Saturday, October 5, 2024
Saturday, October 5, 2024

ಸಂತೋಷದ ಅರ್ಥಕ್ಕೆ ಸೀಮೆಯೇ ಇಲ್ಲ

Date:

ಸಂತೋಷ ಎಂಬುದಕ್ಕೆ ಯಾವುದೇ ಆದ ನಿರ್ದಿಷ್ಟ ಕಾರಣಗಳಿಲ್ಲ. ಸಂತೋಷ ಎನ್ನುವುದು ಯಾವುದೋ ನಿರ್ದಿಷ್ಟವಾದ ಕೆಲಸವನ್ನು ಮಾಡಿದರೆ, ಯಾವುದೋ ಒಂದು ನಿರ್ದಿಷ್ಟ ಸಾಧನೆಯನ್ನ ಮಾಡಿದರೆ ,ಯಾವುದೋ ಜಯಗಳಿಸಿದರೆ ಸಿಗುವಂತಹದಲ್ಲ.

ಪ್ರತಿಯೊಬ್ಬರೂ ಸಂತೋಷಕ್ಕೆ ತಮ್ಮದೇ ಆದ ವ್ಯಾಖ್ಯಾನವನ್ನು ಸಿದ್ಧಪಡಿಸಿಕೊಂಡಿದ್ದಾರೆ. ಸಂತೋಷ ಎನ್ನುವುದು ಹೀಗೆಯೇ ಇರುತ್ತದೆ ಎಂದು ಹೇಳಲಾಗದು.
ಹಾಗಂದ ಮಾತ್ರಕ್ಕೆ ಇದು ಇಲ್ಲದೇ ಮನುಷ್ಯ ಬಹುಕಾಲ ತೃಪ್ತಿಯಿಂದ ಇರಲಾರ.

ಜೀವನದಲ್ಲಿ ಉತ್ಸಾಹದಿಂದ ಇರಲು ಈ ಸಂತೋಷ ಎನ್ನುವುದು ನಮ್ಮೆಲ್ಲರಿಗೂ ಬಹಳ ಮುಖ್ಯ. ಎಲ್ಲರ ಮನಸ್ಸಿನಲ್ಲಿಯೂ ಒಂದೇ ಆಸೆ. ಜೀವನ ಸಂತೋಷದಿಂದ, ನೆಮ್ಮದಿಯಿಂದ ಕಳೆದರೆ ಸಾಕು ಎನ್ನುವ ಅಭಿಪ್ರಾಯ ಎಲ್ಲರದ್ದೂ ಆಗಿದೆ.

ಹಾಗಾದ್ರೆ ಈ ಸಂತೋಷ ಎಲ್ಲಿ ಸಿಗುತ್ತೆ ? ಹೇಗೆ ಸಿಗುತ್ತೆ ? ಅದನ್ನು ಯಾವ ರೀತಿ ಪಡೆಯಬಹುದು ಎನ್ನುವ ಹಲವಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತವೆ.

ಬಹಳಷ್ಟು ಮಂದಿ ಸಂತೋಷವನ್ನು ಹಣದಿಂದ ಕೊಡುವ ಪ್ರಯತ್ನ ಮಾಡುತ್ತಾರೆ. ಇನ್ನು ಕೆಲವರು ಬೇಕಾದಷ್ಟು ಸಂಪಾದನೆ ಇದ್ದರೆ ಸಂತೋಷ ತಾನಾಗಿಯೇ ಬರುತ್ತದೆ ಎಂದು ನಂಬುತ್ತಾರೆ. ಇನ್ನೂ ಕೆಲವರು ನೆಮ್ಮದಿ ಇದ್ದ ಕಡೆ ಸಂತೋಷ ತಾನಾಗಿಯೇ ಅರಸಿ ಬರುತ್ತದೆ ಎಂದು ಕಾಯುತ್ತಾರೆ.
ಆದರೆ, ಸಂತೋಷಕ್ಕೆ ಇಂಥದೇ ನಿರ್ದಿಷ್ಟ ಕಾರಣಗಳಿಲ್ಲ. ಅದು ನಮ್ಮೊಳಗೇ ಇದೆ. ತಜ್ಞರ ಪ್ರಕಾರ ಯಾವ ಮನುಷ್ಯ ಪ್ರತಿ ಕೆಲಸದಲ್ಲೂ ನೆಮ್ಮದಿ ಕಾಣುತ್ತಾನೆ ಸಂತೋಷವು ಸಹ ಅವನೇನು ಹಿಂಬಾಲಿಸುತ್ತದೆ.

ಜೀವನದಲ್ಲಿ ಸಂತೋಷವಾಗಿರಲು ಯಾವುದೇ ಸಂದರ್ಭ ಬಂದರೂ ಎಲ್ಲವನ್ನೂ ಎದುರಿಸಿ, ಬಂದದ್ದನ್ನು ಬಂದಹಾಗೆ ಸ್ವೀಕರಿಸುವ ಮನಸ್ಥಿತಿ ಉಳ್ಳವರಿಗೆ ಸಂತೋಷವಾಗಿರಲು ಯಾವುದೇ ಕಾರಣಗಳ ಬೇಕಿಲ್ಲ.

