ಈಗಿನ ಕಾಲದಲ್ಲಿ ಎಷ್ಟೇ ದೊಡ್ಡ ಹಣವಂತರಾದ್ರು, ನೂರು ರೂಪಾಯಿಗಳನ್ನು ಬಡವರಿಗೆ ದಾನ ಮಾಡಲು ಹಿಂದೆ ಮುಂದೆ ಯೋಚಿಸುತ್ತಾರೆ. ಒಂದು ವೇಳೆ ಅಧಿಕ ಮೊತ್ತವನ್ನು ದಾನ ಮಾಡಿದರೆ ಅದಕ್ಕೊಂದು ಬೋರ್ಡ್ ಹಾಕಿಸದೆ ಬಿಡುವುದಿಲ್ಲ. ಇಂಥವರ ನಡುವೆ ಅಲ್ಲೊಬ್ಬ ಮಹಾನ್ ವೃದ್ದೆ ಭಿಕ್ಷೆ ಬೇಡಿ ಸಂಗ್ರಹಿಸಿದ ದುಡ್ಡನ್ನು ದೇವಾಲಯದ ಕಾರ್ಯಕ್ಕೆ ನೀಡಿದ್ದಾರೆ.
ಕಡೂರಿನ ಕೋಟಿ ಸಾಲಿಗ್ರಾಮ ಆಂಜನೇಯ ದೇವಸ್ಥಾನದ ಎದುರು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು ಕೆಂಪಜ್ಜಿ. ಇವರು ಸಾಲಿಗ್ರಾಮ ಪರಿಸರದ ಅಜ್ಜಿ ಎಂದೇ ಜನ ಪ್ರಸಿದ್ಧರಾಗಿದ್ದರು. ಈಕೆ 80ರ ಹಿರಿಯ ಜೀವ. ಕೆಂಪಜ್ಜಿ ಒಬ್ಬಳು ಅನಾಥೆ. ಇವರಿಗೆ ದೇವಾಲಯವೇ ಮನೆ. ಹಲವು ವರ್ಷಗಳಿಂದ ಸಾಯಿಬಾಬಾ ಮಂದಿರದಲ್ಲಿ ಉಳಿದು ಅಲ್ಲಿಯೇ ಭಿಕ್ಷೆಬೇಡಿ ಹಣ ಗಳಿಸುತ್ತಾರೆ. ಮಂದಿರದ ಪಕ್ಕಕ್ಕೆ ವಿನಾಯಕ ಕೆಫೆ ಮಾಲಿಕ ಭಾಸ್ಕರ್ ಕೆಂಪಜ್ಜಿಗೆ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ನೀಡುತ್ತಾರೆ.
ಭಿಕ್ಷೆ ಬೇಡುವ ಅಜ್ಜಿ ದೇವರಿಗೆ ದೇಣಿಗೆ ನೀಡುವ ಮಹಾತ್ಕಾರ್ಯ ಮಾಡಿದ್ದಾರೆ. ದುಡ್ಡಿದ್ದವರು ಮನಸ್ಸು ಮಾಡಿಕೊಡಬಹುದು.ಆದರೆ ಬೇಡಿ ಬದುಕುವವರು ಹೇಗೆ ನೀಡುತ್ತಾರೆ? ಎಂಬ ಪ್ರಶ್ನೆಗೆ ನೇರಾನೇರ ಉತ್ತರ,ಕೆಂಪಜ್ಜಿ. “ಏನ ಬೇಡಲಿ ನಿನ್ನ ಬಳಿ ಬಂದು?” ಎಂದು ದಾಸರ ಪದವಿದೆ. ಆದರೆ ಅದಕ್ಕೆ ಮಾರ್ಮಿಕ ಅರ್ಥ ಬರುವಂತೆ ಹಳ್ಳಿಯ ಅಜ್ಜಿ ,ಹಣವಂತರಿಗೆ ದಾನದ ಪಾಠ ಹೇಳಿದ್ದಾರೆ .
ತಮ್ಮ ಭಿಕ್ಷೆಯ ಇಪ್ಪತ್ತು ಸಾವಿರ ರೂಗಳನ್ನ ದೇವನಿಗೆ ನೀಡೇಬಿಟ್ಟರು.
ಕೆಂಪಜ್ಜಿಯ ಭಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅಜ್ಜಿಯ ಜೀವನ ನಿರ್ವಹಣೆಯನ್ನು ದೇವಾಲಯ ಸಮಿತಿ ವಹಿಸಿಕೊಳ್ಳಲಿದೆ ಎಂದು ಶ್ರೀ ಪಾತಾಳ ಅಂಜನೇಯ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಪಾತಾಳ ಆಂಜನೇಯಸ್ವಾಮಿ ನೂತನ ದೇವಾಲಯ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕೆಂಪಜ್ಜಿ ಸಂಪಾದಿಸಿದ 20ಸಾವಿರ ಹಣವನ್ನು ದೇವಾಲಯಕ್ಕೆ ನೀಡಿ ಸಂತೃಪ್ತಿ ಹೊಂದಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.