Sunday, December 14, 2025
Sunday, December 14, 2025

ಮುಂದಿನ ರೇಸಿನಲ್ಲಿ ಗೆಲ್ಲುವ ಕುದುರೆ ಯಾವುದು?

Date:

ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳು ಅನೇಕ ದಿಢೀರ್ ಫಲಿತಾಂಶಗಳನ್ನು ಕಾಣುತ್ತಿವೆ. ಮೋದಿ ಅಲೆಯಲ್ಲಿ ಒಂದು ಅವಧಿ ಸಂಸತ್ತಿನಲ್ಲಿ ಹೊಸ ವಾತಾವರಣ ಸೃಷ್ಟಿಯಾಗಿತ್ತು. ಎರಡನೇ ಅವಧಿಯಲ್ಲಿ ಕೊನೆಯ ವರ್ಷ ಅಂದರೆ ಸಂಸತ್ತಿನ ಮಹಾ ಚುನಾವಣೆ ಸಂದರ್ಭ ತುಸು, ಮೋದಿ ಅಲೆಗೆ ಕಾಣದ ‘ಮಂದ’ ಪ್ರತಿಕ್ರಿಯೆ ನಿರ್ಮಾಣವಾಗಿತ್ತು. ಇದು ಮೋದಿ ಅವರ ತಪ್ಪಲ್ಲ, ರಾಜ್ಯದಲ್ಲಿನ ನಾಯಕರ ಒಳಜಗಳಗಳು, ನಾಯಕತ್ವಕ್ಕೆ ಸ್ಪರ್ಧೆಗಳು, ಸಾರ್ವಜನಿಕ ಇಮೇಜನ್ನು ಸೃಷ್ಟಿಸಿಕೊಳ್ಳುವಲ್ಲಿ ವಿಪಲತೆ, ಇನ್ನೂ ಅನೇಕ ಕಾರಣಗಳಿವೆ.
ಇದೇ ರೀತಿಯ ಸನ್ನಿವೇಶ ಕಾಂಗ್ರೆಸ್ ಗೂ ಇತ್ತು. ಏಕೆಂದರೆ ರಾಜೀವ್ ಗಾಂಧಿಯವರು ಒಂದು ಲೋಕಸಭಾ ಕ್ಷೇತ್ರದಲ್ಲಿ ಪರಾಜಯ. ಮತ್ತೊಂದರಲ್ಲಿ ಗೆಲುವು. ಹಾಗೆಯೇ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭಾ ಚುನಾವಣೆಯಲ್ಲಿ ಅವರ ಸೋಲು-ಗೆಲುವು.
ಇನ್ನು ಜೆಡಿಎಸ್ ನಲ್ಲಿ ಕುಮಾರಣ್ಣ ಏಕಮೇವಾದ್ವತೀಯ ನಾಯಕರು. ಆದರೆ ತಳಮಟ್ಟದಲ್ಲಿ ಸಂಘದ ಚಟುವಟಿಕೆ ಮೊದಲಾದ ಕಾರಣ ಅವರ ಪಕ್ಷವು ಬಲವಾದ ಹೆಜ್ಜೆಯೂರಲು ವಿಫಲವಾಯಿತು. ಕುಟುಂಬ ರಾಜಕಾರಣ ಅವರು ಪಕ್ಷದ ದುರ್ಬಲತೆ. ಈ ದೌರ್ಬಲ್ಯ ಎಲ್ಲ ಪಕ್ಷದಲ್ಲೂ ಇದೆ. ಆದರೆ ಪಕ್ಷವನ್ನು ಮುನ್ನಡೆಸುವಲ್ಲಿ ಸೂಕ್ತ ಸದೃಢ ಯೋಜನೆ, ಉಪಾಯಗಳ ಕೊರತೆ ಇದೆ. ಇದು ಯಾವಾಗಲೂ ಜೆಡಿಎಸ್ ಪಕ್ಷವನ್ನು ಕಾಡುವ ಸಮಸ್ಯೆಯಾಗಿದೆ. ಒಟ್ಟಿನಲ್ಲಿ ಮೂರು ಪಕ್ಷಗಳು ಒಂದಿಲ್ಲೊಂದು ಕಾರಣಗಳಿಂದ ಥಂಪಿಂಗ್ ಮೆಜಾರಿಟಿ ಹಂತದಲ್ಲಿ ದುರ್ಬಲವಾಗಿದೆ. ಆಡಳಿತದಲ್ಲಿ ಜನತೆಯಲ್ಲಿ ವಿಶ್ವಾಸಾರ್ಹ ನಂಬಿಕೆ ಮೂಡಿಸಬೇಕು. ಗೆದ್ದ ಮೊದಲ ವರ್ಷಗಳಲ್ಲಿ ಹಾಗೆ ಮಾಡಿ, ನಂತರ ತಮ್ಮದೇ ಒಳ ಜಗಳದಲ್ಲಿ ತಲ್ಲೀನರಾಗುವ ಸ್ವಭಾವ ದೂರ ಮಾಡಿದರೆ ಮೂರು ಪಕ್ಷಗಳಿಗೆ ಭವಿಷ್ಯವಿದೆ. ಯಾರು ಅದನ್ನು ಸಾಧಿಸುತ್ತಾರೋ ಕಾದು ನೋಡೋಣ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...