ಸಂಶೋಧನೆಗಳ ಪ್ರಕಾರ, ಪ್ರಪಂಚದಲ್ಲಿಯೇ ಅತಿ ಹೆಚ್ಚು ಮಂದಿ ಸಂತೋಷದಿಂದ ಇರುವಂತಹ ದೇಶ ನೈಜೀರಿಯಾ ಆಗಿದೆ. ಇಂದಿಗೂ ಆನಂದದ ಸ್ಥಿತಿಯ ವಿಷಯದಲ್ಲಿ ಭಾರತವು 133ನೇ ಸ್ಥಾನದಲ್ಲಿದೆ ಎನ್ನಲಾಗುತ್ತದೆ.
ಆಫ್ರಿಕಾ ದೇಶಗಳಲ್ಲಿ ಇರುವವರು ತುಂಬಾ ಆನಂದದಿಂದ ಜೀವನ ಸಾಧಿಸಲಿಕ್ಕೆ ಕಾರಣವೆಂದರೆ ಮೊದಲನೆಯದು ಸಂಗೀತ, ಎರಡನೆಯದು ದೈವ ಎನ್ನಲಾಗುತ್ತದೆ. ಸಂಗೀತ ಹಾಗೂ ದೇವರಮೊರೆ ಹೋದವರ ಮನಸ್ಸು ಆಹ್ಲಾದಕರವಾಗಿರುತ್ತದೆ ಎಂದು ತಿಳಿದವರು ಹೇಳುತ್ತಾರೆ.

ಸಾಮಾನ್ಯವಾಗಿ ಸಂತೋಷವನ್ನು ಕಾಣುವುದರ ಬಗ್ಗೆ ಮಾತನಾಡುವುದಾದರೆ ಹಾಸ್ಯದಲ್ಲಿ ನಾವು ಸಂತೋಷವನ್ನ ಕಾಣಬಹುದು. ಯಾರಾದರೂ ಜೋಕ್ಸ್ ಹೇಳಿದರೆ, ಹಾಸ್ಯ ಪ್ರದರ್ಶನಗಳನ್ನು ಅವರು ಮಾಡುವ ವ್ಯಾಖ್ಯೆಗಳಿಗೆ ನಾವು ಗಂಭೀರವಾಗಿ ಸ್ಪಂದಿಸುವುದಿಲ್ಲ. ಏಕೆಂದರೆ ವಿಷಯಗಳನ್ನು ನಾವು ಹಾಸ್ಯಕ್ಕೆಂದೇ ಸೀಮಿತಗೊಳಿಸಿದ್ದೇವೆ. ಅದರಿಂದಾಗಿಯೇ ನಮಗೆ ಹಾಸ್ಯದ ನಗುವಿನಲ್ಲಿ ಸಂತೋಷ, ನಿಶ್ಚಿಂತೆ ಇರುತ್ತದೆ.

ಸಂತೋಷಗಳಲ್ಲಿಯೂ ಹಲವು ಪ್ರಕಾರಗಳಿವೆ ಎಂದರೆ ತಪ್ಪಾಗಲಾರದು. ಕೆಲವರು ಸಾಧನೆಯಿಂದ ಸಂತೋಷಪಡುತ್ತಾರೆ. ಒಂದು ಗುರಿಯನ್ನು ಇಟ್ಟುಕೊಂಡು ಅದನ್ನು ತಲುಪಲು ತೀವ್ರವಾದ ಪ್ರಯತ್ನ ನಡೆಸಿ ಕೊನೆಗೆ ಸಫಲತೆಯನ್ನು ಕಂಡಾಗ ಸಂತೋಷ ಪಡುವವರು ಹಲವರು.
ಪ್ರತಿಸ್ಪರ್ಧಿಗಳನ್ನು ಪರಾಭವಗೊಳಿಸಿ ಸಂಪಾದಿಸಿದ ಸಂತೋಷವು ಕೂಡ ತುಂಬಾ ವಿಶೇಷತೆಯನ್ನು ಹೊಂದಿರುತ್ತದೆ. ಅದನ್ನು ಸಮರ ಸಂತೋಷ ಎನ್ನಬಹುದೇನೋ….

ಇದರಲ್ಲಿ ಆಧ್ಯಾತ್ಮಿಕ ಸಂತೋಷವು ಒಂದು. ಮನಃಪೂರ್ವಕವಾಗಿ ಸಂಪೂರ್ಣವಾಗಿ ದೇವರನ್ನು ನಂಬುವುದು. ಈ ಪ್ರಾಪಂಚಿಕ ಭಾರವನ್ನೆಲ್ಲಾ ದೇವರಿಗೆ ಅರ್ಪಿಸುವುದರಿಂದ ಮನುಷ್ಯನ ಮನಸ್ಸು ತುಂಬಾ ಹಗುರವಾಗುತ್ತದೆ. ಇಂತಹ ಭಾವನೆ ಮನುಷ್ಯನಿಗೆ ಹೆಚ್ಚಿನ ಸಂತೋಷವನ್ನುಂಟು ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಅದೇನೇ ಇರಲಿ, ಇಂದು ಹುಟ್ಟಿ ನಾಳೆ ಸಾಯುವ ಈ ನಾಲ್ಕು ದಿನದ ಜೀವನದಲ್ಲಿ ಅಸೂಹೆ, ಹೊಟ್ಟೆಕಿಚ್ಚು, ದುಷ್ಟಬುದ್ಧಿ ಗಳನ್ನು ದೂರವಿಟ್ಟು ಜೀವನದ ಪ್ರತಿ ಕ್ಷಣವನ್ನು ಅನುಭವಿಸುತ್ತ ಸಂತೋಷದಿಂದ ಬದುಕನ್ನು ಸಾಗಿಸಿದಾಗಲೇ ಈ ಬದುಕಿಗೊಂದು ಅರ್ಥ ಸಿಗಬಹುದು…. ಈ ಸಂತೋಷವೇ ನಮ್ಮ ಆರೋಗ್ಯ ಆಯಸ್ಸು ಹಾಗೂ ನೆಮ್ಮದಿಗೆ ಮೂಲಕಾರಣ…

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ...

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ...

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು...

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ...