ಯುದ್ಧ ಬಾಧಿತ ಅಫ್ಘಾನಿಸ್ತಾನದಲ್ಲಿ ಆಹಾರ ಬಿಕ್ಕಟ್ಟು ಪರಿಸ್ಥಿತಿ ಉಂಟಾಗಿದೆ. ಮಾನವೀಯ ಮೌಲ್ಯಗಳ ನಿಟ್ಟಿನಲ್ಲಿ ಆಫ್ಘಾನಿಸ್ತಾನಕ್ಕೆ ಆಹಾರದ ನೆರವು ನೀಡುವ ಕುರಿತಂತೆ ಭಾರತದೊಂದಿಗೆ ವಿಶ್ವಸಂಸ್ಥೆಯ ಡಬ್ಲ್ಯು ಎಫ್ ಪಿ ಚರ್ಚೆ ನಡೆಸಿದೆ ಈ ಬಗ್ಗೆ ಡಬ್ಲ್ಯೂ ಎಫ್ ಪಿ ಮುಖ್ಯಸ್ಥೆ ಸೆಸಿಲಿಯ ಗಾರ್ಜೊನ್ ಹೇಳಿದ್ದಾರೆ.
ಹಲವು ಕಾರಣದಿಂದಾಗಿ ಅಫ್ಘಾನಿಸ್ತಾನದಲ್ಲಿ ಜನರು ತೀವ್ರವಾದ ಆಹಾರ ಬಿಕ್ಕಟ್ಟು ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತವು ಸೇರಿದಂತೆ ಈಗಾಗಲೇ ಜಗತ್ತಿನ ಎಲ್ಲಾ ರಾಷ್ಟ್ರಗಳು ಯುದ್ಧಪೀಡಿತ ಆಫ್ಘಾನಿಸ್ತಾನದ ಕುಟುಂಬಗಳಿಗೆ ಆಹಾರದ ನೆರವು ಕಲ್ಪಿಸುವ ಬಗ್ಗೆ ಡಬ್ಲ್ಯು ಎಫ್ ಪಿ ನಡುವೆ ಚರ್ಚೆ ನಡೆಯುತ್ತಿದೆ. ಶೀಘ್ರವೆ ಇವೆಲ್ಲಾ ಇತ್ಯರ್ಥಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿರುವ ಅಫ್ಘಾನಿಸ್ತಾನ ಭಾರತದಿಂದ ಮಾರ್ಗವಾಗಿ ಗೋಧಿ ಸಾಗಾಣಿಕೆಗೆ ಅನುಮತಿ ನೀಡುವಂತೆ ಪಾಕಿಸ್ತಾನಕ್ಕೆ ಮನವಿ ಸಲ್ಲಿಸಿದೆ. ಆಫ್ಘಾನಿಸ್ತಾನ್ ಮನವಿಯನ್ನು ಪರಿಗಣಿಸುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ಭಾರತ ಮಾನವೀಯ ಆಧಾರದ ಮೇಲೆ ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಂಡಿದೆ. ರಸ್ತೆ ಮಾರ್ಗದ ಮೂಲಕವೇ ಆಹಾರ ಸರಬರಾಜು ಆಗಬೇಕಾಗಿದ್ದು, ಇದಕ್ಕೆ ಪಾಕಿಸ್ತಾನ ಸಮ್ಮತಿ ನೀಡಬೇಕಿದೆ.