Saturday, April 4, 2026
Saturday, April 4, 2026

ಜಾಗತಿಕ ವಿದ್ಯುತ್ ಗ್ರಿಡ್ : ಅಮೆರಿಕ ಆಸಕ್ತಿ

Date:

ಸೌರಶಕ್ತಿ ಬಳಕೆಯಲ್ಲಿ ಭಾರತ ಕಳೆದ ಏಳು ವರ್ಷಗಳಲ್ಲಿ ಗಣನೀಯ ಸಾಧನೆ ಮಾಡಿದೆ. ಈ ಅವಧಿಯಲ್ಲಿ ಸೌರಶಕ್ತಿ ಉತ್ಪಾದನೆ 17 ಪಟ್ಟು ಹೆಚ್ಚಳವಾಗಿದೆ. ದೇಶದ ಸದ್ಯದ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯ 45 ಗಿಗಾ ವ್ಯಾಟ್ ಗೆ ಏರಿಕೆಯಾಗಿದೆ ಎಂದು ಗ್ಲಾಸ್ಗೊನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಹವಾಮಾನ ಶೃಂಗಸಭೆಯಲ್ಲಿ ಭಾರತ ತಿಳಿಸಿದೆ.
ಕಳೆದ ವಾರ ನಡೆದ ಗ್ರೀನ್ ಗ್ರಿಡ್ಸ್ ಇನ್ಷಿಯೇಟಿವ್ ಸ್ಟೀರಿಂಗ್ ಕಮಿಟಿ ಸಭೆಯಲ್ಲಿ ವಿದ್ಯುತ್ ವಿನಿಮಯಕ್ಕಾಗಿ ‘ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್’ ( ಒಂದೇ ಸೂರ್ಯ, ಒಂದೇ ಜಗತ್ತು, ಒಂದೇ ಗ್ರಿಡ್) ಯೋಜನೆಗೆ ಸಮ್ಮತಿ ಸೂಚಿಸಲಾಗಿತ್ತು. ಈ ಯೋಜನೆಯ ಆಕರ್ಷಕ ಸ್ವರೂಪ ಗಮನಿಸಿದ ಅಮೆರಿಕ ಪಾಲುದಾರಿಕೆಯ ಆಸಕ್ತಿ ತೋರಿದೆ.
“ಹವಾಮಾನ ಮಾತುಕತೆಗೆ ಅಮೆರಿಕ ವಾಪಸ್ಸಾಗಿದೆ. ನೂತನವಾಗಿ ಆರಂಭಗೊಂಡಿರುವ ವಿದ್ಯುತ್ ವಿನಿಮಯ ಕುರಿತ ಹೊಸ ಯೋಜನೆ ಜೊತೆ ಗುರುತಿಸಿಕೊಳ್ಳಲು ಉತ್ಸುಕರಾಗಿದ್ದೇವೆ” ಎಂದು ಅಮೆರಿಕ ಇಂಧನ ಸಚಿವೆ ಜೆನ್ನಿಫರ್ ಗ್ರಾನ್ಹೋಮ್
ತಿಳಿಸಿದ್ದಾರೆ.
ಭಾರತ, ಇಂಗ್ಲೆಂಡ್, ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ಗ್ರಿಡ್ ಇನಿಷಿಯೇಟಿವ್ ಸ್ಟೀರಿಂಗ್ ಕಮಿಟಿಯ ಸದಸ್ಯ ರಾಷ್ಟ್ರಗಳಾಗಿವೆ. ‘ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್’ ಯೋಜನೆ ಅಡಿಯಲ್ಲಿ 80 ರಾಷ್ಟ್ರಗಳು ಗುರುತಿಸಿಕೊಂಡಿದ್ದು, ಸೌರ ವಿದ್ಯುತ್ ವಿನಿಮಯಕ್ಕೆ ಆಸಕ್ತಿ ತೋರಿವೆ.
ಸೌರ ವಿದ್ಯುತ್ ಸದ್ಬಳಕೆ ಕುರಿತು ರೂಪುಗೊಂಡಿರುವ ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್ ಅಧ್ಯಕ್ಷತೆಯನ್ನು ಭಾರತ ವಹಿಸಿದೆ. ಗ್ಲಾಸ್ಗೊ ವಿಶ್ವ ಹವಾಮಾನ ಶೃಂಗಸಭೆ ವೇಳೆ ಭಾರತ ಈ ನೂತನ ಯೋಜನೆ ಪ್ರಸ್ತಾಪಿಸಿತ್ತು.
ಇಂಗ್ಲೆಂಡ್ ಪ್ರಥಮ ಪಾಲುದಾರ ರಾಷ್ಟ್ರವಾಗಿ ಸೇರಿಕೊಂಡಿತ್ತು.
ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಭಾರತ-ಇಂಗ್ಲೆಂಡ್ ನೇತೃತ್ವದ ‘ಜಾಗತಿಕ ವಿದ್ಯುತ್ ಗ್ರಿಡ್’ ಜೊತೆಗೆ ಅಮೆರಿಕ ಪಾಲುದಾರಿಕೆ ಪಡೆಯಲು ಆಸಕ್ತಿ ತೋರಿಸಿರುವುದು ಗಮನಾರ್ಹ.
ಪ್ರಸ್ತುತ ವಿಶ್ವದ ಇತರ ರಾಷ್ಟ್ರಗಳು ಏನೆಲ್ಲಾ ಯೋಜನೆಗಳಿಗೆ ಅಮೇರಿಕದ ಬೆನ್ನು ಬೀಳುತ್ತಿದ್ದವು. ಆದರೆ, ‘ಜಾಗತಿಕ ವಿದ್ಯುತ್ ಗ್ರಿಡ್’ ವಿಶೇಷ ಯೋಜನೆಗೆ ಅಮೇರಿಕಾ ಆಸಕ್ತಿ ವಹಿಸಿರುವುದು ತಜ್ಞರ ಗಮನ ಸೆಳೆದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ನಗರದ ಜನತೆಗೆ ಕುಡಿಯುವ ನೀರಿನ ಸೌಲಭ್ಯದಲ್ಲಿ ಯಾವುದೇ ವ್ಯತ್ಯಯವಾಗಬಾರದು- ಎಸ್.ಎನ್.ಚನ್ನಬಸಪ್ಪ

