Wednesday, October 2, 2024
Wednesday, October 2, 2024

ಕಿಸಾನ್ ದಿನ ಕೃಷಿಕರನ್ನ ಸ್ಮರಿಸೋಣ

Date:

ನಮ್ಮ ಭಾರತ ದೇಶದ ಶೇ. 70ರಷ್ಟು ಆದಾಯ ಮೂಲ ಕೃಷಿಯನ್ನೆ ಅವಲಂಬಿತವಾಗಿದೆ.
ರೈತರು ಭಾರತ ದೇಶದ ಬೆನ್ನೆಲುಬಾಗಿ ನಿಂತಿದ್ದಾರೆ. ಇಂದು ನಮ್ಮ ನಾಡು ಮಳೆ ಬೆಳೆ ಗಳನ್ನು ಕಂಡು ಸಮೃದ್ಧ ವಾಗಿರಲು ಈ ರೈತರೇ ಮೂಲಕಾರಣ. ನಮ್ಮದು ಕೃಷಿ ಪ್ರಧಾನ ದೇಶವಾಗಿರುವುದರಿಂದ ಇಲ್ಲಿ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಾವು ತಿನ್ನುವ ಆಹಾರ , ತರಕಾರಿಗಳು, ಹಣ್ಣು, ವಿವಿಧ ದವಸ ಧಾನ್ಯಗಳು, ರೈತರ ಕೊಡುಗೆಯಾಗಿದೆ. ಅನಾದಿ ಕಾಲದಿಂದಲೂ ನಮ್ಮ ದೇಶವನ್ನು ಮುನ್ನಡೆಸಿದ್ದು ಈ ರೈತರೇ ಎಂಬುದು ಹೆಮ್ಮೆಯ ವಿಷಯವೇ ಸರಿ.
ರೈತರಿಗಾಗಿ ನಡೆದ ಅದೆಷ್ಟೋ ಹೋರಾಟಗಳು, ಚಳುವಳಿಗಳು ಇತಿಹಾಸದ ಪುಟಗಳನ್ನು ಸೇರಿವೆ. ಅನ್ನ ಕೊಡುವ ರೈತನನ್ನು ಕೇವಲ ರೈತದಿನದಂದು ನೆನೆಯುವುದು ವಿಪರ್ಯಾಸ. ಶ್ರಮಜೀವಿಗಳಾದ ರೈತರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಇದಕ್ಕಾಗಿಯೇ ನಮ್ಮ ದೇಶದಲ್ಲಿ ಇವರಿಗಾಗಿ ಒಂದು ದಿನವನ್ನು ಮೀಸಲಾಗಿಡಲಾಗಿದೆ. ಅದುವೇ ಡಿಸೆಂಬರ್‌ 23. ಈ ದಿನವನ್ನು ದೇಶದೆಲ್ಲೆಡೆ ರೈತರ ದಿನ ಅಥವಾ ಕಿಸಾನ್‌ ದಿವಸ್‌ ಎಂದು ಆಚರಿಸಲಾಗುತ್ತದೆ.
ಮುಖ್ಯವಾಗಿ ಈ ದಿನವನ್ನು ಆಯ್ಕೆ ಮಾಡಲು ಇನ್ನೊಂದು ಕಾರಣವೂ ಇದೆ. ಈ ದಿನ ಭಾರತದ ಜನಪ್ರಿಯ ರೈತ ಮುಖಂಡ ದಿವಂಗತ ಚೌಧರಿ ಚರಣ್‌ ಸಿಂಗ್‌ ಅವರು ಹುಟ್ಟಿದ ದಿನವೂ ಹೌದು. ಅವರ ಸ್ಮರಣಾರ್ಥವಾಗಿಯೂ ಈ ದಿನವನ್ನು ರೈತರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ರೈತರು ಸಮಾಜಕ್ಕಾಗಿ ನೀಡುವ ಅನನ್ಯ ಸೇವೆಯನ್ನು ನೆನಪಿಸಲು ಹಾಗೂ ರೈತರು ಕುರಿತು ಜನಜಾಗೃತಿ ಮೂಡಿಸಲು ಕೃಷಿಕರ ದಿನವನ್ನು ಆಚರಿಸಲಾಗುತ್ತದೆ.
