ಕೆಎಎಸ್ ಅಧಿಕಾರಿಗಳು ಸೇರಿದಂತೆ 15 ಮಂದಿ ಭ್ರಷ್ಟ ನೌಕರರ ಕಚೇರಿ ಹಾಗೂ ಮನೆಗಳ ಮೇಲೆ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ಇದರ ಜೊತೆಗೆ ಭಾರಿ ಪ್ರಮಾಣದ ಚಿನ್ನಾಭರಣಗಳು, ಬೆಳ್ಳಿ, ಕಂತೆ ಕಂತೆ ನೋಟುಗಳನ್ನು ಜಪ್ತಿ ಮಾಡಿದ್ದಾರೆ.
ಮನೆಯವರು ಮಾತ್ರವಲ್ಲದೆ, ಬೇರೆಯವರ ಹೆಸರಿನಲ್ಲಿ ನೊಂದಣಿಯಾದ ಕಾರುಗಳು, ಸೈಟು, ಬಾಡಿಗೆ ನೀಡಿದ ಮನೆಗಳು, ಕೃಷಿ ಭೂಮಿ ಹೊಂದಿರುವ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡುತನಿಖೆ ನಡೆಸಿದರು.
ಜೀವರ್ಗಿ ತಾಲೂಕಿನ ಪಿಡಬ್ಲ್ಯೂಡಿ ಜೆಇ ಶಾಂತಗೌಡ ಬಿರಾದಾರ್, ಸಕಾಲ ಮಿಷನ್ ಆಡಳಿತಾಧಿಕಾರಿ ಎಲ್. ಸಿ. ನಾಗರಾಜ್, ಗದಗದ ಜಂಟಿ ಕೃಷಿ ನಿರ್ದೇಶಕರು ಟಿ.ಎಸ್.ರುದ್ರೇಶಪ್ಪ, ಮಂಡ್ಯದ ಕಾರ್ಯ ನಿರ್ವಾಹಕ ಇಂಜಿನಿಯರ್ ಶ್ರೀನಿವಾಸ ಕೆ, ಹಾಗೂ ಮಂಗಳೂರಿನ ಸ್ಮಾರ್ಟ್ ಸಿಟಿ ಇಂಜಿನಿಯರ್ ಕೆ.ಎಸ್.ಲಿಂಗೇಗೌಡ, ಬೆಂಗಳೂರಿನ ಬಿಬಿಎಂಪಿ ಚಾಲಕ ಜಿ.ವಿ. ಗಿರಿ, ಬಳ್ಳಾರಿಯ ನಿವೃತ್ತ ಸಬ್ ರಿಜಿಸ್ಟ್ರಾರ್ ಕೆ.ಎಸ್. ಶಿವಾನಂದ್ ಸೇರಿದಂತೆ ಹಲವರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳ 15 ಅಧಿಕಾರಿಗಳಿಗೆ ಸಂಬಂಧಿಸಿದ 68 ಸ್ಥಳಗಳ ಮೇಲೆ 508 ಅಧಿಕಾರಿಗಳು ಮುಂಜಾನೆಯಿಂದಲೇ ಶೋಧ ನಡೆಸಿದ್ದಾರೆ. 15 ಅಧಿಕಾರಿಗಳ ಮನೆಯಲ್ಲಿ 26ಕೆಜಿ ಚಿನ್ನ, 1.20 ಕೋಟಿ ರೂಪಾಯಿಗಳ ನಗದು ಪತ್ತೆಯಾಗಿವೆ. ಆದಾಯ ಮೂಲಕ್ಕಿಂತ ನೂರಾರು ಪಟ್ಟು ಆಸ್ತಿ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿಯ ‘ಡಿ’ ಗ್ರೂಪ್ ನೌಕರ ಜಿ.ವಿ.ಗಿರಿ, ಎಫ್ ಡಿಎ ನೌಕರ ಮಾಯಣ್ಣ ಮತ್ತು ಹೆಸ್ಕಾಂನ ಎಫ್ ಡಿಸಿ ನೌಕರ ನಾಥಾಜಿ ಪಾಟೀಲ್ ಅವರ ಐಷಾರಾಮಿ ಮನೆ, ಜೀವನ ಶೈಲಿ ಕಂಡು ಸ್ವತಃ ಎಸಿಬಿ ಅಧಿಕಾರಿಗಳೇ ದಂಗಾಗಿದ್ದರು.
ಇದನ್ನು ಎಸಿಬಿ ಈ ನಡೆಸಿದ ದೊಡ್ಡ ದಾಳಿ ಎಂದೇ ಹೇಳಲಾಗುತ್ತಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.