Friday, February 6, 2026
Friday, February 6, 2026

ಮಾನವರಿಗೆ ಮರ್ಕಟನ ಕಾಟ.

Date:

ಕರಿಮೂತಿ ಮಂಗ ಒಂದು ಕೆಂಪು ಟ್ಯಾಕ್ಟರ್ ಓಡಿಸುವ ಚಾಲಕರು ಹಾಗೂ ಟ್ಯಾಕ್ಟರ್ ಬಳಿ ಇದ್ದವರ ಮೇಲೆ ದಾಳಿ ಮಾಡುತ್ತಿರುವ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಸೊರಬ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ಕೆಂಪು ಟ್ರ್ಯಾಕ್ಟರ್ ಕಂಡ ತಕ್ಷಣ ಮಂಗವೊಂದು ದಾಳಿಮಾಡಲು ಯತ್ನಿಸುತ್ತದೆ.
ಇದುವರೆಗೂ ಎರಡು ಗ್ರಾಮಗಳಿಂದ ಸುಮಾರು 25 ಜನ ಮಂಗನ ದಾಳಿಗೆ ಒಳಗಾಗಿದ್ದಾರೆ. ಅಂಜನೇಯನ ಪ್ರತಿರೂಪ ಮಂಗನ ವೇಲು ಜನರಿಗೆ ಪೂಜನೀಯ ಭಾವನೆ ಇದೆ. ಹೀಗಾಗಿ ಮಂಗ ಕಚ್ಚಿ ಗಾಯಗೊಂಡು ಆಸ್ಪತ್ರೆಗಳಲ್ಲಿ ವಾರಗಟ್ಟಲೇ ಚಿಕಿತ್ಸೆ ಪಡೆದಿದ್ದಾರೆ.
ಆದರೆ ವಿನಾ ಮಂಗನಿಗೆ ತೊಂದರೆ ಕೊಟ್ಟಿಲ್ಲ. ಆದರೆ ಭಯಗೊಂಡ ಗ್ರಾಮಸ್ಥರು ಮಂಗನನ್ನು ಹಿಡಿದು ಪ್ರಾಣಿಸಂಗ್ರಹಾಲಯ ಇಲ್ಲವೇ ಅಭಯಾರಣ್ಯಕ್ಕೆ ಬಿಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಅರಣ್ಯ ಇಲಾಖಾಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಕೆಂಪು ಟ್ಯಾಕ್ಟರ್ ಚಾಲನೆ ಯಾದ ಕೂಡಲೇ ಚಾಲಕನ ಮೇಲೆ ಮಂಗ ದಾಳಿಮಾಡಲು ಮುಂದಾಗುತ್ತದೆ. ನನ್ನ ಮೇಲೆ ನಾಲ್ಕು ಬಾರಿ ದಾಳಿ ಮಾಡಿ ಕಚ್ಚಿದೆ. ಯಾರಿಗಾದರೂ ಪ್ರಾಣ ಹಾನಿ ಮಾಡುವ ಮುಂಚಿತವಾಗಿ ದಯಮಾಡಿ ಅರಣ್ಯ ಇಲಾಖೆಯವರು ಸೆರೆ ಹಿಡಿದು ಸ್ಥಳಾಂತರಿಸಬೇಕು ಎಂದು ಮಂಗನ ದಾಳಿಗೆ ಒಳಗಾದ ರುದ್ರೇಶ್ ಪೂಜಾರ್ ಅವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...