S.N. Channabasappa ಕುಡಿಯುವ ನೀರಿನ ಪಂಪ್ ಹೌಸ್‌ಗೆ ಶಾಸಕ ಎಸ್.ಎನ್. ಚನ್ನಬಸಪ್ಪ...

Klive Special Article ಶ್ರೀಬಿಷ್ಟಪ್ಪಯ್ಯನವರು

ಲೇ: ಪ್ರಸಾದ್ ಶ್ರೀವತ್ಸ. Klive Special Article ಭಾರತವೆಂದರೆ ಅದು ಕೇವಲ ದೇಶವಲ್ಲ ಅದೆಷ್ಟೋ...

B.Y. Vijayendra ದಾವಣಗೆರೆ ಚುನಾವಣೆ: ಬಿಜೆಪಿ ಅಭ್ಯರ್ಥಿಗೇ ಗೆಲುವು- ಬಿ.ವೈ.ವಿಜಯೇಂದ್ರ.

B.Y. Vijayendra  ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾಧ್ಯಮ ಮಿತ್ರರೊಂದಿಗೆ...

Drinking water supply ಗಮನಿಸಿ!.ಏಪ್ರಿಲ್ 4 & 5 ರಂದುಶಿವಮೊಗ್ಗ ನಗರದಲ್ಲಿ ಹಲವೆಡೆ ನೀರು ಸರಬರಾಜು ವ್ಯತ್ಯಯ.

Drinking water supply ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ವಿದ್ಯುತ್ ಸರಬರಾಜು ಮಾಡುವ...