Saturday, December 6, 2025
Saturday, December 6, 2025

ಡಿ:12 ರೈಲ್ವೆ ‘ರಾಮಾಯಣ ಯಾತ್ರೆ’

Date:

ದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಆರಂಭಿಸಿರುವ ‘ರಾಮಾಯಣ ಯಾತ್ರೆ’ಗೆ ವಿಧ್ಯುಕ್ತ ಚಾಲನೆ ನೀಡಲಾಗಿದೆ. ದಿಲ್ಲಿಯ
ಸಫ್ದರ್ ಜಂಗ್ ನಿಲ್ದಾಣದಿಂದ ಸಂಜೆ 6:30ಕ್ಕೆ ಪ್ರಯಾಣ ಆರಂಭಿಸಿದ ಐಷಾರಾಮಿ ಹವಾನಿಯಂತ್ರಿತ ರೈಲು, 17 ದಿನಗಳ ಬಳಿಕ ಸಫ್ದರ್ ಜಂಗ್ ನಿಲ್ದಾಣಕ್ಕೆ ಮರಳಲಿದೆ. ಉತ್ತರ ಪ್ರದೇಶದ ಅಯೋಧ್ಯೆ ಯಲ್ಲಿ ರೈಲು ಮೊದಲ ನಿಲುಗಡೆ ಹೊಂದಿದೆ. ‘ದೇಖೋ ಅಪ್ನಾ ದೇಶ್’ (ನಮ್ಮ ದೇಶ ನೋಡಿ) ಅಭಿಯಾನದ ಅಡಿಯಲ್ಲಿ ಐಆರ್ ಸಿಟಿಯು ಈ ಪ್ಯಾಕೇಜ್ ಯಾತ್ರೆ ಆರಂಭಿಸಿದೆ.
ಹವಾನಿಯಂತ್ರಿತ ರೈಲಿನಲ್ಲಿ ‘ರಾಮಾಯಣ ಯಾತ್ರೆ’ ಕೈಗೊಳ್ಳುವ ಪ್ರಯಾಣಿಕರು ಕೊರೊನಾ ನಿರೋಧಕ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಂಡಿರಬೇಕು. 18 ವರ್ಷ ಮೇಲ್ಪಟ್ಟವರು ಮಾತ್ರ ಪ್ರಯಾಣ ಕೈಗೊಳ್ಳಬಹುದು ಎಂಬ ನಿಯಮಗಳನ್ನು ವಿಧಿಸಲಾಗಿದೆ.
ಎರಡು ಅತ್ಯಾಧುನಿಕ ರೆಸ್ಟೋರೆಂಟ್ ಗಳನ್ನು ರೈಲು ಹೊಂದಿದೆ. ಅಯೋಧ್ಯೆ, ಜನಕಪುರ, ಸೀತಾಮಂಡಿ, ಕಾಶಿ, ಪ್ರಯಾಗ್ ರಾಜ್, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರ ಸೇರಿದಂತೆ ಶ್ರೀರಾಮನಿಗೆ ಸಂಬಂಧಿಸಿದ ಪ್ರಮುಖ ಕ್ಷೇತ್ರಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಎರಡನೆಯ ಸಂಚಾರವು ಡಿಸೆಂಬರ್ 12 ರಿಂದ ಆರಂಭವಾಗಲಿದೆ. ಅಯೋಧ್ಯೆಯು ಈ ಯಾತ್ರೆಯ ಮೊದಲ ಕ್ಷೇತ್ರವಾದರೆ, ರಾಮೇಶ್ವರ ಕೊನೆಯ ಕ್ಷೇತ್ರವಾಗಿದೆ ಎಂಬ ಮಾಹಿತಿ ದೊರೆತಿದೆ.
ರೈಲ್ವೆ ಇಲಾಖೆ ತಿಳಿಸಿರುವ ಪ್ರಯಾಣ ದರ ಹೀಗಿದೆ – ಪ್ರತಿ ಪ್ರಯಾಣಿಕರಿಗೆ
82,950ರೂ. -2ಎಸಿ.
1,02,095ರೂ.- 1ಎಸಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...