ವಿಶ್ವ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಸೆಮಿಫೈನಲ್ ಹಂತವು ಇಂದು ಭಾರತ ಮತ್ತು ಜರ್ಮನಿ ತಂಡಗಳ ನಡುವೆ ನಡೆಯಲಿದೆ.
ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಆರು ಬಾರಿ ಪ್ರಶಸ್ತಿ ಜಯಿಸಿರುವ ಜರ್ಮನಿಯನ್ನು ಮಣಿಸುವ ಸವಾಲು ಆತಿಥೇಯರ ಮುಂದಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 4-5 ರಿಂದ ಫ್ರಾನ್ಸ್ ಎದುರು ಸೋತಿತ್ತು. ನಂತರದ ಪಂದ್ಯಗಳಲ್ಲಿ ಅಮೋಘವಾದ ಆಟವಾಡಿ ನಾಕೌಟ್ ಹಂತ ತಲುಪಿತ್ತು. ಕ್ವಾರ್ಟರ್ಫೈನಲ್ನಲ್ಲಿ 1-0 ಇಂದ ಬಲಿಷ್ಠ ಬೆಲ್ಜಿಯಂ ತಂಡವನ್ನು ಮಣಿಸಿತು.
ಆದರೆ ಜರ್ಮನಿ ತಂಡವನ್ನು ಹಗುರವಾಗಿ ರಲ್ಲಿ ಪ್ರಶಸ್ತಿ ಜಯಿಸಿದ್ದು. ಆದರೆ ನಂತರ ಫೈನಲ್ ರಲ್ಲಿ ಮೂರನೇ ಸ್ಥಾನಪಡೆದಿತ್ತು. ಜರ್ಮನಿಯನ್ನು ಕಡೆಗಣಿಸುವಂತಿಲ್ಲ. ಬಹಳ ಒಳ್ಳೆಯ ಆಟಗಾರರು ಇದ್ದಾರೆ. ಅವರ ವೇಗ ಮತ್ತು ಕೌಶಲ್ಯಪೂರ್ಣ ಆಟಕ್ಕೆ ತಕ್ಕ ಪ್ರತಿತಂತ್ರ ಹೆಣೆಯಬೇಕು ಎಂದು ಭಾರತ ತಂಡದ ಕೋಚ್ ಗ್ರಹನ್ ಹೇಳಿದ್ದಾರೆ.