Friday, September 27, 2024
Friday, September 27, 2024

ಹಣ್ಣುಗಳ ನೋಡಿರಣ್ಣ

Date:

ಕೃಷಿಯೇ ನಮ್ಮೆಲ್ಲರ ಜೀವಾಳ. ಕೃಷಿ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಒಂದಿಲ್ಲೊಂದು ಆವಿಷ್ಕಾರಗಳು ನಡೀತಾನೇ ಇರುತ್ತೆ. ಸಾಮಾನ್ಯವಾಗಿ ಯುವಕರು ಕೃಷಿ ಮಾಡೋದನ್ನ ನೀವೆಲ್ಲ ನೋಡಿರುತ್ತೀರಾ.

ಆದರೆ ಹಿಂಡೂಮನೆ ಫಾರ್ಮ್ ನಲ್ಲಿ ಒಬ್ಬರಲ್ಲ ಇಬ್ಬರು ಯುವತಿಯರು ಇಂಜಿನಿಯರಿಂಗ್ ಪದವಿ ಮುಗಿಸಿ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿಯನ್ನೇ ತಮ್ಮ ಜೀವಾಳವನ್ನಾಗಿಕೊಂಡಿದ್ದಾರೆ.

ಅದ್ರಲ್ಲೂ ವಿಶೇಷತೆ ಏನಪ್ಪಾ ಅಂದ್ರೆ, ಇವರ ತಂದೆ ಕೂಡ ಅಪ್ಪಟ ಕೃಷಿಕರು. ಇವರ ಹೆಸರು ರಾಜೇಂದ್ರ ತಿಮ್ಮಪ್ಪ ಹೆಗಡೆ.
ಕೃಷಿತೋ ನಾಸ್ತಿ ದುರ್ಬಿಕ್ಷ್ಯಂ: ಎನ್ನುವ ಉಕ್ತಿ ಸಾಕಾರಗೊಂಡಿರುವುದನ್ನು ನೋಡಲು ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿಯ ಹಿಂಡೂಮನೆ ಫಾರ್ಮ್ ಗೆ ಭೇಟಿ ನೀಡಬೇಕು.

ಸಾಮಾನ್ಯವಾಗಿ ಮಲೆನಾಡಿನ ಫಾರ್ಮ್ ಗಳು ಎಂದರೆ ಅಡಕೆ, ಕಾಫಿ ,ಲವಂಗ, ಹಲಸು, ಬಾಳೆ, ಏಲಕ್ಕಿ, ವೆನೀಲಾ, ಜಾಯಿಕಾಯಿ ಇವೇ ಮುಂತಾದ ಬೆಳೆಗಳನ್ನು ಕಾಣುತ್ತೆವೆ. ಆದರೆ, ಹಿಂಡೂಮನೆ ಫಾರ್ಮ್ ಇದಕ್ಕಿಂತ ಇನ್ನಷ್ಟು ವಿಶೇಷವಾಗಿ ಗೋಚರಿಸುತ್ತದೆ.
ಪವಿತ್ರವಾದ ರುದ್ರಾಕ್ಷಿ ಮರದಿಂದ ಹಿಡಿದು ವಿದೇಶದ ರಂಬೂಟಾನ್, ಗ್ಯಾಕ್ ವರೆಗೂ ಮುನ್ನೂರು ಜಾತಿಯ ಹಣ್ಣಿನ ಸಸ್ಯ ಪ್ರಭೇದಗಳು ಇಲ್ಲಿವೆ.

ರಾಜೇಂದ್ರ ತಿಮ್ಮಪ್ಪ ಹೆಗಡೆ ನಾನಾ ಜಾತಿಯ ಹಣ್ಣು ಬೆಳೆಗಳ ಕೃಷಿಕರು . ಇವರ ಮಕ್ಕಳಾದ ಗಗನ ಹಾಗೂ ಮೇಘನಾ ತಂದೆಯ ಕೃಷಿಯಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ.
ಕೃಷಿ ಎಂದರೆ ಮೊದಲಿನಿಂದಲೂ ತುಂಬಾ ಇಷ್ಟ. ನಾನು ನನ್ನ ತಂಗಿ ಮೇಘನಾ ಸೇರಿ ಕೃಷಿಯಲ್ಲಿ ತೊಡಗಿದ್ದಿವಿ. ನಮ್ಮ ತಂದೆಯನ್ನು ನೋಡುತ್ತಾ ಬೆಳೆದಿರುವುದರಿಂದ ಕೃಷಿಯ ಮೇಲೆ ಒಲವು ಮೂಡಿತು. ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಇಬ್ಬರೂ ಕೃಷಿ ಮಾಡುತ್ತಿದ್ದೇವೆ ಎಂದು ರಾಜೇಂದ್ರ ತಿಮ್ಮಪ್ಪ ಹೆಗಡೆಯವರ ಪುತ್ರಿ ಗಗನಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇವರಿಬ್ಬರಿಗೂ ಹಿಂಡೂಮನೆ ಫಾರ್ಮ್ ನಲ್ಲಿರುವ ಎಲ್ಲಾ ಜಾತಿಯ ಗಿಡಗಳ ವೈಜ್ಞಾನಿಕ ಹೆಸರಿನಿಂದ ಹಿಡಿದು ಅವುಗಳ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ಇದೆ.
ಮಿರಾಕಲ್ ಫ್ರೂಟ್ ಎಂಬ ವಿಚಿತ್ರ ಹುಳಿಯನ್ನು ಸಿಹಿಯನ್ನಾಗಿಸುವ ಹಣ್ಣಿನಿಂದ ಹಿಡಿದು ನಾನಾ ಬಣ್ಣದ ಸ್ಟಾರ್ ಫ್ರೂಟ್ ಇಲ್ಲಿ ಕಾಣ ಸಿಗುತ್ತದೆ.

