Saturday, September 28, 2024
Saturday, September 28, 2024

ಹೊಸ ಶಿಕ್ಷಣ ನೀತಿ ನಮಗೆಷ್ಟು ಅನುಕೂಲ

Date:

ಪೀಠಿಕೆ


ಒಂದು ದೇಶದ ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲಿಯ
ರಾಜಕೀಯ ಸಾಮಾಜಿಕ ಸಾಂಸ್ಕೃತಿಕ,ಆಥಿ೯ಕ
ಬದುಕನ್ನು ಸುಸ್ಥಿರವಾಗಿ ಕಟ್ಟಿಕೊಡುವುದಲ್ಲದೆ
ಆ ದೇಶದ ಸಾಂವಿಧಾನಿಕ ಆಶಯ ಮತ್ತು ಉದ್ದೇಶಗಳನ್ನು ಗಟ್ಟಿಗೊಳಿಸುವ ಒಂದು ಪ್ರಮುಖ ಸಾಧನವಾಗಿದೆ.
ಜುಲೈ,೨೦೨೦ ರಂದು ಕೇಂದ್ರ ಸರ್ಕಾರ ಸಚಿವ ಸಂಪುಟವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು
ಅಂಗೀಕರಿಸಿದ ನಂತರ ಎಲ್ಲೆಡೆ ,ಚಚೆ೯ಗಳು
ಪ್ರಾರಂಭವಾಗಿವೆ.
ಇದರನ್ವಯ ಭಾರತದಲ್ಲಿ ಶಾಲಾ ವ್ಯವಸ್ಥೆಯ ಹೊರಗಿರುವ ಎರಡು ಕೋಟಿ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಬೇಕು.
ಗಣತಂತ್ರ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ರೂಪಿಸುವ
ನೀತಿಗಳು ನಮ್ಮ ರಾಜ್ಯದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಎಷ್ಟರಮಟ್ಟಿಗೆ ಪೂರಕ ಎಂಬುದನ್ನು ಜನಗಳು ತೀಮಾ೯ನಿಸಬೇಕಿದೆ.ಅಲ್ಲದೆ ಈ ನೀತಿ ನಮ್ಮ ರಾಜ್ಯಸರ್ಕಾರವನ್ನು ಎಷ್ಟರಮಟ್ಟಿಗೆ ನಿಬಂಧನೆಗೊಳಪಡಿಸುತ್ತವೆ ಎಂಬುದನ್ನು ಭಾರತದ ಸಾಂವಿಧಾನಿಕ ಚೌಕಟ್ಟಿನಲ್ಲಿ ನೋಡಬೇಕು
ಮುಖ್ಯ ಅಂಶಗಳು
1.ಭಾರತ ಸಂವಿಧಾನದ 246ನೆ ವಿಧಿ ಅನ್ವಯ
ಶಿಕ್ಷಣ ಸಮವತಿ೯ ಪಟ್ಟಿಯಲ್ಲಿ ಸೇರಿಸಲಾಗಿದೆ.
