ನಮ್ದು ಏಳು ವರ್ಷದ ಪ್ರೆಂಡ್ ಶಿಪ್. ಒಂದು ದಿನ ಕಾರಣ ಇಲ್ಲದೆ ಅವಳು ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಳು. ಲೆಕ್ಕವಿಲ್ಲದಷ್ಟು ಬಾರಿ ನಾನಾಗೇ ಮಾತನಾಡಿಸಿದರೂ ಅವಳು ಹ್ಞಾಂ, ಹ್ಞೂಂ, ಹಾಗೇನಿಲ್ಲ ಸುಮ್ನೆ ಅಂತಷ್ಟೇ ಉತ್ತರಿಸುತ್ತಿದ್ಲು.ಅವಳ ನೆನಪಾದಾಗಲೆಲ್ಲ ನನಗೆ ಯಾವ ಕೆಲಸಾನು ಮಾಡೋಕೆ ಮನ್ಸಾಗಲ್ಲ. ಕಾರಣ ಹೇಳದೆ ದೂರ ಆಗಿದ್ದು ಮನಸ್ಸಿಗೆ ಒಂಥರಾ ಹಿಂಸೆ ಆಗುತ್ತೆ. ….ಇದು ನನ್ನ ಜೊತೆ ಕಾಲೇಜಿಗೆ ಬರುತ್ತಿದ್ದ ಗೆಳತಿ ತಾನಿರುವ ಪಿಜಿ ಸ್ನೇಹಿತರೊಂದಿಗೆ ಆಗಾಗ ಹೇಳುವ ಮಾತು.
ನಾವಿಬ್ರೂ ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ವಿ. ಆರಂಭದಲ್ಲಿ ನಮ್ಮ ರಿಲೇಷನ್ಶಿಪ್ ಚೆನ್ನಾಗಿಯೇ ಇತ್ತು. ನನ್ನ ಫೋನ್ ಬ್ಯೂಸಿ ಬಂದಾಗಲೆಲ್ಲಾ ಸುಮ್ಮನಿರುತ್ತಿದ್ದ ಆತ ದಿನಕಳೆದಂತೆ ಅನುಮಾನಿಸೋಕೆ ಶುರುಮಾಡಿದ. ನಾನು ಮನೆಯವರೊಂದಿಗೆ ಮಾತನಾಡುವುದನ್ನೂ ಸಹಿಸಿಕೊಳ್ಳದಷ್ಟು ಪೊಸೆಸಿವ್ ಆದ. ಇದೇ ಕಾರಣಕ್ಕೆ ಅವನಿಗೂ ನನಗೂ ಯಾವಾಗಲೂ ಜಗಳ. ಕೆಲವೊಮ್ಮೆ ವಾರಗಟ್ಟಲೆ ಮಾತು ಬಿಡುತ್ತೇವೆ. ನಮ್ಮ ಸಂಬಂಧ ಬ್ರೇಕ್ ಆಗುವ ಭಯ ಕಾಡುತ್ತಿದೆ ಇದು ಶಿವಮೊಗ್ಗದ ಎಂಬಿಬಿಎಸ್ ವಿದ್ಯಾರ್ಥಿನಿ ರಮ್ಯಾಳ ಅಳಲು.
ಹೌದು ಇಂತಹ ಸಮಸ್ಯೆಗಳು ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಫ್ರೆಂಡ್ಸ್ ಅಷ್ಟೇ ಅಲ್ಲದೆ, ರಕ್ತಸಂಬಂಧಿ, ಒಡನಾಡಿಗಳ ನಡುವೆಯೂ ಚಿಕ್ಕಪುಟ್ಟ ಕಾರಣಕ್ಕೆ ಸಂಬಂಧ ಮುರಿದು ಬೀಳುತ್ತವೆ. ಕೆಲವೊಮ್ಮೆ ಸನ್ನಿವೇಶಗಳು ಕೂಡ ಇದಕ್ಕೆ ಕಾರಣವಾಗಬಹುದು.ಮಾನವ ಸಂಘಜೀವಿ. ಒಂಟಿಯಾಗಿ ಬದುಕಲಾರ. ಪ್ರತಿಯೊಬ್ಬರಿಗೂ ತಮ್ಮ ಕಷ್ಟ ಸುಖ ಹಂಚಿಕೊಳ್ಳಲು ಆತ್ಮೀಯರೊಬ್ಬರು ಇರಲೇಬೇಕು.
ತಿಳಿದೋ, ತಿಳಿಯದೋ ನಮ್ಮಿಂದ ಆಗುವ ಕೆಲವು ವರ್ತನೆಗಳು ಆತ್ಮೀಯರನ್ನು ಶಾಶ್ವತವಾಗಿ ನಮ್ಮಿಂದ ದೂರಸರಿಸಿ ಬಿಡುತ್ತದೆ. ಈ ಬಗ್ಗೆ ಸ್ವಲ್ಪ ಎಚ್ಚರ ವಹಿಸುವುದು ಉತ್ತಮ.