ಇಂಜನಿಯರ್ ಜ್ಞಾನವನ್ನು ಈ ಯುವತಿಯರಿಬ್ಬರೂ ಕೃಷಿಗೆ ಬಳಸಿಕೊಂಡಿದ್ದಾರೆ.
ಫಲಪುಷ್ಪ ಪ್ರದರ್ಶನಗಳಲ್ಲಿಯೂ ಹಿಂಡೂಮನೆ ಫಾರ್ಮ್ ಹಲವಾರು ಬಹುಮಾನಗಳನ್ನು ಗೆದ್ದುಕೊಂಡಿದೆ.
ನಮ್ಮ ಭಾರತ ಶೇಕಡ 70ರಷ್ಟು ಕೃಷಿಯನ್ನು ಅವಲಂಬಿಸಿದೆ. ಇದು ತಂತ್ರಜ್ಞಾನದ ಯುಗ. ಎಲ್ಲಾ ಕ್ಷೇತ್ರದಲ್ಲಿಯೂ ಸಹ ಮಾಹಿತಿ ತಂತ್ರಜ್ಞಾನದ ಮೂಲಕ ಆ ಕ್ಷೇತ್ರದ ಕ್ಷಿಪ್ರ ಬೆಳವಣಿಗೆಯನ್ನ ಮಾಡಬಹುದಾಗಿದೆ.

ಇಂದು ಅನೇಕರು ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದಾರೆ.
ಗಗನಾ ಮತ್ತು ಮೇಘನಾ ತಾವು ಕಲಿತ ಇಂಜಿನಿಯರ್ ಶಿಕ್ಷಣವನ್ನ ಕೃಷಿ ಪ್ರಗತಿಗೆ ಸಂಪೂರ್ಣ ತೊಡಗಿಸಿಕೊಂಡಿರುವುದು ನಿಜಕ್ಕೂ ಕೂಡ ಹೆಮ್ಮೆಯ ವಿಷಯ.

ಕೃಷಿ ಮೇಲಿನ ಇವರ ಪ್ರೀತಿ ,ಕಾಳಜಿ ಹೀಗೆಯೇ ಮುಂದುವರಿಯಲಿ ಎಂದು ಕೆಲೈವ್ ಬಳಗ ಹಾರೈಸುತ್ತದೆ.

ನೆರವು : ಶ್ರೀ ರಾಘವೇಂದ್ರ ಶರ್ಮಾ ತಲವಾಟ

ಹೆಚ್ಚಿನ ಮಾಹಿತಿಗೆ: ಶ್ರೀ ರಾಜೇಂದ್ರ ತಿಮ್ಮಪ್ಪ ಹೆಗಡೆ
ಮೊ.ನಂ: 8722129090

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Hassan Manikya Prakashana ಶಿವಮೊಗ್ಗದ ಕವಿ ಶಿ.ಜು.ಪಾಶಾ ಅವರಿಗೆ “ಜನ್ನ ಕಾವ್ಯ ಪ್ರಶಸ್ತಿ”

Hassan Manikya Prakashana ಹಾಸನದ ಮಾಣಿಕ್ಯ ಪ್ರಕಾಶನ(ರಿ) ರಾಜ್ಯಮಟ್ಟದ ಜನ್ನ ಕಾವ್ಯ...

Vajreshwari Co Operative Society ಶ್ರೀವಜ್ರೇಶ್ವರಿ ಸಹಕಾರ ಸಂಘದಿಂದ ಪ್ರತಿಭಾ ಪುರಸ್ಕಾರ

Vajreshwari Co Operative Society ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಶ್ರೀ...

Inner Wheel Shivamogga ದುರ್ಬಲರಿಗೆ ನೆರವು ನೀಡಿದಾಗ ಸೇವೆ ಸಾರ್ಥಕ- ಶಿಲ್ಪ ಗೋಪಿನಾಥ್

Inner Wheel Shivamogga ನಾವು ಮಾಡುವ ಸೇವೆ ಸಾರ್ಥಕಗೊಳ್ಳಬೇಕಾದರೆ...

National Education Committee ಬೆಳಗುತ್ತಿ & ಮಲ್ಲಿಗೇನಹಳ್ಳಿಯಲ್ಲಿ ಗಮನ ಸೆಳೆದ ಎನ್.ಎಸ್.ಎಸ್. ವಾರ್ಷಿಕ ಶಿಬಿರ

National Education Committee ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿರಂಗಪ್ರಯೋಗದ...