ಹೀಗಾಗಿ ರಾಜ್ಯ ಶಾಸಕಾಂಗವು ಇಲ್ಲಿಯ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಶಿಕ್ಷಣ ವಿಷಯದಲ್ಲಿ ಕಾನೂನು ಮಾಡುವ ಪೂರ್ಣ ಅಧಿಕಾರವನ್ನು ಹೊಂದಿರುತ್ತದೆ. ಈ ಅಮೂಲ್ಯ ಹಕ್ಕು
ಕಾಪಾಡಿಕೊಳ್ಳವ ಅವಕಾಶ ಕಲ್ಪಿಸಬೇಕು.
2.ರಾಷ್ಟ್ರದ ಎಲ್ಲೆಡೆಯಿದ್ದಂತೆ ಕನಾ೯ಟಕದಲ್ಲಿಯೂ
ಶೇಕಡಾ ೮೦ಕ್ಕೂ ಹೆಚ್ಚು ಮಕ್ಕಳು ಸಕಾ೯ರಿ ಶಾಲೆಗಳಲ್ಲಿ
ಕಲಿಯುತ್ತಾರೆ.ಅವರೆಲ್ಲಾ ಹಿಂದುಳಿದ ಹಾಗೂ ಮಧ್ಯಮ
ವಗ೯ದ ಕುಟುಂಬದಿಂದ ಬರುವವರು.ಹೀಗಾಗಿ
ಸಕಾ೯ರಿ ಶಾಲೆಗಳ ಬಲವಧ೯ನೆಗೆ ಗಟ್ಟಿಯಾದ
ನೀತಿ ಇಂದಿನ ಅಗತ್ಯ. ಈ ಬಗ್ಗೆ ಸಡಿಲತೆ ತೋರಿದಲ್ಲಿ ಕಾಪೋ೯ರೇಟ್ ವ್ಯವಸ್ಥೆ ಮೇಲುಗೈ ಪಡೆಯುತ್ತದೆ ಹಾಗೂ ಶಿಕ್ಷಣ ವ್ಯಾಪಾರೀಕರಣವಾಗಿ ಮಾಪ೯ಟ್ಟು
ಸಾಮಾನ್ಯರು ಗುಣಮಟ್ಟದ ಶಿಕ್ಷಣ ಪಡೆಯುವಲ್ಲಿ ವಿಫಲರಾಗುತ್ತಾರೆ.
ಆಥಿ೯ಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ನಿದಿ೯ಷ್ಟವಾದ ನೀತಿ ಬೇಕಾಗಿದೆ.
3.ಕನಾ೯ಟಕ ರಾಜ್ಯದಲ್ಲಿ ಪಂಚಾಯತ್ ಆಡಳಿತ ವ್ಯವಸ್ಥೆ ಗಟ್ಟಿಯಾಗಿದೆ.ಇವರ ಮಾಗ೯ದಶ೯ನಕ್ಕೊಳಪಡುವ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಗಳು ಶಿಕ್ಷಣ ವ್ಯವಸ್ಥೆಯನ್ನು ಸಬಲಗೊಳಿಸಲು ಸಹಾಯಕವಾಗಿವೆ ಇದರಲ್ಲಿ ಮಕ್ಕಳು, ಶಿಕ್ಷಕರು,ಪಾಲಕರು ಜನಪ್ರತಿನಿಧಿಗಳು ಸೇರಿರುತ್ತಾರೆ.
ಅಲ್ಲದೆ ತಳಮಟ್ಟದಲ್ಲಿ ಸೇವೆ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಇದೆ.ಈ ಬಗ್ಗೆ ಶಿಕ್ಷಣ ನೀತಿ
ಯಲ್ಲಿ ಸ್ಪಷ್ಟ ನಿರೂಪಣೆ ಬೇಕು.
4.ಪೂವ೯ ಪ್ರಾಥಮಿಕ ಶಿಕ್ಷಣ ಕಾಯ೯ಕ್ರಮವನ್ನು
