Wednesday, October 2, 2024
Wednesday, October 2, 2024

ಕೃಷಿ ಮುನ್ನಡೆಗೆ ಎಸ್ ಬಿಐ ಪಂಚಸೂತ್ರ

Date:

ಕೃಷಿ ಕ್ಷೇತ್ರದಲ್ಲಿ ದಿನೇದಿನೇ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಕೃಷಿ ಅಭಿವೃದ್ದಿಯಿಂದ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ‌. ಈ ಹಿನ್ನೆಲೆಯಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಬ್ಯಾಂಕಿಂಗ್ ಕ್ಷೇತ್ರವು ಕೂಡ ಕೃಷಿ ಪ್ರಗತಿಯನ್ನು ಗುರಿಯಾಗಿಟ್ಟುಕೊಂಡು ಅನೇಕ ಸುಧಾರಣೆಗಳನ್ನು ಕೈಗೊಳ್ಳುತ್ತಿವೆ.
ಎಸ್ ಬಿಐ ಸಂಶೋಧನಾ ವರದಿಯು ಕೃಷಿ ಕ್ಷೇತ್ರದ ಸುಧಾರಣೆಗೆ 5 ಸಲಹೆಗಳನ್ನು ನೀಡಿದೆ.
ರಾಷ್ಟ್ರೀಯ ಕೃಷಿ ಮಾರುಕಟ್ಟೆಯಲ್ಲಿ (ಇ-ನ್ಯಾಮ್) ಕನಿಷ್ಠ ಬೆಂಬಲ ಬೆಲೆಯನ್ನು ಮೂಲ ನೆಲೆಯಾಗಿ ನಿಗದಿಪಡಿಸಲು ಪರಿಶೀಲಿಸಬಹುದು.
ಗುತ್ತಿಗೆ ಕೃಷಿ ಕುರಿತ ಸಂಸ್ಥೆ ರಚಿಸಬೇಕು.
ಎಪಿಎಂಸಿಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸಬೇಕು. ವರದಿಯ ಪ್ರಕಾರ ಕೊಯ್ಲು ಮತ್ತು ನಂತರದ ಅವಧಿಯಲ್ಲಿ 27,000 ಕೋಟಿ ರೂ. ಮೌಲ್ಯದ ಧಾನ್ಯಗಳು, 10,000 ಕೋಟಿ ರೂ. ಮೌಲ್ಯದ ತೈಲ ಧಾನ್ಯಗಳು, 5,000 ಕೋಟಿ ರೂ. ಮೌಲ್ಯದ ಬೇಳೆಕಾಳುಗಳು ನಷ್ಟವಾಗುತ್ತವೆ. ಇದನ್ನು ತಪ್ಪಿಸಲು ಎಪಿಎಂಸಿ ಗಳ ಮೂಲಸೌಕರ್ಯ ವೃದ್ಧಿಸಬೇಕು. ಸುಸಜ್ಜಿತ ಗೊಳಿಸಬೇಕು.
ಬೆಳೆಗಳ ದರ ಖಾತರಿಗಾಗಿ ಕನಿಷ್ಠ ಬೆಂಬಲ ಬೆಲೆಯ (ಎಸ್ಎಸ್ ಪಿ) ಬದಲಾಗಿ ಬೆಳೆಗಳ ಖರೀದಿಗೆ ಖಾತರಿಯನ್ನು ಕೊಡಬಹುದು. ಉದಾಹರಣೆಗೆ ಕನಿಷ್ಠ 5 ವರ್ಷಗಳ ಅವಧಿಗೆ ಇಷ್ಟು ಪ್ರಮಾಣದ ಬೆಳೆ ಖರೀದಿಸಲಾಗುವುದು ಎಂಬ ಖಾತ್ರಿಯನ್ನು ನೀಡುವುದು. ಕನಿಷ್ಠ ಕಳೆದ ವರ್ಷದ ಬೆಳೆಯ ಶೇಕಡಾವಾರು ಪ್ರಮಾಣವನ್ನು ಗಮನಿಸಿ, ಅಷ್ಟನ್ನು ಖರೀದಿಸುವ ಖಾತರಿ ನೀಡಬಹುದು.
ರಾಜ್ಯಗಳಲ್ಲಿ ವ್ಯವಸ್ಥಿತವಾಗಿ ಕೃಷಿ ಉತ್ಪನ್ನಗಳ ಖರೀದಿಗೆ ವ್ಯವಸ್ಥೆ ಮಾಡಬೇಕು. ಪಂಜಾಬ್ ಮತ್ತು ಹರಿಯಾಣದಲ್ಲಿ ಉತ್ಪಾದನೆಯಾಗುವ ಶೇ. 83 ಧಾನ್ಯಗಳ ಖರೀದಿಗೆ ಸರ್ಕಾರಿ ವ್ಯವಸ್ಥೆಯಿದೆ. ಕೆಲ ರಾಜ್ಯಗಳಲ್ಲಿ ಒಂದಂಕಿಗೆ ಇಳಿದಿದೆ.
ನಮ್ಮ ರಾಜ್ಯದ ರೈತ ಸಂಘಟನೆಗಳು ಈ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಧಾನ್ಯ ಖರೀದಿಗೆ ಸರ್ಕಾರಕ್ಕೆ ಒತ್ತಾಯಿಸಬೇಕಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Youth Empowerment and Sports ಸುತ್ತಮುತ್ತಲ ಪ್ರದೇಶದ ಸ್ಬಚ್ಛತೆ ನಮ್ಮ ಜವಾಬ್ದಾರಿ- ಶಾಸಕ ಚನ್ನಬಸಪ್ಪ

 Youth Empowerment and Sports ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು...

Chamber Of Commerce ಗಾಂಧೀಜಿ & ಶಾಸ್ತ್ರೀಜಿ ಯುವಜನರಿಗೆ ಆದರ್ಶ- ಚಂದ್ರಶೇಖರಯ್ಯ

Chamber Of Commerce ಗಾಂಧೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ...

Gangotri College ವಿದ್ಯಾರ್ಥಿಗಳು ಶಿಕ್ಷಣದ ಸಂಗಡ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು- ಶ್ರೀ ಚನ್ನಬಸವಶ್ರೀ

Gangotri College ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ...