ಬೆಂಗಳೂರಿನ ಕಾಮಾಕ್ಷಿಪಾಳ್ಯದ ಕೈಗಾರಿಕಾ ಪ್ರದೇಶದಲ್ಲಿನ ಮಾಲಿನ್ಯಕ್ಕೆ ಸಂಬಂಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭಾರತೀಯ ವಿಜ್ಞಾನ ಸಂಸ್ಥೆಯು ಅತ್ಯಂತ ದುಬಾರಿ ಸಂಸ್ಥೆಯಾಗಿದೆ. ಕೇವಲ ನೀರಿನ ಗುಣಮಟ್ಟದ ಪರಿಶೀಲನೆಗಾಗಿ 20ಲಕ್ಷರೂ ಕೇಳಿರುವ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ ವಿಚಾರಣೆಯು ಸಿಜೆ ನೇತೃತ್ವದ ನ್ಯಾಯಪೀಠದ ಮುಂದೆ ನಿವಾಸಿಗಳ ಪರವಾಗಿ ಮಂಡಿಸಿದ ಸುಪ್ರೀಂಕೋರ್ಟ್ನ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ “ಮಾಲಿನ್ಯದ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಹಾಗಾಗಿ ಯಾವುದಾದರೂ ಮೂರನೇ ಏಜೆನ್ಸಿಗೆ ನೀಡುವುದು ಒಳ್ಳೆಯದು. ಐಐಎಸ್ಸಿಗೆ ಬೇಕಾದರೆ ವಹಿಸಬಹುದು” ಎಂದು ಸಲಹೆ ನೀಡಿದರು.
ಪ್ರಶಾಂತ್ ಭೂಷಣ್ ಅವರ ಈ ಸಲಹೆಗೆ ಸಿಜೆ “ಐಐಎಸ್ಸಿ ತುಂಬಾ ದುಬಾರಿ. ಇತ್ತೀಚೆಗೆ ಕೇವಲ ನೀರಿನ ಗುಣಮಟ್ಟದ ಪರಿಶೀಲನೆಗೆ 20ಲಕ್ಷರೂ ಪ್ರಸ್ತಾವನೆ ಕಳುಹಿಸಿದೆ. ಅದೂ ಮುಂಗಡವಾಗಿ ಹಣ ನೀಡಬೇಕಂತೆ. ಹಾಗಾಗಿ ಆ ಸಂಸ್ಥೆಯನ್ನು ಬಿಟ್ಟು ಬಿಡಿ” ಎಂದು ಮೌಖಿಕವಾಗಿ ಹೇಳಿದೆ.
ಕಳೆದ ವಾರ ನಡೆದ ಪ್ರಕರಣವೊಂದರ ವಿಚಾರಣೆ ವೇಳೆಯಲೂ ಸಿಜೆ “ಐಐಎಸ್ಸಿ ಬಗ್ಗೆ ನಮಗೆ ಯಾವುದೇ ಒಲವು ಉಳಿದಿಲ್ಲ. ಮಂಗಳೂರಿನ ಪಚ್ಚನಾಡಿ ಘನತ್ಯಾಜ್ಯ ಘಟಕದಿಂದ ಕುಡಿಯುವ ನೀರು ಕಲುಷಿತಗೊಂಡಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅದನ್ನು ನೋಡಿದ್ದೇವೆ. ನಮ್ಮ ದೃಷ್ಟಿಯಲ್ಲಿ ಐಐಎಸ್ಸಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ” ಎಂದು ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಬೇಸರ ವ್ಯಕ್ತಪಡಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.