ಶಾಲಾ ಮಾತೆಯರನ್ನು ನಿಯುಕ್ತಿ ಗೊಳಿಸುವ ಮೂಲಕ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.ಹೊಸ ನೀತಿಯಲ್ಲಿ ಇದು ಸೇರಿದೆಯಾದರೂ ಬದ್ಧತೆ ಹಾಗೂ ದಶ೯ನದ ಆವಶ್ಯಕತೆ ಕಾಣುತ್ತದೆ.
ಮುಖ್ಯವಾಗಿ ೩ರರಿಂದ ೧೮ ವಷ೯ದ ಎಲ್ಲಾ ಮಕ್ಕಳಿಗೂ ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದ ವರೆಗೆ
ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒಂದು ಕಾನೂನು ಬದ್ಧ ಹಾಗೂ ನ್ಯಾಯ ಸಮ್ಮತ ಹಕ್ಕನ್ನಾಗಿಸುವಲ್ಲಿ ಸಂವಿಧಾನದ ತಿದ್ದುಪಡಿ ಬಗ್ಗೆ ಪ್ರಸ್ತಾವನೆಗೆ ಒತ್ತಾಸೆ
ಅಗತ್ಯವಿದೆ.
5) ಶಾಲಾ ಶಿಕ್ಷಣ ಬಗ್ಗೆ ಹೊಸ ನೀತಿ
1) ಈಗಿರುವ “10 + 2” ರಚನೆಯನ್ನು “5 + 3 + 3 + 4” ಮಾದರಿಯೊಂದಿಗೆ ಬದಲಾಯಿಸಲಾಗುತ್ತದೆ. ಇದನ್ನು ಈ ಕೆಳಗಿನಂತೆ ಕಾರ್ಯಗತಗೊಳಿಸಲಾಗುತ್ತದೆ:
.ಅಡಿಪಾಯ ಹಂತ: ಇದನ್ನು ಮತ್ತಷ್ಟು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: 3 ವರ್ಷಗಳ ಪ್ರಿಸ್ಕೂಲ್ ಅಥವಾ ಅಂಗನವಾಡಿ, ನಂತರ ಪ್ರಾಥಮಿಕ ಶಾಲೆಯಲ್ಲಿ 1 ಮತ್ತು 2 ತರಗತಿಗಳು. ಇದು 3-8 ವರ್ಷದ ಮಕ್ಕಳನ್ನು ಒಳಗೊಳ್ಳುತ್ತದೆ. ಅಧ್ಯಯನದ ಗಮನವು ಚಟುವಟಿಕೆ ಆಧಾರಿತ ಕಲಿಕೆಯಲ್ಲಿರುತ್ತದೆ.
.ಪೂರ್ವಸಿದ್ಧತಾ ಹಂತ: 3 ರಿಂದ 5 ನೇ ತರಗತಿಗಳು, ಇದು 8-11 ವರ್ಷ ವಯಸ್ಸಿನವರನ್ನು ಒಳಗೊಂಡಿರುತ್ತದೆ. ಇದು ಕ್ರಮೇಣ ಮಾತನಾಡುವುದು, ಓದುವುದು, ಬರೆಯುವುದು, ದೈಹಿಕ ಶಿಕ್ಷಣ, ಭಾಷೆಗಳು, ಕಲೆ, ವಿಜ್ಞಾನ ಮತ್ತು ಗಣಿತದಂತಹ ವಿಷಯಗಳನ್ನು ಪರಿಚಯಿಸುತ್ತದೆ.
