Friday, February 6, 2026
Friday, February 6, 2026

ಸಾರಿಗೆ ಇಲಾಖೆಯಲ್ಲಿ ನಕಲಿ ನೋಂದಣಿ ಜಾಲ ಪತ್ತೆ

Date:

ರಾಜ್ಯ ಸರ್ಕಾರಕ್ಕೆ ಅಧಿಕ ಆದಾಯವನ್ನು ತಂದುಕೊಡುವಲ್ಲಿ ಸಾರಿಗೆ ಇಲಾಖೆಯು ಒಂದು. ಆದರೆ ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ವಿಪರ್ಯಾಸವಾಗಿದೆ.

ಸಾರಿಗೆ ಇಲಾಖೆಯಲ್ಲಿ ಕೆಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಿಬ್ಬಂದಿಗಳು ಏಜೆಂಟರಿಗೆ ಕೈಜೋಡಿಸಿ ನಕಲಿ ನೋಂದಣಿ ಮಾಡುವ ಮೂಲಕ ಸರಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿರುವುದು ತಿಳಿದುಬಂದಿದೆ.

ತೆರಿಗೆ ಪಾವತಿಸಿ ಕೊಳ್ಳದೆಯೇ ಐಷಾರಾಮಿ ಕಾರುಗಳ ನಕಲಿ ನೋಂದಣಿ ಮಾಡಿ ಕಮಿಷನ್ ದೋಚುತ್ತಿದ್ದಾರೆ.

ಬೇರೊಂದು ಆರ್ ಟಿ ಓ ಕಚೇರಿಯಲ್ಲಿ ನೋಂದಣಿ ಆಗಿರುವ ವಾಹನದ ತೆರಿಗೆ ಪಾವತಿ ಚಲನ್ ಸಂಖ್ಯೆಯನ್ನು ವಾಹನ -1 ಅಂಶದ ಮೂಲಕ ಮತ್ತೊಂದು ವಾಹನಕ್ಕೂ ನಮೂದಿಸಿ ವಂಚಿತರಾಗಿದ್ದಾರೆ. ಅನ್ಯ ರಾಜ್ಯದ ವಾಹನಗಳಿಂದ ತೆರಿಗೆ ಕಾಣಿಸಿಕೊಳ್ಳದೆ ಕರ್ನಾಟಕದಲ್ಲಿ ನೋಂದಣಿ ಮಾಡಲಾಗುತ್ತಿದೆ. ಫ್ಯಾನ್ಸಿ ನಂಬರ್ ಪಡೆದ ಐಷಾರಾಮಿ ವಾಹನಗಳಿಂದ ತೆರಿಗೆ ಕಟ್ಟಿಕೊಳ್ಳದೆ ರಿಜಿಸ್ಟ್ರೇಷನ್ ಮಾಡಿಕೊಡಲಾಗುತ್ತದೆ. ವಾಹನ ಮಾಲೀಕರಿಗೆ ನೀಡಿರುವ ದಾಖಲೆಗಳು ಅಸಲಿ ಯಾಗಿದೆ, ತೆರಿಗೆ ರಸೀದಿಯಷ್ಟೇ ನಕಲಿಯಾಗಿದೆ.

ಈ ಹಗರಣದ ಕುರಿತು ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು ಆಂತರಿಕ ತನಿಖೆಯನ್ನು ಶುರು ಮಾಡಿದೆ. “ತೆರಿಗೆ ಕಟ್ಟಿಸಿಕೊಳ್ಳಲು ವಾಹನಗಳನ್ನು ನೊಂದಣಿ ಮಾಡಿಕೊಟ್ಟು ಅಕ್ರಮವೇ ಸಿಗುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕೆಲ ಆರ್ ಟಿ ಓ ಅಧಿಕಾರಿ, ಸಿಬ್ಬಂದಿ ಏಜೆಂಟರ ಜೊತೆ ಶಾಮೀಲಾಗಿ ಈ ಕೃತ್ಯ ಎಸಗಿರುವ ಅನುಮಾನವಿದೆ. ತೆರಿಗೆ ಪಾವತಿಸದೆಯೇ ಹೇಗೆ ವಾಹನಗಳನ್ನು ನೊಂದಣಿ ಮಾಡಿದರು ಎಂಬುದನ್ನು ಪತ್ತೆ ಮಾಡಲಾಗುವುದು. ಎಲ್ಲಾ ಆರ್ ಟಿ ಓ ಕಚೇರಿಗಳಲ್ಲೂ ವಾಹನಗಳ ನೋಂದಣಿ ಮಾಹಿತಿ ಪಡೆದು ಪರಿಶೀಲಿಸಲಾಗುವುದು” ಎಂದು ಸಾರಿಗೆ ಇಲಾಖೆ ಆಯುಕ್ತ ಎನ್.ಶಿವಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...