ಸಂಬಂಧ ಶಾಶ್ವತವಾಗಿ ಇರಬೇಕಾದರೆ ಒಳ್ಳೆಯ ಹಾಗೂ ಸಕಾರಾತ್ಮಕ ಆಲೋಚನೆಗಳು ಇರಬೇಕು. ಎಲ್ಲದಕ್ಕಿಂತ ಮಿಗಿಲಾಗಿ ಅವರ ನಡುವೆ ವಿಶ್ವಾಸ ,ಪ್ರೀತಿ ,ನಂಬಿಕೆ ಗೌರವಗಳು ನಿರಂತರವಾಗಿರಬೇಕು. ಸಣ್ಣದೊಂದು ಜಗಳ, ರಾಜಿ , ಮುನಿಸು ಎಲ್ಲವೂ ಕ್ಷಣಿಕವಾಗಬೇಕು. ಆಗಾಗೆ ತಮಾಷೆಯೂ ಇರಬೇಕು. ಸರಿ-ತಪ್ಪುಗಳು ಅವಲೋಕನದ ಜೊತೆಗೆ ತಾಳ್ಮೆಯು ಮುಖ್ಯ.
ಮಾತು ನಿಲ್ಲಿಸಿದರೆ ಸಮಸ್ಯೆ ಜಾಸ್ತಿಯೇ ಹೊರತು ನಿಲ್ಲುವುದಿಲ್ಲ. ಆದರೆ ವಾತಾವರಣ ತಿಳಿಯಾಗುವವರೆಗೂ ಕೋಪ ಹೆಚ್ಚಿದ್ದವರು ಮಾತು ಕಡಿಮೆ ಮಾಡುವುದು ಉತ್ತಮ.ಆತ್ಮೀಯರಿಂದ ಆಕಸ್ಮಿಕವಾಗಿ ನಡೆದ ಘಟನೆಯೊಂದು ನೋವುಂಟು ಮಾಡಿತು ಎಂದಾಕ್ಷಣ ಅವರನ್ನು ಶತ್ರುಗಳಂತೆ ಕಾಣದಿರು.
ಉದ್ದೇಶಪೂರ್ವಕವಲ್ಲದ ಆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಬಿಟ್ಟರೆ ,ಅಷ್ಟು ವರ್ಷದ ಬಾಂಧವ್ಯದಲ್ಲಿ ಸಣ್ಣದೊಂದು ಬಿರುಕು ಮೂಡಲು ಶುರುವಾಗುತ್ತದೆ.ಇದು ಮುಂದೊಂದು ದಿನ ಶಾಶ್ವತವಾಗಿ ಸಂಬಂಧವನ್ನೇ ಬೇರ್ಪಡಿಸುತ್ತವೆ.
ಪ್ರಾಮಿಸ್ ಮಾಡಿಯೂ ತಡವಾಗಿ ಬಂದರೆ ಅಥವಾ ಕೆಲಸ ಮಾಡದಿದ್ದರೆ ಸಣ್ಣದೊಂದು ಕೋಪದಲ್ಲಿ ಇಟ್ಸ್ ಓಕೆ .ಇನ್ನೊಂದು ಸಲ ಹೀಗೆ ಮಾಡಬೇಡ ಅನ್ನಿ.
ಆ ಮಾತು ಅವರ ಮನ ಕಟ್ಟುವಂತಿರಲಿ.
ಇನ್ನೊಮ್ಮೆ ಹೀಗಾಗುವುದು ಅಪರೂಪ.
ತಪ್ಪುಗಳಾಗುವುದು ಸಹಜ. ಅದನ್ನು ತಿದ್ದಿ ಅರ್ಥಮಾಡಿಸಿ, ಅದನ್ನೇ ಪದೇಪದೇ ಹೇಳುತ್ತಿರಬೇಡಿ.ಹೀಗೆ ಮಾಡಿದರೆ ನಿಮ್ಮ ಮೇಲಿರುವ ಧನಾತ್ಮಕ ಭಾವನೆ ಶಾಶ್ವತವಾಗಿ ಅಳಿಯಬಹುದು.
ಜಗಳ ಮಾಡದ ಮನುಷ್ಯನಿಲ್ಲ. ಇದು ತೀವ್ರ ಸ್ವರೂಪ ಪಡೆದುಕೊಳ್ಳುವ ಮುನ್ನವೇ ಸಂತಾನವಾಗಲಿ.ಈ ನಡುವೆ ನೀವು ಬೇಜಾರು ಅಥವಾ ಕೋಪದಲ್ಲಿ ಇತರೆ ಸ್ನೇಹಿತರೊಂದಿಗೆ ಕಾಲಕಳೆಯಲು ಪ್ರಾರಂಭಿಸಿದರೆ ಅವರಿಗೆ ಸಹಿಸಿಕೊಳ್ಳಲು ಕಷ್ಟ.