.ಮಧ್ಯ ಹಂತ: 6 ರಿಂದ 8 ನೇ ತರಗತಿಗಳು, 11-14 ವರ್ಷದೊಳಗಿನ ಮಕ್ಕಳನ್ನು ಒಳಗೊಳ್ಳುತ್ತದೆ. ಇದು ಗಣಿತ, ವಿಜ್ಞಾನ, ಸಾಮಾಜಿಕ ವಿಜ್ಞಾನ, ಕಲೆ ಮತ್ತು ಮಾನವಿಕ ವಿಷಯಗಳಲ್ಲಿ ಹೆಚ್ಚು ಅಮೂರ್ತ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತದೆ.
.ದ್ವಿತೀಯ ಹಂತ: 9 ರಿಂದ 12 ನೇ ತರಗತಿಗಳು, 14-18 ವರ್ಷ ವಯಸ್ಸಿನವರು. ಇದನ್ನು ಮತ್ತೆ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: 9 ಮತ್ತು 10 ನೇ ತರಗತಿಗಳು ಮೊದಲ ಹಂತವನ್ನು ಒಳಗೊಂಡಿದ್ದರೆ 11 ಮತ್ತು 12 ನೇ ತರಗತಿಗಳು ಎರಡನೇ ಹಂತವನ್ನು ಒಳಗೊಂಡಿವೆ. ಈ 4 ವರ್ಷಗಳ ಅಧ್ಯಯನವು ಆಳ ಮತ್ತು ವಿಮರ್ಶಾತ್ಮಕ ಚಿಂತನೆಯೊಂದಿಗೆ “ಮಲ್ಟಿಡಿಸಿಪ್ಲಿನರಿ” (ವೈವಿಧ್ಯಪೂರ್ಣ) ಅಧ್ಯಯನವನ್ನು ಪ್ರಚೋದಿಸಲು ಉದ್ದೇಶಿಸಿದೆ. ವಿಷಯಗಳ ಬಹು ಆಯ್ಕೆಗಳನ್ನು ಒದಗಿಸಲಾಗುವುದು.
.ಪ್ರತಿ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆಗಳು ನಡೆಯುವ ಬದಲು, ಶಾಲಾ ವಿದ್ಯಾರ್ಥಿಗಳು 3, 5 ಮತ್ತು 8 ನೇ ತರಗತಿಗಳಲ್ಲಿ ಕೇವಲ ಮೂರು ಪರೀಕ್ಷೆಗಳಿಗೆ ಉತ್ತರಿಸುತ್ತಾರೆ.
.ಬೋರ್ಡ್ ಪರೀಕ್ಷೆಗಳನ್ನು 10 ಮತ್ತು 12 ನೇ ತರಗತಿಗಳಿಗೆ ಮುಂದುವರಿಸಲಾಗುವುದು ಆದರೆ ಅದನ್ನು ಮರು ವಿನ್ಯಾಸಗೊಳಿಸಲಾಗುವುದು. ಇದಕ್ಕಾಗಿ ಮಾನದಂಡಗಳನ್ನು ಪರಾಖ್ (PARAKH) ಎಂಬ ಮೌಲ್ಯಮಾಪನ ಸಂಸ್ಥೆ ಸ್ಥಾಪಿಸುತ್ತದೆ. ಅವುಗಳನ್ನು ಸುಲಭಗೊಳಿಸಲು, ಈ ಪರೀಕ್ಷೆಗಳನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ, ವಿದ್ಯಾರ್ಥಿಗಳಿಗೆ ಎರಡು ಪ್ರಯತ್ನಗಳಿಗೆ ಅವಕಾಶ ನೀಡಲಾಗುತ್ತದೆ. ಪರೀಕ್ಷೆಯು ಎರಡು ಭಾಗಗಳನ್ನು ಹೊಂದಿರುತ್ತದೆ, ಅವುಗಳೆಂದರೆ ವಸ್ತುನಿಷ್ಠ ಮತ್ತು ವಿವರಣಾತ್ಮಕ ಉತ್ತರವಿರುವ ಪ್ರಶ್ನೆಗಳು.
