Thursday, April 9, 2026
Thursday, April 9, 2026

ತೈಲ ಬೆಲೆ ಇಳಿಕೆ: ಭಾರತ ಪ್ರತಿತಂತ್ರ

Date:

ದೇಶದಲ್ಲಿ ಹೆಚ್ಚಿದ ಬೇಡಿಕೆಗೆ ಅನುಗುಣವಾಗಿ ಕಚ್ಚಾತೈಲ ಉತ್ಪಾದನೆ ಮಾಡಲು, ಒತ್ತಡ ಹೇರಿದ ದೇಶಗಳಿಗೆ ಭಾರತ ಪೈಪೋಟಿ ನೀಡಲು ತಯಾರಾಗಿದೆ. ಜಾಗತಿಕ ತೈಲ ದರಗಳ ಮೇಲೆ ಒಪೆಕ್ ದೇಶಗಳ ಪ್ರಾಬಲ್ಯ ವನ್ನು ನಿಯಂತ್ರಿಸಲು ಭಾರತ ಪ್ರತ್ಯುತ್ತರ ನೀಡಲು ಮುಂದಾಗಿದೆ.

ಭಾರತವು ತನ್ನ ಸಂಗ್ರಹಾಗಾರ ಗಳಿಂದ 50ಲಕ್ಷ ಬ್ಯಾರಲ್ ಕಚ್ಚಾತೈಲವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಈ ಮೂಲಕ ಕಚ್ಚಾತೈಲದ ಆಮದು ಕಡಿತಗೊಳಿಸಿ, ಬೆಲೆ ನಿಯಂತ್ರಣಕ್ಕೆ ತರಲಿದೆ.

ಭಾರತವು 3.8 ಕೋಟಿ ಬ್ಯಾರೆಲ್ ಕಚ್ಚಾತೈಲವನ್ನು ಪೂರ್ವ ಮತ್ತು ಪಶ್ಚಿಮದ 3 ಕಡೆಗಳಲ್ಲಿ ಸಂಗ್ರಹಿಸಿದೆ. ಇದರಲ್ಲಿ 50ಲಕ್ಷ ಬ್ಯಾರಲ್ ಬಿಡುಗಡೆ ಮಾಡಲಾಗಿದೆ. ಏಳರಿಂದ ಹತ್ತು ದಿನಗಳ ಅಗತ್ಯಗಳಿಗೆ ಸಾಕಾಗಲಿದೆ. ಈ ಕಚ್ಚಾತೈಲವನ್ನು ಎಂ ಆರ್ ಪಿ ಎಲ್ (ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ ) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಗೆ ಬಿಡುಗಡೆ ಮಾಡಲಾಗುತ್ತದೆ.

ವಿಶಿಷ್ಟ ವೆಂದರೆ ಇದೇ ಪ್ರಥಮ ಬಾರಿಗೆ ಭಾರತದ ಮುಂದಾಳತ್ವದಲ್ಲಿ ಇಂತಹ ಕಾರ್ಯತಂತ್ರ ಸಿದ್ಧಗೊಂಡಿದೆ.

ಅಮೆರಿಕ ,ಜಪಾನ್ ಮತ್ತು ದಕ್ಷಿಣ ಕೊರಿಯಾ ಇತರೆ ದೇಶಗಳು ಭಾರತದೊಂದಿಗೆ ಕೈ ಜೋಡಿಸಿವೆ. ಈ ದೇಶಗಳು ಒಟ್ಟಿಗೆ ತಮ್ಮ ಸಂಗ್ರಹಗಾರ ಗಳಿಂದ ಕಚ್ಚಾತೈಲವನ್ನು ಬಿಡುಗಡೆಗೊಳಿಸಿ ನಿರ್ಧರಿಸಿವೆ.

ಈ ರಾಷ್ಟ್ರಗಳು ತಮ್ಮದೇ ಸಂಗ್ರಹಾಗಾರ ದಲ್ಲಿರುವ ತೈಲವನ್ನು ಬಿಡುಗಡೆಗೊಳಿಸಿದಾಗ, ಸೌದಿ ಅರೇಬಿಯಾ ಮತ್ತು ರಷ್ಯಾ ನೇತೃತ್ವದ ತೈಲ ಉತ್ಪಾದಕ ರಾಷ್ಟ್ರಗಳಿಗೆ ಬೇಡಿಕೆ ಕಡಿಮೆಯಾಗಲಿದೆ. ಇದರಿಂದ ಆದೇಶಗಳು ಬೆಲೆ ಇಳಿಸುವ ಒತ್ತಡಕ್ಕೆ ಸಿಲುಕಲಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಚುನಾವಣಾ ಆಯೋಗವು ಗ್ಯಾರಂಟಿ ಯೋಜನೆಗಳ ಲೆಕ್ಕ ಕೇಳಿ ನಮ್ಮನ್ನ ಬೆದರಿಸಲು ಹೊರಟಿದೆ- ಸಿದ್ಧರಾಮಯ್ಯ

CM Siddharamaiah ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಸಂದರ್ಭದಲ್ಲಿ...

Kuvempu University ಮುದ್ರಣ ಮಾಧ್ಯಮದಲ್ಲಿ ಬರವಣಿಗೆ ಕೌಶಲ, ಮುಖ್ಯ. ವರದಿಗಾರಿಕೆ ತುಂಬಾ ಜವಾಬ್ದಾರಿಯುಳ್ಳದ್ದು- ಶರತ್ ಕುಮಾರ್ ಉದಯವಾಣಿ

Kuvempu University ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ...