ಓಮಿಕ್ರಾನ್ ರೂಪಾಂತರಿ ಯಿಂದ ಕಂಡುಬಂದಿರುವ ಕೊರೋನಾ ಮೂರನೆ ಅಲೆಯ ಅಬ್ಬರ ಫೆಬ್ರವರಿ 15ರ ನಂತರ ಇಳಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೊರೋನಾ ಸೋಂಕಿನ ಹೊಸ ಪ್ರಕರಣಗಳು ಬಹುತೇಕ ರಾಜ್ಯಗಳಲ್ಲಿ ನಿಧಾನವಾಗಿ ಇಳಿಕೆ ಕಾಣುತ್ತಿದೆ. ಅಥವಾ ಸ್ಥಿರವಾಗಿದೆ. ದೆಹಲಿ, ಮುಂಬೈ ಹೀಗೆ ಹಲವಾರು ಮಹಾನಗರಗಳಲ್ಲಿಯೂ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿಯಲ್ಲಿ ತಿಳಿಸಿದೆ.
ಶೀಘ್ರದಲ್ಲೇ ಪ್ಯಾಂಡೆಮಿಕ್ ನಿಂದ ಎಂಡೆಮಿಕ್ ಆಗಿ ಪರಿವರ್ತನೆ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಮೂರನೇ ಅಲೆ ಪರಿಣಾಮವನ್ನು ಕೊರೋನಾ ನಿರೋಧಕ ಲಸಿಕೆಗಳು ತಗ್ಗಿಸಿವೆ. ಆದರೂ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆ ಕೇಂದ್ರ ಆರೋಗ್ಯ ಸಚಿವಾಲಯವು ಸಂಪರ್ಕದಲ್ಲಿದೆ. ಅದರಲ್ಲೂ, ದೇಶದ ಶೇ. 74ರಷ್ಟು ವಯಸ್ಕರು ಲಸಿಕೆಯ 2 ಡೋಸ್ ಪಡೆದಿರುವುದು ಸಕರಾತ್ಮಕವಾಗಿದೆ.
ಆದ್ದರಿಂದ ಮೂರನೇ ಅಲೆಯಲ್ಲಿ ಸಾವಿನ ಪ್ರಮಾಣ ಗಣನೀಯವಾಗಿ ತಗ್ಗಿದೆ ಎಂದು ಸಚಿವಾಲಯದ ವರದಿಗಳು ತಿಳಿಸಿವೆ.