.ಈ ನೀತಿಯು ವಿದ್ಯಾರ್ಥಿಗಳ ಪಠ್ಯಕ್ರಮದ ಹೊರೆ ಕಡಿಮೆ ಮಾಡುವುದು ಮತ್ತು ಅವರಿಗೆ ಹೆಚ್ಚು “ಅಂತರ-ಶಿಸ್ತು” ಮತ್ತು “ಬಹುಭಾಷಾ” ಆಗಲು ಅನುವು ಮಾಡಿಕೊಡುತ್ತದೆ. ನೀಡಲಾದ ಒಂದು ಉದಾಹರಣೆಯೆಂದರೆ “ಒಬ್ಬ ವಿದ್ಯಾರ್ಥಿಯು ಭೌತಶಾಸ್ತ್ರದೊಂದಿಗೆ ಫ್ಯಾಷನ್ ಅಧ್ಯಯನವನ್ನು ಮಾಡಲು ಬಯಸಿದರೆ, ಅಥವಾ ರಸಾಯನಶಾಸ್ತ್ರದೊಂದಿಗೆ ಬೇಕರಿ ಕಲಿಯಲು ಬಯಸಿದರೆ, ಅವರಿಗೆ ಹಾಗೆ ಮಾಡಲು ಅನುಮತಿಸಲಾಗುವುದು.” ವರದಿ ಕಾರ್ಡ್‌ಗಳು “ಸಮಗ್ರ” ವಾಗಿರುತ್ತವೆ, ಇದರ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
ವಿದ್ಯಾರ್ಥಿಯ ಕೌಶಲ್ಯಗಳು ಸಂಪಾದಿಸಿ
6 ನೇ ತರಗತಿಯಿಂದ ಕೋಡಿಂಗ್‍ಅನ್ನು(Coding) ಪರಿಚಯಿಸಲಾಗುವುದು ಮತ್ತು ಅನುಭವಿ ಕಲಿಕೆಯನ್ನು ಅಳವಡಿಸಿಕೊಳ್ಳಲಾಗುವುದು.
ಬೆಳಗಿನ ಉಪಾಹಾರ (ಬ್ರೇಕ್‌ಫಾಸ್ಟ್‌)ಗಳನ್ನು ಸೇರಿಸಲು ಮಧ್ಯಾಹ್ನದ ಊಟದ ಯೋಜನೆಯನ್ನು ವಿಸ್ತರಿಸಲಾಗುವುದು. ಸಲಹೆಗಾರರು ಮತ್ತು ಸಾಮಾಜಿಕ ಕಾರ್ಯಕರ್ತರ ನಿಯೋಜನೆಯ ಮೂಲಕ ವಿದ್ಯಾರ್ಥಿಗಳ ಆರೋಗ್ಯಕ್ಕೆ, ವಿಶೇಷವಾಗಿ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಒಟ್ಟಿನಲ್ಲಿ ಈ ಬಗ್ಗೆ ಎಲ್ಲಾ ಹಂತಗಳಲ್ಲೂ ಎಲ್ಲಾ ಭಾಗಿದಾರರನ್ನು ನಂಬಿಕೆಗೆ ತೆಗೆದುಕೊಂಡು ವ್ಯಾಪಕ ಚರ್ಚೆ ನಡೆಸುವುದು ಇಂದಿನ ಅವಶ್ಯಕತೆಯಾಗಿದೆ.

