ಮುಂದಿನ ಒಂದು ವರ್ಷದ ಪೂರ್ಣ ನೀಲನಕ್ಷೆಯನ್ನು ಕೊಡುವ ಆಯವ್ಯಯ ಮಂಡನೆ ಮುಖ್ಯವಾಗಿದೆ. ಹಾಗಾಗಿ ಬಜೆಟ್ ಅಧಿವೇಶನ ದಲ್ಲಿ ಎಲ್ಲಾ ಸಂಸದರೂ ತಪ್ಪದೇ ಭಾಗಿಯಾಗಿ ಫಲಪ್ರದ ಚರ್ಚೆಗಳ ಮೂಲಕ ಯಶಸ್ವಿಯಾಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಂಸದರಿಗೆ ಕರೆ ನೀಡಿದ್ದಾರೆ.
ಬಜೆಟ್ ಅಧಿವೇಶನಕ್ಕೆ ಮುನ್ನ ಸಂಸತ್ ಹೊರಗಡೆ
ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಚುನಾವಣೆಗಳು ಹೆಚ್ಚಾಗುತ್ತಿರುವ ಕಾರಣ ಇತ್ತೀಚಿನ ಸಂಸತ್ ಕಲಾಪಗಳಿಗೆ ಅಡ್ಡಿಯಾಗುತ್ತಿರುವುದು ನಿಜ. ಇವುಗಳ ನಡುವೆಯೂ ದೇಶದಲ್ಲಿ ಆರ್ಥಿಕ ಪ್ರಗತಿ, ದೇಶಿಯ ಲಸಿಕೆಗಳ ಸಾಧನೆ ಮಾಡಲಾಗಿದೆ. ಈ ಬಾರಿ ಅಧಿವೇಶನದಲ್ಲಿ ಮುಕ್ತಮನಸ್ಸಿನ ಚರ್ಚೆ ನಡೆಯುವ ನಿರೀಕ್ಷೆ ನನಗಿದೆ ಎಂದರು.
ಸ್ಪೀಕರ್ ಒಮ್ ಬಿರ್ಲಾ ಅವರು ಸರ್ವಪಕ್ಷಗಳ ಸಭೆ ಹಾಗೂ ಲೋಕಸಭೆಯ ವ್ಯವಹಾರಗಳ ಸಲಹಾ ಸಮಿತಿ ಸಭೆ ನಡೆಸಿದರು.
ಬಜೆಟ್ ಅಧಿವೇಶನಕ್ಕೆ ಸಂಸದರೆಲ್ಲರೂ ಹಾಜರಾಗಲು ಮೋದಿ ಕಳಕಳಿ ಮನವಿ
Date: