ಸೈಬರ್ ತಂತ್ರಜ್ಞಾನ ಕುರಿತ ‘ಸಿಡ್ನಿ ಡಯಲಾಗ್’ ವೇದಿಕೆಯಲ್ಲಿ ವರ್ಚುವಲ್ ಆಗಿ ಭಾರತದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾತನಾಡಿ ‘ಇಡೀ ಜಗತ್ತಿನ ಪ್ರಜಾತಂತ್ರ ದೇಶಗಳು ಬಿಟ್ ಕಾಯಿನ್ ಹಾಗೂ ಕ್ರಿಪ್ಟೊ ಕರೆನ್ಸಿಗಳು ಹ್ಯಾಕರ್ ಗಳ ಕೈಗೆ ಸಿಗದಂತೆ ನೋಡಿಕೊಳ್ಳಲು ಪರಸ್ಪರ ಸಹಕಾರ ನೀಡಬೇಕೆಂದು’ ಒತ್ತಾಯಿಸಿದರು.
ಕ್ರಿಪ್ಟೊ ಕರೆನ್ಸಿಗಳನ್ನು ಭಯೋತ್ಪಾದಕ ಸಂಘಟನೆಗಳು ಹಾಗೂ ಸಂಘಟಿತ ಅಪರಾಧ ಎಸಗುವ ಗುಂಪುಗಳು ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳ ಬಗ್ಗೆ ಭಾರತ ಮತ್ತು ಇತರೆ ದೇಶಗಳಲ್ಲಿ ಆತಂಕ ಮೂಡಿದೆ. ಅರ್ಥ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಅಪಾಯವನ್ನು ಕ್ರಿಪ್ಟೊ ಕರೆನ್ಸಿಗಳು ತಂದೊಡ್ಡಿದೆ ಎಂಬ ಕಳವಳ ಎಲ್ಲೆಡೆ ವ್ಯಕ್ತವಾಗಿದೆ.
ಆರ್ಥಿಕ ಅಪರಾಧಗಳನ್ನು ಎಸಗಿ, ವಿದೇಶಕ್ಕೆ ಪರಾರಿಯಾಗಿರುವವರನ್ನು ದೇಶಕ್ಕೆ ವಾಪಸ್ ಕರೆಸಲು ಎಲ್ಲಾ ಬಗ್ಗೆ ಪ್ರಯತ್ನಗಳು ನಡೆಸಲಾಗಿದೆ ಎಂದು ಈ ವೇಳೆ ಮೋದಿ ಅವರು ತಿಳಿಸಿದರು.
ಕ್ರಿಪ್ಟೊ ಕರೆನ್ಸಿಗಳು ನಮ್ಮ ಯುವಕರನ್ನು ಹಾಳು ಮಾಡಬಲ್ಲದು ಎಂದು ಆತಂಕ ಮೋದಿಜಿ ಈ ವೇಳೆ ವ್ಯಕ್ತಪಡಿಸಿದ್ದರು.