ಪರಿಚಯ

ಶ್ರಿ ತಿರುಮಲರಾವ್ ಎಂಎ, ಬಿಎಡ್ ಪದವೀಧರರು. ಅವರ ಆಸಕ್ತಿ ವೈವಿಧ್ಯಮಯ. ಸಮಾಜಸೇವೆ, ಸಾಹಿತ್ಯ, ರಾಜಕೀಯ, ಧಾರ್ಮಿಕ ಹೀಗೆ ಲಾಲಿತ್ಯ ತುಂಬಿದ ವ್ಯಕ್ತಿತ್ವ. ಇಂಗ್ಲೀಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಕನ್ನಡ ಮತ್ತು ಇಂಗ್ಲೀಷ್ ವಿಷಯದಲ್ಲಿ ಸವ್ಯಸಾಚಿ ಎನಿಸಿದ್ದಾರೆ.
ಮೊದಲಿಗೆ ಸಾಂಖ್ಯಿಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಅಂಕಿಅಂಶ ಸಂಗ್ರಹಣೆಗೆ ರಾಜ್ಯ ವ್ಯಾಪ್ತಿ ಸಂಚರಿಸಿದ್ದಾರೆ. ಹಲವು ರೀತಿಯ ಊರು ಮಂದಿಯ ಸಂಪರ್ಕ ಅವರ ನಿರರ್ಗಳ ಮಾತಿಗೆ ಮತ್ತು ಬರವಣಿಗೆಯ ಮೂಲದ್ರವ್ಯ. ಅದೇ ಅನುಭವ ಅವರಿಗೆ ಅನೇಕ ಜನರ ಪ್ರೀತಿ ಮತ್ತು ಅಭಿಮಾನವನ್ನು ಗಳಿಸಿಕೊಟ್ಟಿದೆ. ಮತ್ತೊಂದು ವಿಶೇಷವೆಂದರೆ ರಾವ್ ಅವರು ಶಿಕ್ಷಣ ಇಲಾಖೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಆಯ್ಕೆಯಾದರು. ಸಹಾಯಕ ಶಿಕ್ಷಣಾಧಿಕಾರಿ, ಜಿಲ್ಲಾ ಉಪ ನಿರ್ದೇಶಕರಾಗಿ ,ವಯಸ್ಕರ ಶಿಕ್ಷಣ ಅಧಿಕಾರಿಯಾಗಿ ಮತ್ತು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದಾರೆ.
ವೃತ್ತಿಜೀವನದ ಸಾಧನೆಗಳು ಅನೇಕ. ಸೇವಾದಳ, ಸ್ಕೌಟಿಂಗ್ ಮುಂತಾದ ಸ್ವಯಂಸೇವಾ ಸಂಸ್ಥೆಗಳಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ರೋಟರಿ ಯುವ ತಂಡದಲ್ಲಿ ಪರಸ್ಪರ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾ ಪ್ರವಾಸಗೈದು ವಿದೇಶದಲ್ಲೂ ಭಾರತೀಯ ಶಿಕ್ಷಣದ ಹಿರಿಮೆಯನ್ನು ಪಸರಿಸಿದ್ದಾರೆ.
ಸರಳ ಸಜ್ಜನಿಕೆಗೆ ರಾವ್ ಮತ್ತೊಂದು ಹೆಸರು. ಅವರದ್ದು ಬದುಕನ್ನ ಗಹನ ಹಾಗೂ ಜನೋಪಯೋಗಿಯಾಗಿ ಸಾಗಿಸಬೇಕೆಂಬ ಮನೋಧರ್ಮ. ಮೂಲ ಚನ್ನಗಿರಿಯ ಶಾನುಭೋಗ ವಂಶಸ್ಥರು. ಜನಾನುರಾಗಿ ಗಳಾಗಿ ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಇಸ್ಕಾನ್ ಅಕ್ಷಯಪಾತ್ರ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪರಿಚಯ ಲೇಖಕರು : ಶ್ರೀ ತಿರುಮಲರಾವ್.
ಪರಿಚಯ ಲೇಖಕರು : ಶ್ರೀ ತಿರುಮಲರಾವ್.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shikaripura News ಅಹಿಂದ ಸಂಘಟನೆ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿ

Shikaripura News ನಾಡಿನ ಅಹಿಂದ ವರ್ಗಕ್ಕೆ ಸೇರಿದ ಜನರ ಹಿತ ಕಾಯುವ...

New Delhi News ಅಪಹರಣಕ್ಕೊಳಗಾಗಿದ್ದ ಬಾಲಕನೇ ಇಂದು ವಕೀಲನಾಗಿ ಅದೇ ಕಿಡ್ನಾಪರ್ಸ್ ಗೆ ಶಿಕ್ಷೆ ಕೊಡಿಸಿದ

New Delhi News ಈ ಹಿಂದೆ 7 ವರ್ಷದವನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಬಾಲಕ...

Kasturi Rangan Comittee Report ಕಸ್ತೂರಿ ರಂಗನ್ ವರದಿ ತಿರಸ್ಕಾರ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

Kasturi Rangan Comittee Report ಜುಲೈನಲ್ಲಿ ಕೇಂದ್ರ ಸರ್ಕಾರ 6ನೇ ಕರಡು...

Hosanagara News ಇಸ್ಪೀಟ್ ಅಡ್ಡೆಗೆ ಪೊಲೀಸರ ದಾಳಿ – 11 ಜನರ ಬಂಧನ 17,640 ರೂಪಾಯಿ ವಶ

Hosanagara News ಹೊಸನಗರ ತಾಲ್ಲೂಕು ಮಾರುತೀಪುರ ಗ್ರಾಮ ಪಂಚಾಯಿತಿಯ ಹಳೆಬಾಣಿಗ ರಸ್ತೆಯ...