ರೈತರು ಕಷ್ಟದ ಸಮಯದಲ್ಲೂ ಎದೆಗುಂದದೇ , ಮಳೆ ಚಳಿ ಎನ್ನದೇ ಹಗಲು-ರಾತ್ರಿ ಕಷ್ಟಪಡುವ, ಜೀವನದ ನಿರ್ವಹಣೆಯನ್ನು ಮಾಡುವ ಪರಿಯನ್ನು ಜನಸಾಮಾನ್ಯರಿಗೆ ತಿಳಿಸುವ ಸದಾಶಯವನ್ನು ಈ ದಿನ ಒಳಗೊಂಡಿದೆ. ಕನಿಷ್ಠ ವಿದ್ಯಾಭ್ಯಾಸ ಇಲ್ಲದೆ ಇದ್ದರೂ ರೈತರು ಕೃಷಿಯನ್ನೇ ಅವಲಂಬಿಸಿ ನಾಡಿನ ಜನರಿಗೆ ಅನ್ನದಾನವನ್ನು ಮಾಡುತ್ತಿದ್ದಾರೆ. ಅವಶ್ಯಕತೆಗಿಂತಲೂ ತಟ್ಟೆಯ ತುಂಬಾ ಅನ್ನವನ್ನು ಹಾಕಿಸಿಕೊಂಡು ಚೆಲ್ಲುವ ನಮಗೆ ಅನ್ನದ ಬೆಲೆ ತಿಳಿಯುವುದೇ ಇಲ್ಲ. ಆದರೆ, ಒಂದು ತುತ್ತು ಅನ್ನಕ್ಕಾಗಿಯೂ ಪರದಾಡುವ ಜನರು ನಮ್ಮೊಂದಿಗೆ ಇದ್ದಾರೆ.
ಅದರಲ್ಲೂ ಭಾರತದಲ್ಲಿನ ರೈತರ ಕಷ್ಟ ಹೇಳತೀರದು. ಸರ್ಕಾರವೂ ಸಹ ರೈತರ ಸಮಸ್ಯೆಗಳನ್ನು ಬಗೆಹರಿಸಲು ಹಲವಾರು ಪ್ರಯತ್ನಗಳನ್ನು ನಡೆಸುತ್ತಲೇ ಇದೆ. ಕೃಷಿಗೆ ಅಗತ್ಯವಾದ ಆಧುನಿಕ ಸೌಲಭ್ಯಗಳನ್ನು ಈಗ ಸುಲಭವಾಗಿ ಲಭ್ಯವಿದ್ದರೂ, ಹಲವಾರು ರೈತರು ಆಧುನಿಕ ತಂತ್ರಜ್ಞಾನವನ್ನು ತಮ್ಮ ಕೃಷಿ ಭೂಮಿಯನ್ನು ಅಳವಡಿಸಿಕೊಳ್ಳಲು ಅಶಕ್ತರಾಗಿದ್ದಾರೆ. ಆದರೂ ಸಹ ನಾಡಿನ ಜನತೆಗೆ ಅನ್ನ ನೀಡುವ ಕೆಲಸವನ್ನು ಎಂದಿಗೂ ನಿಲ್ಲಿಸುವುದಿಲ್ಲ.
ಅದೆಷ್ಟೋ ಕೃಷಿಕರು ಕೃಷಿಯನ್ನುಆದಾಯಕ್ಕಾಗಿ ಅಲ್ಲದಿದ್ದರೂ , ನೆಮ್ಮದಿಯ ಬದುಕಿಗಾಗಿ ಕೃಷಿಯನ್ನು ತಮ್ಮ ಬದುಕಿನ ಭಾಗವಾಗಿಯೇ ಸ್ವೀಕರಿಸುತ್ತಾರೆ. ಸರ್ಕಾರವು ರೈತರ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ. ಜನಸಾಮಾನ್ಯರು ಹಾಗೂ ಸರ್ಕಾರವು ರೈತರ ಕಷ್ಟಗಳನ್ನು ಅರ್ಥಮಾಡಿಕೊಂಡು, ಅವರಿಗೆ ಅಗತ್ಯವಿರುವ ಸಾಮಾನ್ಯ ಜ್ಞಾನ, ಕೃಷಿ ಸಂಬಂಧಿತ ತರಬೇತಿಗಳು, ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ರೈತರನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿಸಲು ಸಾಧ್ಯವಾಗುತ್ತದೆ.
ಇಂದು ನಾವು ನೀರು ಹೊತ್ತು ಹೊಟ್ಟೆ ತುಂಬಾ ಊಟ ಮಾಡಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದೆವೆ. ಇದಕ್ಕೆಲ್ಲ ಮೂಲ ಕಾರಣ ನಮ್ಮ ರೈತರು. ಹಾಗಾಗಿ ನಾವು ಕೇವಲ ರೈತ ದಿನದಂದು ಕೃಷಿಕರಿಗೆ ಗೌರವ ಸೂಚಿಸುವುದಲ್ಲದೆ ಪ್ರತಿದಿನವೂ ಅವರ ಸೇವೆಗಾಗಿ ಅಭಿನಂದನೆಯನ್ನು ಸಲ್ಲಿಸುತ್ತಿರಬೇಕು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...