ಕರ್ನಾಟಕ ರಾಜ್ಯ ಬೀಜ ನಿಗಮ ತಳಿವರ್ಧಿತ ಬಿತ್ತನೆ ಬೀಜಗಳ ಜೊತೆಗೆ ರೈತರಿಗೆ ಲಾಭದಾಯಕವಾಗುವ ತರಕಾರಿ ಬೀಜಗಳನ್ನೂ ಉತ್ಪಾದಿಸಲಿ ಎಂದು ಕರ್ನಾಟಕ ರಾಜ್ಯ ಬೀಜ ನಿಗಮದ ಅಧ್ಯಕ್ಷರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ.
ಹೆಬ್ಬಾಳದ ಕರ್ನಾಟಕ ಬೀಜ ನಿಗಮದಲ್ಲಿ ಬೀಜ ನಿಗಮದ ಅಧಿಕಾರಿಗಳು ಹಾಗೂ ಜಿಲ್ಲಾ ಉಪವ್ಯವಸ್ಥಾಪಕ ನಿರ್ದೇಶಕರೊಂದಿಗೆ ಬಿ.ಸಿ.ಪಾಟೀಲ್ ಸಭೆ ನಡೆಸಿದರು.
ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಪೂರೈಸುವುದರ ಜೊತೆಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಗುಣಮಟ್ಟದ ಬೀಜ ಉತ್ಪಾದನೆಯ ಲಾಭ ತರುವ ನಿಗಮವಾಗಬೇಕು. ಬೀಜ ನಿಗಮ ರೈತರಿಗೆ ಬರಿ ಬಿತ್ತನೆ ಬೀಜವನ್ನು ಪೂರೈಸುವ ಕೆಲಸವನ್ನಷ್ಟೇ ಮಾಡಬಾರದು. ಆ ಮೂಲಕ ನಿಗಮ ದೇಶದಲ್ಲಿಯೇ ಲಾಭದಾಯಕ ನಿಗಮವಾಗಬೇಕು.ರೈತರ ಹಿತದೃಷ್ಟಿಯಿಂದ ತರಕಾರಿ ಬಿತ್ತನೆ ಬೀಜಗಳನ್ನು ಸಹ ರಾಜ್ಯ ಬೀಜ ನಿಗಮ ಉತ್ಪಾದಿಸಿ ಮಾರಾಟ ಮಾಡಬೇಕು. ಇದಕ್ಕೆ ಅಗತ್ಯವಾದ ಕೌಶಲ್ಯ ತರಬೇತಿ ವೃತ್ತಿಪರತೆಯನ್ನು ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕರು ಹೊಂದಬೇಕು. ಆ ಮೂಲಕ ಕರ್ನಾಟಕ ತೈಲ ನಿಗಮದಂತೆ ಬೀಜ ನಿಗಮವು ಸಹ ಲಾಭದಾಯವಾಗಬೇಕೆಂದು ಬಿ.ಸಿ.ಪಾಟೀಲ್ ಕರೆ ನೀಡಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.