ನಿಮಗೆ ಅವರು ಬೇಕಿದ್ದರೆ ಹೇಗೆ ಮಾಡುವುದು ಸೂಕ್ತವಲ್ಲ. ಒಬ್ಬರಿಂದ ತಪ್ಪುಗಳು ಸಂಭವಿಸಿದಕ್ಕಿಂತ ಎರಡೂ ಕಡೆಯಿಂದಲೂ ಆಗಬಹುದಲ್ಲವೇ ? ಸಮಸ್ಯೆ ಏನೆಂದು ಅರಿತು ಕುಳಿತು ಬಗೆಹರಿಸಿಕೊಳ್ಳಿ. ಕೆಲವೊಮ್ಮೆ ಸಣ್ಣಪುಟ್ಟ ಜಗಳಗಳೇ ದೊಡ್ಡದಾಗಿ ಬೆಳೆದು ಮನಸ್ತಾಪ ಉಂಟಾಗುತ್ತವೆ. ದೂರ ಆಗುವ ಮುನ್ನವೇ ಈ ಬಗ್ಗೆ ತಾಳ್ಮೆಯಿಂದ ಮಾತನಾಡಿ. ತಪ್ಪು ಆಗಿರುವುದೆಲ್ಲಿ ಎಂಬುದನ್ನು ಅರಿತು ಸಾರಿ ಹೇಳಿ.
ಆತ್ಮೀಯರು ಹೊಸ ಬಟ್ಟೆ ಹಾಕಿಕೊಂಡು ಬಂದಾಗ ಅವರೊಡನೆ ಮೆಚ್ಚುಗೆಯ ನೋಟ ಬೀರಿ. ಅಡುಗೆ ರುಚಿಸದಾದಾಗ ನೀನು ತುಂಬಾ ಚೆನ್ನಾಗಿ ಅಡುಗೆ ಮಾಡ್ತಿಯ. ಆದ್ರೂ ಇವತ್ತು ಏನೋ ಬದಲಾಗಿದೆಯಲ್ಲ ?ಎಂದು ಹೇಳಿ. ಇದು ಅವರಿಗೆ ನಿಮ್ಮಲ್ಲಿರುವ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ.
ಹೇಳಿದ್ದನ್ನೆಲ್ಲವೂ ಕೇಳಿಸಿಕೊಳ್ಳುವ ಎರಡು ಕಿವಿಗಳು ಇರಬೇಕು. ಅದು ಆತ್ಮೀಯರದ್ದೇ ಆದರೆ ಅವರಷ್ಟು ಸಂತೃಪ್ತರು ಯಾರೂ ಇಲ್ಲ. ಕೆಲವೊಮ್ಮೆ ಇಡೀ ಆಯಾಸ, ಟೆನ್ಶನ್ ಎಲ್ಲದಕ್ಕೂ ನಿಮ್ಮ ನಗುವೆ ರಾಮಬಾಣವಾಗಬಹುದು.
ದಿನಕ್ಕೊಮ್ಮೆಯಾದರೂ ಒಟ್ಟಿಗೆ ಕೂತು ಪ್ರೀತಿಯಿಂದ ಮಾತನಾಡಿ. ಅವರ ಸಮಸ್ಯೆಗಳನ್ನು ಆಲಿಸಿ. ನೀವು ಆತ್ಮೀಯರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದೇ ಇದ್ದರೂ, ತನ್ನ ನೋವು ದುಃಖವನ್ನು ಕೇಳುವವರು ಇದ್ದಾರೆ ಏನ್ನುವ ತೃಪ್ತಿ ಅವರಿಗಿರುತ್ತದೆ.
ಬದುಕಿನ ಪ್ರತಿಕ್ಷಣವನ್ನೂ, ಸಣ್ಣಪುಟ್ಟ ಸಂತೋಷಗಳನ್ನು ಅನುಭವಿಸುವುದೇ ಸ್ನೇಹ. ಪರಸ್ಪರ ವ್ಯಕ್ತಿತ್ವ, ಅಭಿಪ್ರಾಯ, ಕನಸು ,ಗುರಿಗಳನ್ನು ಗೌರವಿಸುವುದು ಜೀವನ ಪ್ರೀತಿ. ಇವೆರಡಿದ್ದರೆ ಸುಖಮಯ ಜೀವನ ನಿಮ್ಮದು…
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Latest News on WhatsApp

Why Keelambi Media Lab Pvt Ltd ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App

KLIVE Android App on Google Play Store

Download the most loved Klive App for your Android phone or tablet.