ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿ ಶಾಂತಪುರ ಕೃಷ್ಣಮೂರ್ತಿ ಬಿನ್ ಹುಚ್ಚನಾಯ್ಕ
ಸರ್ವೆ ನಂಬರ್ 14ರಲ್ಲಿ ಸುಮಾರು 1994-95 ರಿಂದ ಒಂದು ನೀವೆಶನದಲ್ಲಿ ಸಣ್ಣ ಗುಡಿಸಿಲಿನಲ್ಲಿ ವಾಸಿಸುತ್ತಿದ್ದಾರೆ. ರಾತ್ರೋರಾತ್ರಿ ಬಲವಂತದಿಂದ ಡಿ. ಕೆ. ಮಂಜುನಾಥ್ ಅವರು ಮನೆ ಬಿಡಿಸಿ ಕಳುಹಿಸಿ ಮನೆಯನ್ನು ಕೆಡವಿ ನೆಲಸಮ ಮಾಡಿ ಜಾಗ ಕಬಳಿಸಿದ್ದಲ್ಲದೆ ತೊಡೆ ತಟ್ಟಿ ಬೆದರಿಕೆ ಹಾಕಿದ್ದರಿಂದ ನೊಂದು ಕೃಷ್ಣಮೂರ್ತಿ ಬಿನ್ ಹುಚ್ಚನಾಯ್ಕ್ ಕೋಡೂರಿನ ಏರ್ಟೆಲ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದರು.ಆಗ ಗ್ರಾಮಸ್ಥರು, ಪೋಲಿಸ್ ಅಧಿಕಾರಿಗಳು, ಫೈರ್ ಎಂಜಿನ್ ಅಧಿಕಾರಿಗಳು ಹಾಗೂ ಗ್ರಾಮಸ್ಥರು ನ್ಯಾಯ ದೊರಕಿಸಿ ಕೊಡುವುದಾಗಿ ಭರವಸೆ ಕೊಟ್ಟರು. ಇದಾದ ನಂತರ ಕೃಷ್ಣಮೂರ್ತಿಯವರು ಟವರ್ ಇಂದ ಕೆಳಗಿಳಿದು ಬಂದರು.
ತಹಶೀಲ್ದಾರ್ ಹಾಗೂ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನ್ಯಾಯ ದೊರಕಿಸಿ ಕೊಡುತ್ತೆವೆಂದು ಸಮಾಧಾನ ಪಡಿಸಿದರು.
ಸ್ಥಳದಲ್ಲಿ ತಹಶೀಲ್ದಾರ್ ರಾಜೀವ್
ಸರ್ಕಲ್ ಇನ್ಸ್ಪೆಕ್ಟರ್ ಮಧುಸೂದನ್
ಸಬ್ ಇನ್ಸ್ಪೆಕ್ಟರ್ ಶಿವಾನಂದ್
ಕೋಡೂರಿನ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುನಂದ,
ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ,
ಸದಸ್ಯರು ಕಲಗೋಡು ಉಮೇಶ್, ಸವಿತ ಕೆ ಎಸ್
ಹಾಗೂ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಸೌಜನ್ಯ
ಶ್ರೀ ಆದರ್ಶ ಶಾಕೊಳ್ಳಿ
ಕೋಡೂರಿನಲ್ಲಿ ಟವರೇರಿ ಆತ್ಮಹತ್ಯೆಗೆ ಪ್ರಯತ್ನ
Date: