ಭಾರತೀಯ ಸಂಸ್ಕೃತಿಯಲ್ಲಿ ಸಾಂಸ್ಕೃತಿಕ ಕಲೆಗಳಾದ ನೃತ್ಯ, ಹಾಡು ಮತ್ತು ಇತರ ಕಲೆಗಳಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ , ಅಷ್ಟೇ ಪ್ರಾಮುಖ್ಯತೆ ನಾಟಕಕ್ಕೂ ಕೂಡ ಇದೆ.
ನಾಟಕವು ಎಲ್ಲವನ್ನು ಒಳಗೊಂಡ ಒಂದು ಸಮಗ್ರ ಕಲೆಯಾಗಿದೆ. ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ ಸಮಾಜದ ಸಂಬಂಧಗಳನ್ನು ಗಟ್ಟಿಗೊಳಿಸುವ ಸಾಮರ್ಥ್ಯ ನಾಟಕಕ್ಕೆ ಇದೆ. ನಾಟಕ ಪುರಾತನ ಕಲೆಯಾಗಿದೆ. ನಾಟಕಕ್ಕೆ ಪ್ರೇಕ್ಷಕರು ಜೀವಾಳ.
ಇಂದಿನ ಜಾಗತೀಕರಣ ಮತ್ತು ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯ ಪ್ರತಿಬಿಂಬ ಗಳಾಗಿರುವ ನಾಟಕಗಳು ಜನರನ್ನು ತಲುಪುತ್ತಿಲ್ಲ. ಸಿನಿಮಾ, ಟಿವಿ ಕಡೆಗೆ ಜನರು ಹೆಚ್ಚು ಆಕರ್ಷಿತರಾಗಿ ನಾಟಕಗಳನ್ನು ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿದೆ.
ಸಿನಿಮಾ ಜನರಿಗೆ ಎಷ್ಟು ಪ್ರಭಾವ ಬೀರುತ್ತದೆಯೋ ನಾಟಕವು ಸಹ ತನ್ನದೇ ಆದಂತಹ ಪರಿಣಾಮ ಬೀರುತ್ತದೆ.
ಶಿವಮೊಗ್ಗ ಜಿಲ್ಲಾ ಕಾಲೇಜು ರಂಗೋತ್ಸವ 2021-22 ನೇ ಸಾಲಿನ ಶಿವಮೊಗ್ಗ ರಂಗಾಯಣ ಆಯೋಜಿಸಿರುವ ಯುವಜನತೆಯೆಡೆಗೆ, ರಂಗಾಯಣದ ಹೆಜ್ಜೆ ಎಂಬ ಶೀರ್ಷಿಕೆ ಅಡಿಯಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.
ಯುವಕರಲ್ಲಿ ನಾಟಕದ ಅರಿವು ಮೂಡಲಿ ಎಂಬ ಉದ್ದೇಶದಿಂದ ಈ ರಂಗೋತ್ಸವವನ್ನು ಆಯೋಜಿಸಲಾಗಿದೆ.
” ತುರುಬು ಕಟ್ಟುವ ಹದನ” ಎಂಬ ನಾಟಕವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೀರ್ಥಹಳ್ಳಿ ವಿದ್ಯಾರ್ಥಿಗಳು ನಾಟಕ ಪ್ರದರ್ಶನ ಮಾಡಲಿದ್ದಾರೆ. ನಿರ್ದೇಶನ: ಶ್ರೀಕಾಂತ್ ಕುಮಟಾ.
ಸಮಯ: ಇಂದು ಸಂಜೆ 6 ಗಂಟೆಗೆ
ಸ್ಥಳ :ಶಾಂತವೇರಿ ಗೋಪಾಲಗೌಡ ರಂಗಮಂದಿರ ತೀರ್ಥಹಳ್ಳಿ.
ನಾಟಕಕ್ಕೆ ಕೇವಲ 100 ಜನರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ನೆನಪಿಡಿ ಪ್ರೇಕ್ಷಕರು ಕೊರೋನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.