Wednesday, October 2, 2024
Wednesday, October 2, 2024

ಸುವರ್ಣ ಪ್ರತಿಭೆ. ಗೀತಿಕಾ & ಸುಂದರ್.

Date:

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಇತ್ತೀಚೆಗೆ ನಡೆಯಿತು.

ಈ ಘಟಿಕೋತ್ಸವದಲ್ಲಿ ಕೇರಳದ ಗೀತಿಕಾ ಟಿ.ವಿ ಹಾಗೂ ಬಿಹಾರದ ವಿದ್ಯಾರ್ಥಿ ಕೇಸರಿ ಸುಂದರ ವರ್ಮಾ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರವನ್ನು ಸ್ವೀಕರಿಸಿದರು.

ಮಾನ್ಯ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪದಕ, ಪ್ರಮಾಣ ಪತ್ರ ಪ್ರದಾನ ಮಾಡಿದರು.

ಗೀತಿಕಾ ಎಂಬ ವಿದ್ಯಾರ್ಥಿನಿ ಆಟೋ ಚಾಲಕ ಕೆ. ಸುರೇಶ್ ಕುಮಾರ್ ಅವರ ಪುತ್ರಿಯಾಗಿದ್ದಾರೆ. ಈಕೆಗೆ ಕೃಷಿ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಆಗುವ ಕನಸಿದೆ. ಗೀತಿಕಾಗೆ ಚಿನ್ನದ ಪದಕ ಬಂದಿರುವುದು ಖುಷಿಯಾಗಿದೆ. ಶಿಕ್ಷಕರ ಸಲಹೆಯಂತೆ ಕೃಷಿ ಪದವಿ ಪೂರ್ಣಗೊಳಿಸಿದ್ದೇನೆ. ಕೇರಳದ ಕೃಷಿ ವಿವಿಯಲ್ಲಿ ಸಸ್ಯರೋಗ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪ್ರವೇಶ ಪಡೆದಿದ್ದೇನೆ ಎಂದು ಗೀತಿಕಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಬಿಹಾರದ ವಿದ್ಯಾರ್ಥಿ ಕೇಸರಿ ಸುಂದರ್ ವರ್ಮಾ. ಕೃಷಿ ಎಂಜಿನಿಯರಿಂಗ್ ಪದವಿಯಲ್ಲಿ ಗರಿಷ್ಠ ಅಂಕ ಪಡೆದಿದ್ದಾರೆ.ಅವರಿಗೆ 5 ಚಿನ್ನದ ಪದಕ ಮತ್ತು 2 ನಗದು ಬಹುಮಾನ ಲಭಿಸಿದೆ.

ನಳಂದ ಜಿಲ್ಲೆಯ ರಾಜಗೀರ್ ಗ್ರಾಮದಿಂದ ವ್ಯಾಸಂಗಕ್ಕಾಗಿ ರಾಯಚೂರಿಗೆ ಬಂದಿದ್ದಾರೆ. ಅವರಿಗೆ ಕೃಷಿ ವಿಜ್ಞಾನಿಯಾಗುವ ಕನಸಿದೆ.

ಖರಗ ಪುರ ಐಐಟಿಯಲ್ಲಿ ಎಂ. ಟೆಕ್ ಪ್ರವೇಶ ಪಡೆದಿದ್ದಾರೆ. ತಂದೆ ವಿಮಾ ಏಜೆಂಟ್ ಹಾಗೂ ತಾಯಿ ಕಾಲೇಜು ಉಪನ್ಯಾಸಕಿಯಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...