Saturday, December 6, 2025
Saturday, December 6, 2025

ಹಸುವಿನ ಹೊಟ್ಟೆಯಲ್ಲಿ ಚಿನ್ನದಸರ!

Date:

ಶಿರಸಿಯ ಹೀಪನಹಳ್ಳಿ ಸಂಕದ ಮನೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಪಶುವೈದ್ಯರು ಹಸುವಿನ ಹೊಟ್ಟೆಯಿಂದ ಬಂಗಾರದ ಸರವನ್ನು ಹೊರತೆಗೆದಿರುವ ಘಟನೆ ನಡೆದಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಂಗಾರದ ಸರ ಕಾಣೆಯಾಗಿತ್ತು. ಈ ಸರವು ಹಸುವಿನ ಪತ್ತೆಹಚ್ಚಿ ಯಶಸ್ವಿ ಶಸ್ತ್ರಚಿಕಿತ್ಸೆ ಯ ಮೂಲಕ ಪಶುವೈದ್ಯರು ಹೊರತೆಗೆದಿದ್ದಾರೆ.

ಹಸುವಿನ ಎರಡನೆಯ ಹೊಟ್ಟೆಯೊಳಗಿನ ರಚನೆ ಜೇನುಗೂಡಿನಂತಿರುತ್ತದೆ. ಎಲ್ಲ ಭಾರವಾದ ವಸ್ತುಗಳು ಅಲ್ಲೇ ಇರುತ್ತವೆ. ಇದನ್ನು ಸುರಕ್ಷಿತವಾಗಿ ತೆಗೆದು ನಮ್ಮ ಕರ್ತವ್ಯ ಪೂರೈಸಿದ್ದೇವೆ ಪಶುವೈದ್ಯರಾದ ಡಾ. ರಾಜೇಶ್ ಅವರು ತಿಳಿಸಿದ್ದಾರೆ.

ದೀಪಾವಳಿಯ ದಿನ ಹೀಪನಹಳ್ಳಿಯ ಶ್ರೀಕಾಂತ ಹೆಗಡೆ ಅವರ ಮನೆಯ ಹಸುವಿಗೆ ಕಟ್ಟಿದ್ದ ಲಕ್ಷ್ಮಿ ಸರ ಕೆಳಗೆ ಬಿದ್ದು ಕಳೆದು ಹೋಗಿತ್ತು. ಎಷ್ಟು ಹುಡುಕಿದರು ಸರ ಮಾತ್ರ ಸಿಕ್ಕಿರಲಿಲ್ಲ. ಹುಡುಕಿ ಸುಸ್ತಾದ ಮಾಲೀಕರು ಸರವನ್ನು ತಿಂದಿದ್ದು ಹಸುವು ಅಥವಾ ಕರುವೊ ಎಂಬ ಅನುಮಾನದಲ್ಲಿ ಕೆಲವು ತಿಂಗಳು ಕಳೆದರು. ಆದರೂ ಸಹ ಸಗಣಿಯ ರೂಪದಲ್ಲಿ ಕೂಡ ಬಂದಿರಲಿಲ್ಲ.

ನಂತರ ಪಶು ಆಸ್ಪತ್ರೆಯ ಡಾ. ಪಿ. ಎಸ್ ಹೆಗಡೆ ಅವರು ಶೋಧಕ ಯಂತ್ರದೊಂದಿಗೆ ಪರಿಶೀಲಿಸಿ ನುಂಗಿದ್ದು ಹಸು ಎಂದು ಪತ್ತೆ ಹಚ್ಚಿದ್ದಾರೆ.

ಉಮ್ಮಚಗಿ ಶಸ್ತ್ರಚಿಕಿತ್ಸಾ ಪಶುವೈದ್ಯ ಡಾ. ರಾಜೇಶ್ ಅವರೊಂದಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ಹೊಟ್ಟೆಯಲ್ಲಿದ್ದ ಸರವನ್ನು ಹೊರತೆಗೆದಿದ್ದಾರೆ.

ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿದೆ. ರಘುಪತಿ ಭಟ್ ಗಡಿಗೆಹೊಳೆ, ಉಮ್ಮಚಗಿ ಯ ವಾಣಿ ಮತ್ತು ಶ್ರೀಧರ ಸಹಕಾರ ನೀಡಿದ್ದಾರೆ. ಸರದ ಜೊತೆಗೆ ಒಂದು ತಾಳಿ ಕರುವಿನ ಹೊಟ್ಟೆ ಸೇರಿದೆ. ಅದನ್ನು ಪಶುವೈದ್ಯರು ಪತ್ತೆಹಚ್ಚಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bangalore Television Centre ಕಲಾತ್ಮಕ ಧಾರಾವಾಹಿ ನಿರ್ಮಾಣ & ಫೋಕ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಲು ಅರ್ಜಿ ಆಹ್ವಾನ

Bangalore Television Centre ಬೆಂಗಳೂರು ದೂರದರ್ಶನ ಕೇಂದ್ರವು ನಿರ್ಮಿಸಲಿರುವ ಕಲಾತ್ಮಕ ಧಾರಾವಾಹಿಯನ್ನು...

ಭಗವದ್ಗೀತೆ ಪಠ್ಯದಲ್ಲಿ ಅಳವಡಿಸಲು ಸಚಿವ ಕುಮಾರಣ್ಣ ಬರೆದ ಪತ್ರಕ್ಕೆ ಅಶೋಕ ಜಿ.ಭಟ್ ಕೃತಜ್ಞತೆ

ಶಿವಮೊಗ್ಗದಲ್ಲಿ ಇತ್ತೀಚೆಗೆ ಭಗವದ್ಗೀತಾ ಅಭಿಯಾನವು ಅತ್ಯಂತ ಯಶಸ್ವಿಯಾಗಿ ನೆರವೇರಿತು.ರಾಜ್ಯಮಟ್ಟದ ಬೃಹತ್ಸಮಾರಂಭದಲ್ಲಿ ವಿವಿಧ...

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...