Monday, March 17, 2025
Monday, March 17, 2025

ಮಾಲಿನ್ಯಯುಕ್ತ ದೆಹಲಿ, ಕೋವಿಡ್ ಆತಂಕದಲ್ಲಿ

Date:

ದೀಪಾವಳಿ ಹಿನ್ನೆಲೆಯಲ್ಲಿ, ದೇಶದ ಹಲವು ನಗರಗಳಲ್ಲಿ ಮಿತಿಮೀರಿದ ವಾಯು ಮಾಲಿನ್ಯದಿಂದ ಕೋವಿಡ್ ಸಂಖ್ಯೆ ಹೆಚ್ಚಳವಾಗುವ ಕಾರಣದ ಬಗ್ಗೆ ವೈದ್ಯರು ಎಚ್ಚರಿಕೆಯನ್ನು ನೀಡಿದ್ದಾರೆ.

ಚಳಿಗಾಲ, ವಿಷಗಾಳಿ ಮತ್ತು ಕೋರೋನಾ ಬಾಧೆಗಳಿಂದ ದೇಶದಾದ್ಯಂತ ಶ್ವಾಸ ಸಂಬಂಧಿತ ಸಮಸ್ಯೆಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುವ ಆತಂಕವನ್ನು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ವ್ಯಕ್ತಪಡಿಸಿದ್ದಾರೆ.
“ಹಲವು ಜನರಲ್ಲಿ ಅಲರ್ಜಿಯ ಕೆಮ್ಮು, ಅಸ್ತಮಾ, ಸಿ.ಓ.ಪಿ.ಡಿ ಮತ್ತು ಇತರ ಶ್ವಾಸಕೋಶ ಸಂಬಂಧಿತ ಅನಾರೋಗ್ಯಗಳು ಗೌಪ್ಯವಾಗಿರುತ್ತದೆ. ಹೊರಗಿನ ವಾತಾವರಣದ ಪ್ರೇರಣೆ ಮೇಲೆ ಸಮಸ್ಯೆಗಳು ಉದ್ಭವಿಸಿ ಕೊಂಡು ಜನರನ್ನು ಬಾಧಿಸಲಾರಂಭಿಸುತ್ತದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ನೈಜುಲೇಜರ್ ಅಥವಾ ಇನ್ಹೇಲರ್ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ರೀತಿ ದುರ್ಬಲ ಶ್ವಾಸಕೋಶ ಹೊಂದಿರುವವರಿಗೆ ಕೋರೋನಾ ಸೋಂಕು ತಗಲಿ ಮರಣ ಹೊಂದುವ ಅಪಾಯ ಹೆಚ್ಚಿದೆ” ಎಂದು ಗುಲೇರಿಯಾ ತಿಳಿಸಿದ್ದಾರೆ.

ದಿಲ್ಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ವಾಯುಮಾಲಿನ್ಯ ಮಿತಿಮೀರಿದ ಸಂದರ್ಭದಲ್ಲಿ, ಮೊದಲಿಗೆ ಮಕ್ಕಳು ತೊಂದರೆಗೊಳಗಾಗುತ್ತಾರೆ. ಚಿಕಿತ್ಸೆ ವಾರ್ಡಗಳಿಗೆ ಹೆಚ್ಚು ಪ್ರಮಾಣದಲ್ಲಿ ಮಕ್ಕಳು ಉಸಿರಾಟ ಸಮಸ್ಯೆ, ದೀರ್ಘಕಾಲದ ಶೀತ -ಕೆಮ್ಮು ಸಮಸ್ಯೆಗಳಿಂದಾಗಿ ದಾಖಲಾಗುತ್ತಾರೆ. ಹೀಗಾಗಿ ಮಕ್ಕಳು ಹೆಚ್ಚು ಜಾಗೃತರಾಗಿರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬೆಳಿಗ್ಗಿನ ವೇಳೆಯಲ್ಲಿ ವಾಹನದ ಓಡಾಟ ಹೆಚ್ಚಾಗಿರುವ ಕಾರಣ ಜನರ ಓಡಾಟ ಕಡಿಮೆಗೊಳಿಸುವುದು ಉತ್ತಮ ಎಂದು ಗುಲೇರಿಯಾ ಅವರು ಸುದ್ದಿ ಸಂಸ್ಥೆಯೊಂದರ ಸಂದರ್ಶನದಲ್ಲಿ ತಿಳಿಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kumsi MESCOM ಕುಂಸಿ ಮೆಸ್ಕಾಂ ಕಛೇರಿಯಲ್ಲಿ ಮಾರ್ಚ್ 18. ಜನಸಂಪರ್ಕ ಸಭೆ

Kumsi MESCOM ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ.18 ರಂದು ಬೆಳಿಗ್ಗೆ...

Karnataka Legislative Council ಇಡೀ ರಾಷ್ಟ್ರವೇ ಮೆಚ್ಚುವ ‌ಕಾನೂನು ಶಿಕ್ಷಣ ಸಿಗಲಿ- ಮಾಜಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ

Karnataka Legislative Council ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು...

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ...

Senior Chamber International Organization ಪುಷ್ಪ ಎಸ್ ಶೆಟ್ಟಿಅವರಿಗೆ ‌ಸೀನಿಯರ್ ಚೇಂಬರ್ ಉನ್ನತ ಪ್ರಶಸ್ತಿ

Senior Chamber International Organization ಬ್ರಹ್ಮಾವರದಲ್ಲಿ ನಡೆದ ಸೀನಿಯರ್ ಚೇಂಬರ್ ಇಂಟರ್...