Sunday, December 14, 2025
Sunday, December 14, 2025

ಭಾರತ – ನ್ಯೂಜಿಲೆಂಡ್ ಕ್ರಿಕೆಟ್. ಟೀಮ್ ಇಂಡಿಯ ಗೆಲುವಿನಲೆಯಲ್ಲಿ.

Date:

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಾಲ್ಕನೇ ದಿನವಾದ ಸೋಮವಾರ 5 ವಿಕೇಟ್ ಗೆ 140 ರನ್ ಗಳಿಂದ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ತಂಡ, ಹಿಂದಿನ ಮೊತ್ತಕ್ಕೆ 27 ರನ್ ಸೇರಿಸಿ ಕೇವಲ ಒಂದೇ ತಾಸಿನೊಳಗೆ ಸರ್ವ ಪತನಗೊಂಡಿತು.
ಇದರೊಂದಿಗೆ ಆತಿಥೇಯ ತಂಡ ಒಂದುವರೆ ದಿನ ಬಾಕಿ ಇರುವಂತೆಯೇ ಬೃಹತ್ ರನ್ ಅಂತರದ ಜಯ ದಾಖಲಿಸಿದೆ.
ಪ್ರವಾಸಿ ತಂಡಕ್ಕೆ ಭಾರಿ ಅಂತರದ ಸೋಲಾಗಿದೆ. 2015ರಲ್ಲಿ ದೆಹಲಿಯಲ್ಲಿದ್ದ ಆಫ್ರಿಕಾ ವಿರುದ್ಧ 337 ರನ್ ಗಳಿಂದ ಜಯಗಳಿಸಿದ್ದು , ಇದುವರೆಗಿನ ಭಾರತದ ಅತಿ ದೊಡ್ಡ ಗೆಲುವಾಗಿತ್ತು.
ರವಿಚಂದ್ರನ್ ಅಶ್ವಿನ್ 34ಕ್ಕೆ 4 ಮತ್ತು ಜಯಂತ್ ಯಾದವ್49ಕ್ಕೆ 4 ಅವರ ಕರಾರುವಾಕ್ ಬೌಲಿಂಗ್ ನಿರ್ವಹಣೆ ನೆರವು ಪಡೆದ ಭಾರತ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 372 ರನ್ ಗಳ ಅಂತರದಿಂದ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು.
ಈ ಮೂಲಕ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿತು.
ಇದಲ್ಲದೆ, ಕಳೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಾನ್ಸ್ ಸೋಲಿಗೆ ಕೊಹ್ಲಿ ಬಳಗ ಸೇಡು ತೀರಿಸಿಕೊಂಡಿತು. ಈ ಜಯದೊಂದಿಗೆ ಐಸಿಸಿ ಟೆಸ್ಟ್ ರಾಂಕಿಂಗ್ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನಕ್ಕೆ ಏರಿದರೆ, ಕಿವೀಸ್ ದ್ವಿತೀಯ ಸ್ಥಾನಕ್ಕೆ ಕುಸಿಯಿತು.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಇತಿಹಾಸದ ಪುಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಟಿ 20 ಏಕದಿನ ಹಾಗೂ ಟೆಸ್ಟ್ ಸೇರಿ ಮೂರು ಮಾದರಿಯ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆದ್ದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ಗೆಲುವು ಕಂಡ ಬಳಿಕ ಅವರು ಈ ಹಿರಿಮೆಗೆ ಪಾತ್ರರಾದರು.
ಕೊಹ್ಲಿ 50 ಟೆಸ್ಟ್ ಪಂದ್ಯಗಳು,153 ಏಕದಿನ ಪಂದ್ಯಗಳು ಹಾಗೂ 59 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...