂಡ ಹಿರಿಯ ಕಲಾವಿದರಲ್ಲಿ ಒಬ್ಬರು. ಅವರು ಪ್ರಾದೇಶಿಕ ದೂರದರ್ಶನ ಮತ್ತು ಉದಯ ಟಿವಿಯಲ್ಲಿ ಮತ್ತೂರು ಕೃಷ್ಣಮೂರ್ತಿ ಅವರೊಂದಿಗೆ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಇವರಿಗೆ ಹಲವಾರು ಸನ್ಮಾನಗಳು ಪ್ರಶಸ್ತಿಗಳು ಪುರಸ್ಕಾರಗಳು ಲಭಿಸಿವೆ.
ಶಾಂತಲಾ ನಾಟ್ಯಶ್ರೀ ಪುರಸ್ಕಾರ 1998, ಕುಮಾರವ್ಯಾಸ ಪ್ರಶಸ್ತಿ 2009, ರಾಜ್ಯೋತ್ಸವ ಪ್ರಶಸ್ತಿ 2009 ಇನ್ನೂ ಅನೇಕ ಪ್ರಶಸ್ತಿಗಳು ಲಭಿಸಿವೆ. ಈ ವರ್ಷ(2022) ಹೆಮ್ಮೆಯ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೆ ಲೈವ್ ಮೀಡಿಯ ಶ್ರೀ ಎಚ್.ಆರ್.ಕೇಶವಮೂರ್ತಿ ಅವರಿಗೆ
ಹಾರ್ದಿಕವಾಗಿ ಅಭಿನಂದಿಸುತ್ತದೆ.